ಲಕ್ನೋ: ಬಿಎಸ್ಪಿ ಸಂಸದ ಅತುಲ್ ರೈ ವಿರುದ್ಧ ಆರೋಪ ಮಾಡಿದ್ದ ಪೂರ್ವ ಉತ್ತರ ಪ್ರದೇಶದ ಮಹಿಳೆ, ದಿಲ್ಲಿ ಆಸ್ಪತ್ರೆಯೊಂದರಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ತಮಗೆ ನ್ಯಾಯ ಸಿಗುತ್ತಿಲ್ಲ ಎಂಬ ಬೇಸರದಲ್ಲಿ 24 ವರ್ಷದ ಹಾಗೂ ಆಕೆಯ ಸ್ನೇಹಿತ ಇಬ್ಬರೂ ದ್ವಾರದ ಬಳಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ತೀವ್ರ ಸುಟ್ಟಗಾಯಗಳಿಂದ ನರಳುತ್ತಿದ್ದ ಆಕೆಯ ಸ್ನೇಹಿತ ಶನಿವಾರ ಮೃತಪಟ್ಟಿದ್ದರು. ಮಹಿಳೆ ದೇಹ ಬೆಂಕಿಯ ಜ್ವಾಲೆಗಳಿಂದ ಶೇ 85ರಷ್ಟು ಸುಟ್ಟು ಹೋಗಿತ್ತು. 27 ವರ್ಷದ ಆಕೆಯ ಸ್ನೇಹಿತನ ದೇಹ ಶೇ 65ರಷ್ಟು ಸುಟ್ಟಿತ್ತು. ಇಬ್ಬರನ್ನೂ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉತ್ತರ ಪ್ರದೇಶದ ಘೋಸಿ ಕ್ಷೇತ್ರದ ಬಿಎಸ್ಪಿ ಸಂಸದ ಅತುಲ್ ರೈ 2019ರ ಮೇ ತಿಂಗಳಲ್ಲಿ ವಾರಣಾಸಿಯ ತನ್ನ ಮನೆಯಲ್ಲಿ ಅತ್ಯಾಚಾರ ಮಾಡಿದ್ದಾಗಿ ವಾರಣಾಸಿ ಪೊಲೀಸರಿಗೆ ಮಹಿಳೆ ದೂರು ನೀಡಿದ್ದರು. ಒಂದು ತಿಂಗಳ ಬಳಿಕ ಅತುಲ್ ಶರಣಾಗಿದ್ದರು. ಅಲ್ಲಿಂದ ಅವರು ಜೈಲಿನಲ್ಲಿ ಇದ್ದಾರೆ. 2020ರ ನವೆಂಬರ್ನಲ್ಲಿ ಅತುಲ್ ರೈ ಸಹೋದರ, ಮಹಿಳೆ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಆಕೆಯನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ವರದಿ ಸಲ್ಲಿಸಿದ್ದ ಬಳಿಕ ಆಗಸ್ಟ್ ಆರಂಭದಲ್ಲಿ ನ್ಯಾಯಾಲಯ ಜಾಮೀನುರಹಿತ ವಾರಂಟ್ ಹೊರಡಿಸಿತ್ತು. ಆಗಸ್ಟ್ 16ರಂದು ದಿಲ್ಲಿಗೆ ಪ್ರಯಾಣಿಸಿದ್ದ ಮಹಿಳೆ ಹಾಗೂ ಆಕೆಯ ಸ್ನೇಹಿತ, ಫೇಸ್ಬುಕ್ ಲೈವ್ ವಿಡಿಯೋ ಮಾಡಿದ್ದರು. ಸಂಸದ ಹಾಗೂ ಆತನ ಸಂಬಂಧಿಕರ ಜತೆಗೆ ಪೊಲೀಸರು ಶಾಮೀಲಾಗಿದ್ದಾರೆ. ತಮಗೆ ನ್ಯಾಯ ಸಿಗುವ ನಿರೀಕ್ಷೆಯಿಲ್ಲ ಎಂದು ಇಬ್ಬರೂ ಹೇಳಿಕೊಂಡಿದ್ದರು. ಬಳಿಕ ಬೆಂಕಿ ಹಚ್ಚಿಕೊಂಡಿದ್ದರು.
from India & World News in Kannada | VK Polls https://ift.tt/3Dilu36