ಉಗ್ರರಿಗೆ ಆತಿಥ್ಯ: ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಹರಿಹಾಯ್ದ ಭಾರತ

ವಿಶ್ವಸಂಸ್ಥೆ: ಅಫ್ಘಾನಿಸ್ತಾನವನ್ನು ತನ್ನ ಹಿಡಿತಕ್ಕೆ ಪಡೆದುಕೊಂಡ ಬಳಿಕ ಅದು ಭಾರತದ ವಿರುದ್ಧದ ಉಗ್ರರ ಚಟುವಟಿಕೆಗಳಿಗೆ ನೆಲೆಯಾಗುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ಸಚಿವ ಕಳವಳ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಮೂಲದ ಲಷ್ಕರ್ ಎ ತಯಬಾ ಮತ್ತು ಜೈಷ್ ಎ ಮೊಹಮ್ಮದ್‌ನಂತಹ, ಈ ಪ್ರದೇಶದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳಿಗೆ ತಾಲಿಬಾನ್ ನಿಯಂತ್ರಣವು ಮತ್ತಷ್ಟು ಅನುಕೂಲ ಕಲ್ಪಿಸಿವೆ. ಅವು ತಮಗೆ ಸಿಗುತ್ತಿರುವ ಆತಿಥ್ಯವನ್ನು ಮತ್ತಷ್ಟು ಆನಂದಿಸಲಿವೆ ಎಂದು ಉಗ್ರರಿಗೆ ನೆಲೆಯಾಗಿರುವ ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ. ಭಯೋತ್ಪಾದಕರ ಕೃತ್ಯಗಳಿಂದ ಎದುರಾಗಿರುವ ಬೆದರಿಕೆಗಳ ಕುರಿತಾಗಿ ಭದ್ರತಾ ಮಂಡಳಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್. ಜೈಶಂಕರ್, ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆ ಉಗ್ರರಿಗೆ ಅನುಕೂಲಕರವಾಗಿದೆ. ತನ್ನ ಗಡಿಯಲ್ಲಿನ ಉಗ್ರರ ಸುರಕ್ಷಿತ ಸ್ವರ್ಗಗಳು ಹಾಗೂ ನೆಲೆಗಳ ವಿರುದ್ಧದ ಮುಂದುವರಿದ ಹೋರಾಟ ಹಾಗೂ ಅಫ್ಘನ್ ಬೆಳವಣಿಗೆಗಳ ಕುರಿತು ಭದ್ರತಾ ಮಂಡಳಿ ಅನುಕೂಲಸಿಂಧು ದೃಷ್ಟಿಕೋನ ಹೊಂದಬಾರದು ಎಂದು ಒತ್ತಾಯಿಸಿದ್ದಾರೆ. 'ನಮ್ಮ ಪಕ್ಕದ ದೇಶದಲ್ಲಿಯೇ ಐಎಸ್‌ಐಎಲ್-ಖೋರಾಸನ್ ಹೆಚ್ಚು ಶಕ್ತಿಯುತವಾಗಿದೆ ಮತ್ತು ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಘಟನೆಗಳು ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಭದ್ರತೆ ಮೇಲಿನ ಅಪಾಯಗಳ ಕುರಿತಾದ ಜಾಗತಿಕ ಕಳವಳವನ್ನು ಸಹಜವಾಗಿಯೇ ಹೆಚ್ಚಿಸಿದೆ' ಎಂದು ಹೇಳಿದ್ದಾರೆ. 'ಕೋವಿಡ್ ಎಷ್ಟು ಅತ್ಯವೋ, ಭಯೋತ್ಪಾದನೆಯೂ ಅಷ್ಟೇ ಸತ್ಯ. ನಾವೆಲ್ಲರೂ ಸುರಕ್ಷಿತವಾಗಿರುವವರೆಗೆ ಯಾರೂ ಸುರಕ್ಷಿತರಲ್ಲ.. ಆದರೆ ನಮ್ಮ ಸಮಗ್ರ ಪರಿಹಾರಗಳನ್ನು ಕೆಲವು ದೇಶಗಳು ಕಡೆಗಣಿಸುತ್ತಿವೆ' ಎಂದ ಅವರು, 'ತಮ್ಮ ಕೈಗಳಲ್ಲಿ ರಕ್ತ ಅಂಟಿಸಿಕೊಂಡವರತ್ತ ರಾಜ್ಯಾತಿಥ್ಯ ವಿಸ್ತರಣೆಯಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅವರ ಇಬ್ಬಗೆ ನೀತಿಯನ್ನು ನಾವು ಖಂಡಿಸಬೇಕಿದೆ' ಎಂದು ಚೀನಾದತ್ತ ಪರೋಕ್ಷವಾಗಿ ಕಿಡಿಕಾರಿದರು.


from India & World News in Kannada | VK Polls https://ift.tt/3y90HLG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...