ಯಾದಗಿರಿ ಟ್ರಾಜಿಡಿ ಲವ್ ಸ್ಟೋರಿ: ಪ್ರಿಯಕರ ಜೈಲಿಗೆ.. ಅಪ್ರಾಪ್ತ ಪ್ರಿಯತಮೆ ಬಾಲಮಂದಿರಕ್ಕೆ..!

ವಿಕ ವಿಶೇಷ: ಹೆಂಡತಿಯಿದ್ದರೂ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಆಕೆಗೆ ಪುಸಲಾಯಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ ಪ್ರೇಮಿ ಇದೀಗ ಪಾಲಾಗಿದ್ದಾನೆ. ಇನ್ನು ಆತನ ಅಪ್ರಾಪ್ತ ಆಗಿರುವ ಪರಿಣಾಮ ಆಕೆಯೂ ಬಾಲ ಮಂದಿರ ಪಾಲಾಗಿದ್ದಾಳೆ. ಇಬ್ಬರೂ ನಾನೊಂದು ತೀರ, ನೀನೊಂದು ತೀರ ಆಗಿದ್ದಾರೆ. ಇದು ಸುರಪುರ ತಾಲೂಕಿನ ಕೆಂಭಾವಿ ಪೊಲೀಸ್‌ ಠಾಣೆ ವ್ಯಾಪ್ತಿಯ ಖಾನಾಪುರ ಎಸ್‌. ಕೆ. ಗ್ರಾಮದ ಪ್ರೇಮಿಗಳ ಕಥೆಯಾಗಿದೆ. ಸುಮಾರು 33 ವರ್ಷದ ವ್ಯಕ್ತಿಯೊಬ್ಬನಿಗೆ ಮದುವೆ ಆಗಿದೆ. ಮನೆಯಲ್ಲಿ ಹೆಂಡತಿ ಇದ್ದಾಳೆ. ಇದಲ್ಲದೇ ಈ ದಂಪತಿಗೆ ಚಿನ್ನದಂತಹ ಮಗು ಇದೆ. ಆದರೆ ಆತನು ಚಪಲ ಚೆನ್ನಿಗರಾಯ ಆಗಿರುವ ಪರಿಣಾಮ ತಾಳಿ ಕಟ್ಟಿದ ಹೆಂಡತಿಯ ಮೇಲಿನ ವ್ಯಾಮೋಹ ಕಡಿಮೆ ಮಾಡಿಕೊಂಡು ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದಾನೆ. ಇಬ್ಬರೂ ಕೂಡ ಗ್ರಾಮದಿಂದ ಓಡಿ ಹೋಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಇದು ಕುಟುಂಬಸ್ಥರಿಗೆ ಗೊತ್ತಾದ ಪರಿಣಾಮ ಅವರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಅವರನ್ನು ಪತ್ತೆ ಮಾಡುವ ಮೂಲಕ ಪ್ರೇಮಿಗಳನ್ನು ಪೊಲೀಸರು ವಾಪಸ್‌ ಕರೆದುಕೊಂಡು ಬಂದಿದ್ದಾರೆ. ವಾಪಸ್ಸು ಕರೆ ತರುವಾಗ ಕೂಡ ಭಾರಿ ಪ್ರಮಾಣದಲ್ಲಿ ಹೈಡ್ರಾಮ ನಡೆದಿದೆ. ಇದನ್ನು ನೋಡಿ ಪೊಲೀಸರಿಗೂ ಸಹ ಶಾಕ್‌ ಆಗಿದೆ. ಪ್ರೇಮಿ ಬಂಧನ: ಬೆಂಗಳೂರಿನಿಂದ ವಾಪಸ್ಸು ಕರೆದುಕೊಂಡು ಬರುವಾಗ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರ ಪೊಲೀಸ್‌ ಠಾಣೆ ವ್ಯಾಪ್ತಿ ಬರುವ ಪ್ರದೇಶದಲ್ಲಿ ಊಟ ಮಾಡಲು ಪೊಲೀಸರು ವಾಹನ ನಿಲ್ಲಿಸಿದ್ದಾರೆ. ಆದರೆ ಈ ಜೋಡಿ ನಮಗೆ ಹಸಿವು ಇಲ್ಲ. ನೀವು ಹೋಗುವಂತೆ ಹೇಳಿದ್ದಾರೆ. ಪೊಲೀಸರು ಹೋದ ತಕ್ಷಣವೇ ಇಬ್ಬರೂ ವಿಷ ಸೇವಿಸಿದ್ದಾರೆ. ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗಿ ಕೂಗಿದ್ದಾರೆ. ತಕ್ಷಣವೇ ಪೊಲೀಸರು ನೆರವಿಗೆ ಧಾವಿಸುವ ಮೂಲಕ ಅವರನ್ನು ಆಸ್ಪತ್ತೆಗೆ ಸೇರಿಸಿದ್ದಾರೆ. ಹೀಗಾಗಿ ಇಬ್ಬರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದ ಪ್ರೇಮಿಯನ್ನು ಬಂಧಿಸುವ ಮೂಲಕ ನೇರವಾಗಿ ನ್ಯಾಯಾಲಯಕ್ಕೆ ಹಾಜರಿಪಡಿಸಿದ ಪರಿಣಾಮ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇತ್ತ ಅಪ್ರಾಪ್ತ ಬಾಲಕಿಗೆ ವಯಸ್ಸು ಆಗಿಲ್ಲ. ಹೀಗಾಗಿ ಆಕೆಯನ್ನು ಬಾಲಮಂದಿರಕ್ಕೆ ಬಿಡಲಾಗಿದೆ. ಈ ಪ್ರೀತಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದು ಕೂಡ ತಿಳಿಯದಂತಾಗಿದೆ. 'ಬೆಂಗಳೂರಿನಲ್ಲಿ ನೆಲೆಸಿದ್ದ ಪ್ರೇಮಿಗಳನ್ನು ಕರೆದುಕೊಂಡು ಬರುವಾಗ ವಿಷ ಸೇವಿಸಿದ್ದರು. ಕೊಪ್ಪಳ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ತಕ್ಷಣವೇ ಆರೋಪಿಯನ್ನು ಅರೆಸ್ಟ್‌ ಮಾಡಲಾಗಿದೆ. ಇನ್ನು ಅಪ್ರಾಪ್ತ ಬಾಲಕಿಯನ್ನು ಬಾಲ ಮಂದಿರಕ್ಕೆ ಸೇರಿಸಲಾಗಿದೆ' ಎಂದು ಎಸ್ಪಿ ಸಿ. ಬಿ. ವೇದಮೂರ್ತಿ ತಿಳಿಸಿದ್ದಾರೆ. ಬೇರೆ ಬೇರೆ ಜಾತಿ: ಅಪ್ರಾಪ್ತ ಬಾಲಕಿಯ ಜಾತಿ ಬೇರೆಯಿದೆ. ಇನ್ನು ಪ್ರೀತಿಸಿದ ವ್ಯಕ್ತಿಯೂ ಒಂದು ಕೋಮಿಗೆ ಸೇರಿದ್ದಾನೆ. ಈ ಘಟನೆ ಕೇಳಿ ಇಡೀ ಗ್ರಾಮವೇ ಹೌಹಾರಿದ್ದಾರೆ. ಅದರಲ್ಲಿಯೂ ಪಾಲಕರಿಗೆ ಭಾರಿ ಚಿಂತೆಯಾಗಿ ಪರಿಣಮಿಸಿದೆ. ಎಂದೂ ಊರಿನಲ್ಲಿ ಇಂತಹ ಘಟನೆ ಕೂಡ ನಡೆದಿಲ್ಲ. ಆದರೆ ಈಗ ನಡೆದಿರುವುದು ಅವರನ್ನು ನಿದ್ದೆಗೆಡುವಂತೆ ಮಾಡಿರುವುದು ಸುಳ್ಳಲ್ಲ. ಕೇಸ್‌ ಜಡಿದ ಪೊಲೀಸರು: ಆತ್ಮಹತ್ಯೆಗೆ ಪ್ರಯತ್ನಿಸಿದ ಆರೋಪದ ಮೇಲೆ ಇಬ್ಬರ ಮೇಲೆಯೂ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಊಟಕ್ಕೆ ವಾಹನ ನಿಲ್ಲಿಸಿದಾಗ ಇವರು ವಿಷ ಸೇವಿಸಿದ್ದಾರೆ. ಹೀಗಾಗಿ ಆತ್ಮಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಕೇಸ್‌ ಜಡಿಯಲಾಗಿದೆ. ವೈದ್ಯಕೀಯ ಪರೀಕ್ಷೆ ಸಾಧ್ಯತೆ: ಬಂಧಿತನಾಗಿರುವ ಆರೋಪಿ ಮತ್ತು ಅಪ್ರಾಪ್ತ ಬಾಲಕಿ ಸೇರಿ ಇಬ್ಬರಿಗೂ ಸಹ ವೈದ್ಯಕೀಯ ಪರೀಕ್ಷೆ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಬಾಲಕಿಯೊಂದಿಗೆ ಆತ ಸಂಪರ್ಕ ಮಾಡಿದ್ದರೆ ಅದೂ ಕಾನೂನು ಪ್ರಕಾರ ಅಪರಾಧವಾಗುತ್ತದೆ. ಇದು ಪ್ರೇಮಿಯ ಪಾಲಿಗೆ ಕಾನೂನಿನ ಬಿಗಿ ಕುಣಿಕೆಯಾಗಿ ಪರಿಣಮಿಸುವ ಸಾಧ್ಯತೆ ಕೂಡ ಹೆಚ್ಚಳವಾಗಿದೆ.


from India & World News in Kannada | VK Polls https://ift.tt/3klnKhm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...