: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮತ್ತೆ ಮುಂದುವರೆದಿದ್ದು, ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ಮೂಲದ ರಾಜನ್ (45) ಮೃತ ವ್ಯಕ್ತಿ. ಬೇಲೂರು ತಾಲ್ಲೂಕಿನ ದೊಡ್ಡ ಲಕ್ಕುಂದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಕೊಡಗು ಜಿಲ್ಲೆ ವಿರಾಜಪೇಟೆ ಮೂಲದ ರಾಜನ್ (45) ಮೃತ ವ್ಯಕ್ತಿ. ಪಿ.ಎಫ್.ಸಾಲ್ಡಾನ ಅವರ ತೋಟದಲ್ಲಿ ಮೆಣಸು ಕಾಯುವ ಕೆಲಸ ಮಾಡುತ್ತಿದ್ದ ರಾಜನ್ ಅವರು ಜ. 3ರಂದು ಬೆಳಗ್ಗೆ ತೋಟದಲ್ಲಿ ಮೆಣಸು ಕಾಯುತ್ತಿದ್ದ ವೇಳೆ ಏಕಾಏಕಿ ನಡೆಸಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಡಿ.19ರಂದು ಆಲೂರು ತಾಲ್ಲೂಕಿನ ಭಕ್ತರವಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕ್ಯಾತನಹಳ್ಳಿಯ ಪ್ರಧಾನ್ (35) ಮೃತಪಟ್ಟಿದ್ದ. ಇದೀಗ ಜಿಲ್ಲೆಯಲ್ಲಿ 15 ದಿನಗಳ ನಂತರ ಕಾಡಾನೆ ದಾಳಿ ನಡೆಸಿ ಒಟ್ಟು ಇಬ್ಬರನ್ನು ಪಡೆದುಕೊಂಡಿದೆ. ಕಾಡಾನೆಗಳ ಹಾವಳಿ ತಡೆಯದ ಅರಣ್ಯ ಇಲಾಖೆ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
from India & World News in Kannada | VK Polls https://ift.tt/3b2e08x