ಮೂತ್ರ ಪಿಂಡ ಕೊಡುವೆ, ನೂರ್ಕಾಲ ಬಾಳಲಿ: ಸುಷ್ಮಾ ಕಷ್ಟಕ್ಕೆ ಸ್ಪಂದಿಸಲು ಸಾಲುಗಟ್ಟಿದ್ದರು ಜನರು

ಭೋಪಾಲ್‌: ಜನಸಾಮಾನ್ಯರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಕಷ್ಟಕ್ಕೆ ಸ್ಪಂದಿಸಲು ಜನರೂ ಹಾತೊರೆಯುತ್ತಿದ್ದರು. 2016ರಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಸುಷ್ಮಾ ಸ್ವರಾಜ್‌ ಅವರಿಗೆ ತಮ್ಮ ಮೂತ್ರಪಿಂಡವನ್ನು ದಾನ ಮಾಡಲು ಹತ್ತಾರು ಮಂದಿ ಮುಂದೆ ಬಂದಿದ್ದರು. ತಮ್ಮ ಅನಾರೋಗ್ಯದ ಬಗ್ಗೆ ಸುಷ್ಮಾ ಟ್ವೀಟ್‌ ಮಾಡುತ್ತಿದ್ದಂತೆ ರಾಹುಲ್‌ ವರ್ಮಾ ಎಂಬವರು ತಮ್ಮ ಮೂತ್ರಪಿಂಡ ದಾನ ಮಾಡಲು ಮುಂದೆ ಬಂದಿದ್ದರು. ಈಗ ಈ ಸಾಲಿಗೆ ಭೋಪಾಲನ್‌ ಟ್ರಾಫಿಕ್‌ ಪೊಲೀಸ್‌ ಗೌರವ್‌ ಸಿಂಗ್‌ ಡಾಂಗಿ ತಮ್ಮ ಒಂದು ಮೂತ್ರಪಿಂಡ ದಾನ ಮಾಡುವುದಾಗಿ ಘೋಷಿಸಿದ್ದರು. ಮಧ್ಯಪ್ರದೇಶದ ಭೋಪಾಲ್ನಲ್ಲಿ ಟ್ರಾಫಿಕ್‌ ಪೊಲೀಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿರುವ 26 ವರ್ಷದ ಗೌರವ್‌ ಸಿಂಗ್‌ ಡಾಂಗಿ ಎಂಬವರು ಸಚಿವೆಗೆ ತಮ್ಮ ಒಂದು ಮೂತ್ರಪಿಂಡ ದಾನ ಮಾಡುವುದಾಗಿ ಹೇಳಿದ್ದರು. '' ವಿದೇಶಾಂಗ ಸಚಿವೆಯಾಗಿ ಸುಷ್ಮಾಜಿ ಮಾಡುತ್ತಿರುವ ಕೆಲಸದಿಂದ ನಾನು ಪ್ರಭಾವಿತನಾಗಿದ್ದೇನೆ. ಅಂತಹ ನಾಯಕರು ನೂರ್ಕಾಲ ಬಾಳಬೇಕು ಎಂಬುದು ನನ್ನ ಇಚ್ಛೆ ,'' ಎಂದು ಡಾಂಗಿ ಹೇಳಿದ್ದರು.


from India & World News in Kannada | VK Polls https://ift.tt/2MOA8Y9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...