ಲಾರ್ಡ್ಸ್‌ ಟೆಸ್ಟ್‌ ಗೆದ್ದ ಕೊಹ್ಲಿ ಬಗ್ಗೆ ತಮ್ಮದೇ ಅಭಿಪ್ರಾಯ ತಿಳಿಸಿದ ಪೀಟರ್ಸನ್‌!

ಹೊಸದಿಲ್ಲಿ: ತನಗೆ ಟೆಸ್ಟ್‌ ಕ್ರಿಕೆಟ್ ಎಷ್ಟು ಮುಖ್ಯ ಎಂಬುದನ್ನು ನಾಯಕ ವಿರಾಟ್‌ ಕೊಹ್ಲಿಯಲ್ಲಿನ ಉತ್ಸಾಹ ಹಾಗೂ ತೀವ್ರತೆ ಸಾಬೀತುಪಡಿಸುತ್ತದೆ ಎಂದು ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಹೇಳಿದ್ದಾರೆ. ಲಾರ್ಡ್ಸ್ ಟೆಸ್ಟ್‌ ಪಂದ್ಯದ ಐದನೇ ದಿನದ ಆರಂಭದಲ್ಲಿ ಸೋಲಿನ ಭೀತಿಗೆ ಒಳಗಾಗಿದ್ದ ಟೀಮ್‌ ಇಂಡಿಯಾ, ಭೋಜನ ವಿರಾಮದ ಹೊತ್ತಿಗೆ ಮೊಹಮ್ಮದ್‌ ಶಮಿ ಹಾಗೂ ಜಸ್‌ಪ್ರಿತ್‌ ಬುಮ್ರಾ ಅವರ ಬ್ಯಾಟಿಂಗ್‌ ನೆರವಿನಿಂದ ಭಾರತ ಕಮ್‌ಬ್ಯಾಕ್‌ ಮಾಡಿತ್ತು. ಆ ಮೂಲಕ ಭಾರತ ತಂಡ, 151 ರನ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಮಣಿಸಿ, ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಗಳಿಸಿತ್ತು. ಬೆಟ್‌ವೇ ಇನ್‌ಸೈಡರ್‌ನಲ್ಲಿ ಅಂಕಣ ಬರೆದಿರುವ ಪೀಟರ್ಸನ್‌, ಹಾಗೂ ಭಾರತ ತಂಡವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. "ಟೆಸ್ಟ್‌ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿ ಅದ್ಭುತ ಆಟಗಾರ. ಸಚಿನ್‌ ತೆಂಡೂಲ್ಕರ್, ರಾಹುಲ್‌ ದ್ರಾವಿಡ್‌ ಸೇರಿದಂತೆ ಹಲವು ದಿಗ್ಗಜರು ವಿರಾಟ್‌ ಕೊಹ್ಲಿಗೆ ನಾಯಕರಾಗಿದ್ದರು. ಇವರೆಲ್ಲರ ಹಾದಿಯನ್ನೇ ಇದೀಗ ಕೊಹ್ಲಿ ಅನುಸರಿಸುತ್ತಿದ್ದಾರೆ," ಎಂದು ತಿಳಿಸಿದ್ದಾರೆ. "ಕೊಹ್ಲಿಯ ಉತ್ಸಾಹ, ತೀವ್ರತೆ ಮತ್ತು ಅವರು ತನ್ನ ಸೈನ್ಯವನ್ನು ಒಟ್ಟುಗೂಡಿಸುವ ವಿಧಾನವನ್ನು ನೀವು ನೋಡಬಹುದು. ಈಗಲೂ ಅವರಿಗೆ ಎಲ್ಲವೂ ಆಗಿದೆ. ತನ್ನನ್ನು ಕ್ರಿಕೆಟ್‌ ದಂತಕಥೆ ಎಂದು ಪರಿಗಣಿಸಬೇಕಾದರೆ, ಟಿ20 ಸ್ವರೂಪದಂತೆಯೇ ಟೆಸ್ಟ್‌ ಕ್ರಿಕೆಟ್‌ನಲ್ಲಿಯೂ ಉತ್ತಮ ಪ್ರದರ್ಶನ ತೋರುವ ಅಗತ್ಯವಿದೆ ಎಂಬುದನ್ನು ಕೊಹ್ಲಿ ಅರಿತುಕೊಂಡಿದ್ದಾರೆ," ಎಂದು ಪೀಟರ್ಸನ್‌ ಹೇಳಿದರು. "ಈ ಕಾರಣದಿಂದಾಗಿಯೇ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ತುಂಬಾ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ಇಂತಹ ಪ್ರೀತಿಯನ್ನು ಗಳಿಸುವ ಅಗತ್ಯವಿದೆ ಹಾಗೂ ಜಾಗತಿಕ ಸೂಪರ್‌ ಸ್ಟಾರ್‌ ಬ್ಯಾಟ್ಸ್‌ಮನ್‌, ಟೆಸ್ಟ್‌ ಕ್ರಿಕೆಟ್‌ ಮೇಲೆ ಇಷ್ಟೊಂದು ಒಲವು ಹಾಗೂ ಉತ್ಸಾಹ ತೋರಿಸುತ್ತಿರುವುದನ್ನು ನೋಡುವುದು ತುಂಬಾ ಅದ್ಭುತವಾಗಿದೆ," ಎಂದರು. ಲಾರ್ಡ್ಸ್ ಟೆಸ್ಟ್‌ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡದ ಪರ ಕೆ.ಎಲ್‌ ರಾಹುಲ್‌ ವೃತ್ತಿ ಜೀವನದ ಆರನೇ ಶತಕ ಸಿಡಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಇಂಗ್ಲೆಂಡ್‌ ನಾಯಕ ಜೋ ರೂಟ್‌ ಅಜೇಯ 180 ರನ್‌ ಗಳಿಸಿದ್ದರು. ಆ ಮೂಲಕ ಇಂಗ್ಲೆಂಡ್‌ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 27 ರನ್‌ ಮುನ್ನಡೆ ಗಳಿಸಿತ್ತು. ಅದರಂತೆ ಐದನೇ ದಿನ ಜಸ್‌ಪ್ರಿತ್‌ ಬುಮ್ರಾ ಹಾಗೂ ಮೊಹಮ್ಮದ್‌ ಶಮಿ ಜೋಡಿ 89 ರನ್‌ ಜೊತೆಯಾಟವಾಡುವವರೆಗೂ ಇಂಗ್ಲೆಂಡ್‌ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, 5ನೇ ದಿನ ಭೋಜನ ವಿರಾಮದ ಹೊತ್ತಿಗೆ ಪಂದ್ಯದ ದಿಕ್ಕು ಭಾರತದ ಪರ ಬದಲಾಯಿತು. ಬುಮ್ರಾ ಹಾಗೂ ಸಿರಾಜ್‌ ಜೋಡಿ ಬೌಲಿಂಗ್‌ನಲ್ಲಿ ಜೊತೆಯಾಗಿ 7 ವಿಕೆಟ್‌ ಕಿತ್ತು ಭಾರತದ ಗೆಲುವಿಗೆ ನೆರವಾಗಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3mbKzql

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...