ಶಶಿಧರ್ ಎಸ್.ದೋಣಿಹಕ್ಲು ತುಮಕೂರು ಬೆಂಗಳೂರು: ಪ್ರಿಪೇಯ್ಡ್ ವಿದ್ಯುತ್ ಅಳವಡಿಕೆಗೆ ಅತಿ ದೊಡ್ಡ ವಿರೋಧ ಕೇಳಿಬಂದಿರುವುದು ವಲಯದಿಂದ. ಈಗಾಗಲೇ ರಾಜ್ಯಾದ್ಯಂತ ರೈತ ಪರ ಸಂಘಟನೆಗಳು ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ಸಂಚು ನಡೆಯುತ್ತಿದೆ ಎಂದು ಆರೋಪಿಸಿ ದೊಡ್ಡ ಮಟ್ಟದ ಹೋರಾಟ ಸಂಘಟಿಸಿವೆ. ಹೊಸ ವಿದ್ಯುತ್ ನೀತಿಯನ್ನು ಖಾಸಗೀಕರಣದ ಮೆಟ್ಟಿಲಾಗಿ ಬಳಸಿಕೊಳ್ಳಲಾಗುತ್ತಿದೆ. ಕೃಷಿ ಉದ್ದೇಶದ ಪಂಪ್ಸೆಟ್ಗಳಿಗೆ ಸದ್ಯಕ್ಕೆ ಮೀಟರ್ ಇಲ್ಲ. ಇನ್ನು ಪ್ರಿಪೇಯ್ಡ್ ವ್ಯವಸ್ಥೆ ಬಂದರೆ ಅದಕ್ಕೂ ಮೀಟರ್ ಅಳವಡಿಸಬಹುದು. ಆ ಮೂಲಕ ದುಬಾರಿ ದರ ತೆರಬೇಕಾದೀತು ಎನ್ನುವುದು ಕೃಷಿಕರ ಪ್ರಧಾನ ಆತಂಕ. ಈ ಕಲ್ಪನೆಯೇ ಅವೈಜ್ಞಾನಿಕ ಕೃಷಿ ವಿಚಾರದಲ್ಲಿ ಪ್ರೀಪೈಯ್ಡ್ ಕಲ್ಪನೆಯೇ ಅವೈಜ್ಞಾನಿಕ. ರೈತರು ಮುಂಚಿತವಾಗಿ ಇಂತಿಷ್ಟೇ ವಿದ್ಯುತ್ ಬೇಕೆಂದು ರಿಚಾರ್ಜ್ ಮಾಡಿಕೊಳ್ಳುವುದು ಕಷ್ಟ ಸಾಧ್ಯ. ಜತೆಗೆ ಗ್ರಾಮೀಣ ಭಾಗದಲ್ಲಿ ತಕ್ಷಣ ರಿಚಾರ್ಜ್ ಮಾಡಿಸಿಕೊಳ್ಳಲು ಇಂಟರ್ನೆಟ್ ವ್ಯವಸ್ಥೆಯೂ ಸಮರ್ಪಕವಾಗಿರುವುದಿಲ್ಲ ಎಂಬುದನ್ನು ಕೂಡ ಗಮನಿಸಬೇಕು. ರಾಜ್ಯದಲ್ಲಿ 33 ಲಕ್ಷ ಕುಟುಂಬಗಳು ಅಂದರೆ ಶೇ. 50ರಷ್ಟು ಮಂದಿ ಕೃಷಿಗೆ ಪಂಪ್ಸೆಟ್ ಬಳಸುತ್ತಿದ್ದಾರೆ. ಒಂದು ವೇಳೆ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ಮಾಡಿದರೆ ಇವರಲ್ಲಿ ಹೆಚ್ಚಿನವರು ಕೃಷಿ ಚಟುವಟಿಕೆಯಿಂದಲೇ ವಿಮುಖಗೊಳ್ಳುವ ಪರಿಸ್ಥಿತಿ ಬರಬಹುದು. ರಾಜ್ಯದಲ್ಲಿ ಈಗಲೇ ಸರಿಸುಮಾರು 20 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಡಿಲು ಬಿದ್ದಿದೆ. ಕೊರೊನಾ ಲಾಕ್ಡೌನ್ಬಳಿಕ ಯುವಕರು ಕೃಷಿ ಚಟುವಟಿಕೆಯತ್ತ ಮುಖಮಾಡಿದ್ದರು. ಸರಕಾರದ ಹೊಸ ಚಿಂತನೆಗಳು ಅವರಿಗೆ ಹೊಡೆತ ನೀಡುವ ಅಪಾಯವಿದೆ. ರೈತರ ಆತಂಕಗಳೇನು?
- ಈಗ ಉಚಿತವಾಗಿ ಸಿಗುವ ಗೆ ಇನ್ನು ದುಬಾರಿ ದರ ತೆರಬೇಕಾಗಿ ಬರಬಹುದು.
- ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಿದರೆ ತ್ರೀ ಫೇಸ್ ಕರೆಂಟ್ ಬರದಿದ್ದರೆ ಏನು ಮಾಡುವುದು?
- ಖಾಸಗಿಯವರೇ ವಿದ್ಯುತ್ ನಿರ್ವಹಣೆ ಮಾಡಿದರೆ ವಿನಾಯಿತಿಯನ್ನೇ ನೀಡದಿದ್ದರೆ ಏನು ಮಾಡುವುದು?
- ಇಂಟರ್ನೆಟ್ ಸೌಲಭ್ಯವಿಲ್ಲದ ಗ್ರಾಮೀಣ ಭಾಗದಲ್ಲಿ ರಿಚಾರ್ಜ್ ಮಾಡುವುದಕ್ಕೂ ಪರದಾಡಬೇಕು.
from India & World News in Kannada | VK Polls https://ift.tt/3865mTW