ಇಂದೋರ್‌: ಶಿಕ್ಷಣ ಸಾಲ ಕೊಡಿಸುವುದಾಗಿ ಬ್ಯಾಂಕ್‌ ಮ್ಯಾನೇಜರ್‌ನಿಂದ ಹಲವು ಬಾರಿ ವಿದ್ಯಾರ್ಥಿ ಮೇಲೆ ಅತ್ಯಾಚಾರ!

ಇಂದೋರ್‌: ಎಜುಕೇಶನ್‌ ಲೋನ್‌ ಕೊಡಿಸುವುದಾಗಿ ನಂಬಿಸಿ 16 ವರ್ಷದ ಬಾಲಕಿ ಮೇಲೆ ಒಬ್ಬ ನಿರಂತರ ಅತ್ಯಾಚಾರವೆಸಗಿರುವ ಘಟನೆ ಮಧ್ಯೆಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಬಾಲಕಿ ಈ ಸಂಬಂಧ ದೂರು ದಾಖಲಿಸುವ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಪರಿವೀಂದರ್‌ ಸಿಂಗ್‌ ಎಂಬಾತ ರಾಷ್ಟ್ರೀಕೃತ ಬ್ಯಾಂಕಿನ ಮ್ಯಾನೇಜರ್‌ ಆಗಿದ್ದು ಸದ್ಯ ಪೊಲೀರ ಅತಿಥಿಯಾಗಿದ್ದಾನೆ. ಘಟನೆಯ ವಿವರ! ಸಂತ್ರಸ್ಥೆ ಯುವತಿಗೆ ತನ್ನ ಗೆಳತಿಯೊಬ್ಬಳಿಂದ ಪರಿವೀಂದರ್‌ ಸಿಂಗ್‌ನ ಪರಿಚಯವಾಗಿತ್ತು. ಗೆಳೆತಿಯ ತಾಯಿ ಪರಿವೀಂದರ್‌ ಮನೆಯಲ್ಲಿ ಕೆಲಸ ಮಾಡುತ್ತಿರುವ ಹಿನ್ನೆಲೆ ಲೋನ್‌ ಕೊಡಿಸುವ ನೆಪದಲ್ಲಿ ಸಂತ್ರಸ್ಥೆಗೆ ಮ್ಯಾನೇಜರನ್ನು ಗೆಳತಿ ಪರಿಚಯ ಮಾಡಿಕೊಟ್ಟಿದ್ದಾಳೆ. ತಾನು ಕೂಡ ಮುಂದಿನ ಶಿಕ್ಷಣಕ್ಕೆ ಲೋನ್‌ ಅನುಕೂಲವಾಗಬಹುದು ಎನ್ನುವ ಉದ್ದೇಶದಿಂದ ಮ್ಯಾನೇಜರನ್ನು ಭೇಟಿ ಮಾಡಿದ್ದಾಳೆ. ನಂತರ ಆತ ಸಾಲದ ಪೇಪರ್‌ಗಳನ್ನು ಸರಿಪಡಿಸುವ ನೆಪದಲ್ಲಿ ಆಕೆಯ ನಂಬರ್‌ ತೆಗೆದುಕೊಂಡು ಮಾತುಕತೆ ನಡೆಸಿದ್ದಾನೆ. ಅಲ್ಲದೆ ಆಕೆಯನ್ನು ಹಲವು ಬಾರಿ ಶಾಪಿಂಗ್‌ಗೆ ಕರೆದುಕೊಂಡು ಹೋಗಿದ್ದಾನೆ. ಒಂದು ದಿನ ಹೋಟೆಲ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ. ಅಲ್ಲದೆ ಬಾಲಕಿಯನ್ನು ಗೋವಾಗೆ ಕರೆದುಕೊಂಡು ಹೋಗಿ ಮೂರು ಬಾರಿ ಅತ್ಯಾಚಾರವೆಸಗಿರುವುದಾಗಿ ತಿಳಿಸಿದ್ದಾಳೆ. ಆತ್ಮಹತ್ಯೆಗೆ ಯತ್ನ! ಘಟನೆಯಿಂದ ಮನನೊಂದ ಬಾಲಕಿ ತನ್ನ ಶಿಕ್ಷಕಿಯೊಬ್ಬರಿಗೆ ಆತ್ಮಹತ್ಯೆ ಮಾಡುವುದಾಗಿ ಮೇಸೆಜ್‌ ಹಾಕಿ ಯತ್ನ ನಡೆಸಿದ್ದಾಳೆ. ಇದರಿಂದ ಕೂಡಲೇ ಅಲರ್ಟ್‌ ಆದ ಶಿಕ್ಷಕಿ, ಮನೆಗೆ ಕರೆ ಮಾಡಿ ಆತ್ಮಹತ್ಯಾ ಶ್ರಮಕ್ಕೆ ಬ್ರೇಕ್‌ ಹಾಕಿದ್ದಾರೆ. ಅಲ್ಲದೆ ಬಾಲಕಿಗೆ ಕಿವಿಮಾತು ಹೇಳಿ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪೊಲೀಸರು ಬಾಲಕಿಯ ಗೆಳತಿ ಹಾಗೂ ಬ್ಯಾಂಕ್‌ ಮ್ಯಾನೇಜರ್‌ ಪರಿವೀಂದರ್‌ ಸಿಂಗ್‌ನನ್ನು ಅರೆಸ್ಟ್‌ ಮಾಡಿದ್ದಾರೆ.


from India & World News in Kannada | VK Polls https://ift.tt/39hOfjo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...