ನಾನು ಎಂದೂ ಕೂಡ ಎಚ್‌ಡಿ ದೇವೇಗೌಡರ ವಿರುದ್ಧ ಮಾತನಾಡಿಲ್ಲ; ಶಾಸಕ ಪ್ರೀತಂ ಜೆ.ಗೌಡ

ಹಾಸನ: ನಾನು ಎಂದೂ ಕೂಡ ಎಚ್‌.ಡಿ.ದೇವೇಗೌಡರ ವಿರುದ್ಧ ಮಾತನಾಡಿಲ್ಲ. ನಾನು ನಮ್ಮ ಮುಖ್ಯಮಂತ್ರಿ ಬಗ್ಗೆ ಮಾತ್ರ ಮಾತನಾಡಿದೆ. ಹಾಗಾಗಿ ದೇವೇಗೌಡರು ಪ್ರೀತಂ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದು ದಿಲ್ಲಿಯಲ್ಲಿ ಹೇಳಿದ್ದು ಸರಿ ಇದೆ ಎಂದು ಶಾಸಕ ಪ್ರತಿಕ್ರಿಯಿಸಿದರು. ನಾನು ಫಸ್ಟ್‌ ಟೈಂ ಶಾಸಕ. ಬೇರೆಯವರ ಬಗ್ಗೆ ಮಾತನಾಡೋವಷ್ಟು ದೊಡ್ಡವನಾಗಿಲ್ಲ. ನನ್ನ ಕ್ಷೇತ್ರಕ್ಕೆ ಸೀಮಿತವಾಗಿ ಆಲೋಚನೆ ಮಾಡ್ತಿದ್ದೀನಿ ಎಂದು ಸುದ್ದಿಗಾರರಿಗೆ ಹೇಳಿದರು. ಮೈಸೂರು ಭಾಗಕ್ಕೆ ಮಂತ್ರಿ ಕೊಡಬೇಕು ಅನ್ನೋದು ಕಾರ್ಯಕರ್ತರ ಭಾವನೆ. ಅದನ್ನು ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರು, ಪಕ್ಷದ ಹಿರಿಯರು ತೀರ್ಮಾನ ಮಾಡ್ತಾರೆ. ಯಾರಿಗೆ ಯೋಗ್ಯತೆ, ಅರ್ಹತೆ ಇದೆ ಅಂತ ಅವರೇ ತೀರ್ಮಾನ ಮಾಡ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇನ್ನು ಎರಡನೇ ಬಾರಿ ನರೇಂದ್ರಮೋದಿ ಪ್ರಧಾನಿ ಆಗಿದ್ದಾರೆ. ಅವರ ನೇತೃತ್ವದಲ್ಲಿ ಭಾರತ ಸುರಕ್ಷಿತವಾಗಿದೆ. 130 ಕೋಟಿ ಜನ ಧೈರ್ಯವಾಗಿ, ಸಂತೃಪ್ತರಾಗಿದ್ದಾರೆ. ಇಂತಹ ನಾಯಕತ್ವದಿಂದ ಭಾರತ ಎಂದೂ ಕೂಡ ಆಫ್ಘಾನ್‌ ಆಗೋದಿಲ್ಲ. ಆದ್ರೆ ಬೇರೆಯವರ ಕೈಲಿದ್ರೆ ನಮ್ಮದು ಆಫ್ಘಾನಿಸ್ತಾನ ಆಗ್ಬಹುದಿತ್ತೇನೋ ಅನ್ನೊ ಆತಂಕ ಅವರಲ್ಲಿತ್ತು. ಆ ಆತಂಕ ದೂರ ಆಗಿದೆ ಎಂದು ಹೇಳಿದರು.


from India & World News in Kannada | VK Polls https://ift.tt/2W4LzSg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...