ಯಾವುದೇ ಬ್ಯಾಟ್ಸ್‌ಮನ್‌ ಔಟ್‌ ಮಾಡುವ ತಾಕತ್ತು ಈತನಿಗಿದೆ ಎಂದ ಕೊಹ್ಲಿ!

ಲೀಡ್ಸ್‌ (ಇಂಗ್ಲೆಂಡ್): ಭಾರತ ಟೆಸ್ಟ್‌ ತಂಡದಲ್ಲಿ ಸ್ಥಿರ ಪ್ರದರ್ಶನ ತೋರುತ್ತಿರುವ ಯುವ ವೇಗಿ ಅವರನ್ನು ಗುಣಗಾನ ಮಾಡಿದ ನಾಯಕ , ಪಂದ್ಯದ ಯಾವುದೇ ಸನ್ನಿವೇಶದಲ್ಲಿ ಯಾವುದೇ ಬ್ಯಾಟ್ಸ್‌ಮನ್‌ ಅನ್ನು ಔಟ್‌ ಮಾಡುವ ವಿಶ್ವಾಸ ಈತನಲ್ಲಿದೆ ಎಂದು ಹೇಳಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಹೈದರಾಬಾದ್‌ ಮೂಲದ ಸಿರಾಜ್‌, ಇದುವರೆಗೂ ಆಡಿರುವ 7 ಪಂದ್ಯಗಳಿಂದ ಒಟ್ಟು 27 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಭಾರತ ತಂಡದ ಹಿರಿಯ ವೇಗಿಗಳಾದ ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮಾ ಹಾಗೂ ಜಸ್‌ಪ್ರಿತ್‌ ಬುಮ್ರಾ ಅವರಿಗೆ ಆರೋಗ್ಯಕರ ಸ್ಪರ್ಧೆಯನ್ನು ನೀಡುತ್ತಿದ್ದಾರೆ. ಇನ್ನು ವಿರುದ್ಧ ಪ್ರಸ್ತುತ ನಡೆಯುತ್ತಿರು ಟೆಸ್ಟ್‌ ಸರಣಿಯ ಆರಂಭಿಕ ಎರಡು ಪಂದ್ಯಗಳಿಂದ ಸಿರಾಜ್‌ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಜಸ್‌ಪ್ರಿತ್‌ ಬುಮ್ರಾ 12 ವಿಕೆಟ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯದ ನಿಮಿತ್ತ ಮಂಗಳವಾರ ವರ್ಚುವಲ್‌ ಸುದ್ದಿಗೋಷ್ಠಿ ನಡೆಸಿದ್ದ ವಿರಾಟ್‌ ಕೊಹ್ಲಿ, ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಿಂದ ಮೊಹಮ್ಮದ್‌ ಸಿರಾಜ್‌ ತಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಮೊಹಮ್ಮದ್‌ ಸಿರಾಜ್‌ ಬೆಳೆಯುತ್ತಿರುವ ವಿಷಯದಲ್ಲಿ ನನಗೆ ಅಚ್ಚರಿ ಇಲ್ಲ. ಏಕೆಂದರೆ, ಅವರನ್ನು ನಾನು ಬಹಳಾ ಹತ್ತಿರದಿಂದ ನೋಡಿದ್ದೇನೆ. ಯಾವಾಗಲೂ ಅತ್ಯುತ್ತಮ ಕೌಶಲ ಹೊಂದಿರುವ ಆಟಗಾರ ಈತ. ಆದರೆ, ಈತನ ಕೌಶಲದ ಬಗ್ಗೆ ನಾವೆಲ್ಲಾ ಬೆಂಬಲಿಸಬೇಕಾದ ಅಗತ್ಯವಿದೆ. ಅಂದಹಾಗೆ, ಆಸ್ಟ್ರೇಲಿಯಾ ಸರಣಿಯಿಂದಲೇ ಸಿರಾಜ್‌ ಹೆಚ್ಚಿನ ವಿಶ್ವಾಸವನ್ನು ಗಳಿಸಿದ್ದಾರೆ," ಎಂದು ಕೊಹ್ಲಿ ಶ್ಲಾಘಿಸಿದ್ದಾರೆ. "ಪಂದ್ಯದ ಯಾವುದೇ ಸನ್ನಿವೇಶದಲ್ಲಿ, ಯಾವುದೇ ಬ್ಯಾಟ್ಸ್‌ಮನ್‌ ಔಟ್‌ ಮಾಡಬಲ್ಲ ವಿಶ್ವಾಸವನ್ನು ಸಿರಾಜ್‌ ಹೊಂದಿದ್ದಾರೆ. ತನ್ನ ಕೌಶಲ ಹಾಗೂ ಸಾಮರ್ಥ್ಯದ ಮೇಲೆ ಆತನಿಗೆ ಅಪಾರವಾದ ನಂಬಿಕೆ ಇದೆ. ಪ್ರಸ್ತುತ ಸಿರಾಜ್‌ ಏನು ಮಾಡುತ್ತಿದ್ದೇನೆಂಬ ಬಗ್ಗೆ ಆತನ ಫಲಿತಾಂಶವೇ ಹೇಳುತ್ತಿದೆ," ಎಂದು ಟೀಮ್ ಇಂಡಿಯಾ ನಾಯಕ ವಿವರಿಸಿದ್ದಾರೆ. ಮೊಹಮ್ಮದ್‌ ಸಿರಾಜ್‌ ಅವರ ಲೈನ್‌ ಅಂಡ್‌ ಲೆನ್ತ್‌ ಹಾಗೂ ನಿಯಂತ್ರಣವು ತವರು ಬ್ಯಾಟ್ಸ್‌ಮನ್‌ಗಳನ್ನು ಸ್ಥಿರವಾಗಿ ತೊಂದರೆಗೆ ನೂಕುತ್ತಿದೆ. "ತಮ್ಮದೇ ವೈಯಕ್ತಿಕ ಶೈಲಿಯಲ್ಲಿ ಸಿರಾಜ್‌ ಮೂಡಿಬರುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ. ಎದುರಾಳಿ ಯಾವುದೇ ಬ್ಯಾಟ್ಸ್‌ಮನ್‌ ಇರಲಿ, ಅವರಿಗೆ ತಮ್ಮದೇ ಶೈಲಿಯಲ್ಲಿ ಚಳ್ಳೆ ಹಣ್ಣು ತಿನ್ನಿಸುವ ಸಾಮರ್ಥ್ಯ ಸಿರಾಜ್‌ಗಿದೆ," ಎಂದು ವಿರಾಟ್‌ ಕೊಹ್ಲಿ ಸಹ ಆಟಗಾರನನ್ನು ಗುಣಗಾನ ಮಾಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3ms5PZ3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...