ಹಲ್ಲೆ ಆರೋಪ: ಕಲಬುರಗಿಯಲ್ಲಿ ಇಬ್ಬರು ಪಿಎಸ್‌ಐಗಳ ಅಮಾನತು!

ಕಲಬುರಗಿ: ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಮೇಲೆ ಮಾಡಿದ ಆರೋಪಿಯ ಸುಳಿವು ಪತ್ತೆಗಾಗಿ ಪ್ರಮುಖ ಸಂಘಟನೆಯೊಂದರ ಮುಖಂಡನಿಗೆ ಥಳಿಸಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ ಚಿಂಚೋಳಿಯ ಇಬ್ಬರು ಎಸ್‌ಐಗಳನ್ನು ಅಮಾನತು ಮಾಡಲಾಗಿದೆ. ಚಿಂಚೋಳಿ ಠಾಣೆಯ ರಾಜಶೇಖರ ರಾಠೋಡ್‌, ಸುಲೇಪೇಟೆ ಠಾಣೆಯ ಪಿಎಸ್‌ಐ ಚೇತನಕುಮಾರ್‌ ಬಿದರಿ ಅಮಾನತುಗೊಂಡ ಪೊಲೀಸ್‌ ಅಧಿಕಾರಿಗಳು. ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಅಭಯಕುಮಾರ್‌ ಮೇಲೆ ಪುರಸಭೆ ಸದಸ್ಯ ಆನಂದಕುಮಾರ್‌ ಟೈಗರ್‌ ಹಲ್ಲೆ ನಡೆಸಿದ್ದರು. ಆನಂದಕುಮಾರ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಆತನ ಸ್ನೇಹಿತನೊಬ್ಬನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ಪೊಲೀಸ್‌ ಅಧಿಕಾರಿಗಳು ಪ್ರಮುಖ ಸಂಘಟನೆಯ ಕಾರ್ಯಕರ್ತರಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಸಂಘಟನೆಗಳ ಮುಖಂಡರು ಸರಕಾರದ ಪ್ರಮುಖರಿಗೆ ಮತ್ತು ಸಂಘಟನೆಯ ಮುಖಂಡರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪಿಎಸ್‌ಐಗಳನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಚಿಂಚೋಳಿಯಲ್ಲಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಆಗ ಯಾವ ಪರಿಣಾಮ ಆಗಲಿಲ್ಲ. ಆದರೆ ಇದಕ್ಕೆ ಪ್ರತಿಯಾಗಿ ಬಿಜೆಪಿ ಮುಖಂಡರು ಮತ್ತು ಇತರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಪೊಲೀಸ್‌ ಅಧಿಕಾರಿಗಳ ಪರವಾಗಿ ಬ್ಯಾಟಿಂಗ್‌ ಮಾಡಿದ್ದರು. ಅಧಿಕಾರಿಗಳ ಪರವಾಗಿ ನಿಂತವರಿಗೇ ಈಗ ಪೊಲೀಸರಿಂದ ವಿಚಾರಣೆಯ ಬಿಸಿ ಮುಟ್ಟಿತ್ತು. ಹೀಗಾಗಿ ಅವರೇ ಪೊಲೀಸ್‌ ಅಧಿಕಾರಿಗಳ ವಿರುದ್ಧ ದೂರು ನೀಡಿರುವುದು ಅಚ್ಚರಿ ಮೂಡಿಸಿದೆ. ಪ್ರಭಾರ ತೆರವಾದ ಚಿಂಚೋಳಿ ಠಾಣೆಗೆ ಮಿರಿಯಾಣ ಪಿಎಸ್‌ಐ ಸಂತೋಷ ರಾಠೋಡ್‌, ಸುಲೇಪೇಟ್‌ ಠಾಣೆಗೆ ಸೇಡಂ ಠಾಣೆಯ ಪಿಎಸ್‌ಐ ಅಯ್ಯಪ್ಪ ಅವರಿಗೆ ಹೆಚ್ಚುವರಿ ಪ್ರಭಾರ ನೀಡಲಾಗಿದೆ.


from India & World News in Kannada | VK Polls https://ift.tt/3okJJVx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...