ಕಾರ್ಮಿಕರಿಲ್ಲದೆ ಕಾಫಿ ಕೊಯ್ಲು ಕಂಗಾಲು: ಜಾಹೀರಾತು ಮೊರೆಹೋದ ಬೆಳೆಗಾರ!

ಕೆ.ಎಚ್‌.ರುದ್ರಯ್ಯ ಚಿಕ್ಕಮಗಳೂರು ಚಿಕ್ಕಮಗಳೂರು: ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕೊಯ್ಲಿಗೆ ಕಾರ್ಮಿಕರ ಕೊರತೆ ಎಷ್ಟೊಂದು ತೀವ್ರವಾಗಿದೆ ಎಂದರೆ ರು ಕಾರ್ಮಿಕರಿಗಾಗಿ ಪತ್ರಿಕೆಗಳಲ್ಲಿ ನೀಡಲು ಆರಂಭಿಸಿದ್ದಾರೆ. ಆದರೂ ಜನ ಬರುತ್ತಿಲ್ಲ. ಪ್ರತಿ ವರ್ಷ ರಾಜ್ಯದ ಬಳ್ಳಾರಿ, ಕೊಪ್ಪಳ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ದಾಂಡೇಲಿ ಮತ್ತಿತರ ಜಿಲ್ಲೆಗಳಿಂದ ತಂಡೋಪತಂಡವಾಗಿ ಬರುತ್ತಿದ್ದರು. ಈ ಬಾರಿ ಕೊರೊನಾದಿಂದ ಮಾರ್ಚ್ ನಲ್ಲಿ ಊರಿಗೆ ಮರಳಿದವರು ತಿರುಗಿ ಬಂದಿಲ್ಲ. ಈ ಮಧ್ಯೆ ಗ್ರಾಮ ಪಂಚಾಯಿತಿ ಚುನಾವಣೆ ಕೂಡಾ ಅವರನ್ನು ಊರಲ್ಲೇ ಕಟ್ಟಿಹಾಕಿದೆ. ಕಾಫಿ ಎಸ್ಟೇಟ್‌ಗಳಲ್ಲಿ ಕೆಂಪಾದ ಮಾಗಿದ ಹಣ್ಣು ಗಿಡದಲ್ಲಿ ಬಿಸಿಲಿಗೆ ಒಣಗಿ ಕಪ್ಪಾಗುತ್ತಿದೆ. ಇನ್ನು 10ರಿಂದ 15 ದಿನದೊಳಗೆ ಹಣ್ಣು ಕೊಯ್ಯದಿದ್ದರೆ ಸಂಪೂರ್ಣ ಒಣಗಿ ನೆಲಕ್ಕೆ ಉದುರಲಿದೆ. ಅದನ್ನು ನೆಲದಿಂದ ಮೇಲೆತ್ತಿದರೂ ಗುಣಮಟ್ಟ ಹಾಳಾಗಿ ಉತ್ತಮ ಧಾರಣೆ ದೊರೆಯುವುದಿಲ್ಲ. ಹೀಗಾಗಿ ಏನಾದರೂ ಕೆಲವೇ ದಿನಗಳಲ್ಲಿ ಹಣ್ಣು ಕೊಯ್ಲು ಪೂರ್ಣಗೊಳಿಸಬೇಕು ಎಂಬ ಅನಿವಾರ್ಯತೆಗೆ ಬೆಳೆಗಾರರು ಸಿಲುಕಿದ್ದಾರೆ. ಕೆಜಿಗೆ 7.5 ರೂ ''ಕಾಫಿ ಕೊಯ್ಲಿಗೆ ಕಾರ್ಮಿಕರು ಬೇಕಿದ್ದಾರೆ. ಒಂದು ಕೆಜಿ ಅರೆಬಿಕಾ ಹಣ್ಣು ಕೊಯ್ಯಲು 7ರಿಂದ 7.50 ರೂ. ನೀಡಲಾಗುವುದು. ಆಸಕ್ತರು ಸಂಪರ್ಕಿಸಿ'' ಎಂಬ ಜಾಹೀರಾತುಗಳು ಪ್ರಕಟಗೊಳ್ಳುತ್ತಿವೆ. ಅಷ್ಟಾದರೂ ಕಾರ್ಮಿಕರ ಕಡೆಯಿಂದ ಸ್ಪಂದನೆ ಇಲ್ಲ ಎಂದು ಕೆಲವು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ಮೇಸ್ತ್ರಿಗಳೂ ಬಂದಿಲ್ಲ ಕೊರೊನಾ ಪೂರ್ವದಲ್ಲಿ ಕಾಫಿ ಸೀಸನ್ನಿಗೂ ಮೊದಲು ಮಲೆನಾಡಿಗೆ ಬರುತ್ತಿದ್ದ ಉತ್ತರ ಕರ್ನಾಟಕದ ಮೇಸ್ತ್ರಿಗಳು ತೋಟದ ಮಾಲೀಕರಿಂದ ಲಕ್ಷಾಂತರ ರೂ. ಮುಂಗಡ ಹಣ ಪಡೆದು ಹೋಗುತ್ತಿದ್ದರು. ಬಳಿಕ ಆಳುಗಳನ್ನು ಕರೆ ತರುತ್ತಿದ್ದರು. ಈ ಬಾರಿ ಮೇಸ್ತ್ರಿಗಳೇ ಬಂದಿಲ್ಲ. ಉತ್ತರ ಕರ್ನಾಟಕದಲ್ಲೂ ಈ ಬಾರಿ ಒಳ್ಳೆ ಮಳೆಯಾಗಿದ್ದರಿಂದ ಅಲ್ಲೂ ಕೃಷಿ ಚೆನ್ನಾಗಿದೆ. ಹಾಗಾಗಿ ಕೆಲವರು ಬಾರದಿರುವ ಸಾಧ್ಯತೆ ಇದೆ. ಕಾರ್ಮಿಕರ ಸಮಸ್ಯೆ ಎಲ್ಲ ಕಡೆ ಬಹಳಷ್ಟಿದೆ. ಹಿಂದೆಲ್ಲಾ ಅಸ್ಸಾಂ ಮುಂತಾದ ರಾಜ್ಯಗಳಿಂದ ಜನ ಬರುತ್ತಿದ್ದರು. ಈ ಬಾರಿ ಅವರು ಬಂದಿಲ್ಲ. ಮಳೆ ಜೋರಾದರೆ ಸಂಪೂರ್ಣ ಬೆಳೆ ನೆಲ ಕಚ್ಚಲಿದೆ. ಹೊಲದಗದ್ದೆ ಗಿರೀಶ್‌, ಕಾಫಿ ಬೆಳೆಗಾರ


from India & World News in Kannada | VK Polls https://ift.tt/2KPaCn2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...