ಮಂಗಳೂರಿನಲ್ಲಿ ಮೃತದೇಹದಿಂದ ವಜ್ರದ ರಿಂಗ್ ಕಳವು: ಸೆಕ್ಯುರಿಟಿ ಗಾರ್ಡ್‌ ದುಷ್ಕೃತ್ಯ ಬಯಲು..

: ನಗರದ ಬೆಂದೂರ್‌ ವೆಲ್‌ನಲ್ಲಿರುವ ಖಾಸಗಿ ಆಸ್ಪತ್ರೆ ಶವಾಗಾರದಲ್ಲಿರಿಸಿದ್ದ ಮೃತ ದೇಹದಿಂದ ಆ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್‌ ವಜ್ರದ ರಿಂಗ್‌ನ್ನು ಕಳವುಗೈದಿರುವುದು ಕೊನೆಗೂ ಬಯಲಾಗಿದೆ. ಸಿಟಿ ಸೆಂಟರ್‌ ಮಾಲ್‌ನಲ್ಲಿ ಭದ್ರತಾ ವಿಭಾಗದಲ್ಲಿ ಮ್ಯಾನೇಜರ್‌ ಆಗಿದ್ದ ಬಲ್ಲಾಳ್‌ ಬಾಗ್‌ ನಿವಾಸಿ ಹರೀಶ್‌ ಶೆಟ್ಟಿ (45) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಮೃತದೇಹವನ್ನು ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿತ್ತು. ಈ ಸಂದರ್ಭ ಅವರ ಕಿವಿಯಲ್ಲಿ ವಜ್ರದ ರಿಂಗ್‌ಗಳಿದ್ದವು. ಮರುದಿನ ಬೆಳಗ್ಗೆ ಅಂತ್ಯ ಸಂಸ್ಕಾರಕ್ಕೆ ಶವ ಕೊಂಡೊಯ್ಯಲು ಬಂದಾಗ ವಜ್ರದ ರಿಂಗ್‌ ನಾಪತ್ತೆಯಾಗಿತ್ತು. ಈ ಬಗ್ಗೆ ಸೆಕ್ಯುರಿಟಿ ಗಾರ್ಡ್‌ ಬಳಿ ವಿಚಾರಿಸಿದಾಗ ಆತ 'ನಮಗೇನೂ ಗೊತ್ತಿಲ್ಲ, ನಾವು ತೆಗೆದಿಲ್ಲ' ಎಂದು ಹೇಳಿದ್ದ. ಆದರೆ ಹರೀಶ್‌ ಶೆಟ್ಟಿ ಬಂಧುಗಳು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಸಿಸಿ ಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ ವಿಚಾರಣೆ ನಡೆಸಿದಾಗ, ವಜ್ರದ ರಿಂಗ್‌ ಸೆಕ್ಯೂರಿಟಿ ಗಾರ್ಡ್ ತೆಗೆದಿರುವುದು ಪತ್ತೆಯಾಗಿದೆ. ಬಳಿಕ ಪೊಲೀಸರ ಸಮ್ಮುಖದಲ್ಲಿ ರಿಂಗ ಅನ್ನು ಹರೀಶ್‌ ಶೆಟ್ಟಿ ಅವರ ಮನೆಯವರಿಗೆ ಹಿಂತಿರುಗಿಸಿದ್ದಾನೆ. ಈ ಬಗ್ಗೆ ಆಸ್ಪತ್ರೆಯ ಮ್ಯಾನೇಜರ್‌ ಡಾ. ಅರುಣ್‌ ಕುಮಾರ್‌ ಮಾತನಾಡಿ, 'ಸೆಕ್ಯೂರಿಟಿ ಗಾರ್ಡ್‌ ಮೂರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ. ಆತ ಕಳವು ಮಾಡುತ್ತಾನೆ ಎಂದು ನಮಗೆ ಗೊತ್ತಿರಲಿಲ್ಲ. ಆತನನ್ನು ಕೆಲಸದಿಂದ ವಜಾ ಮಾಡಿದ್ದೇವೆ. ತನಿಖೆಗೆ ಆಸ್ಪತ್ರೆಯಿಂದ ಪೂರ್ಣ ಸಹಕಾರ ನೀಡಿದ್ದೇವೆ' ಎಂದರು.


from India & World News in Kannada | VK Polls https://ift.tt/3B5r4Uo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...