ಅಧಿಕಾರ ದುರ್ಬಳಕೆ ಪ್ರಕರಣ: ಕೊನೆಗೂ ನಿವೃತ್ತಿ ದಿನ ತಿಪಟೂರು ಕಾಲೇಜಿನಲ್ಲಿ ಪ್ರಿನ್ಸಿಪಾಲ್‌ ಪತ್ಯಕ್ಷ

ತುಮಕೂರು: ಅತಿಥಿ ಉಪನ್ಯಾಸಕರ ವೇತನ ದುರುಪಯೋಗ ಆರೋಪ ಎದುರಿಸುತ್ತಿರುವ ಬಾಲಕರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಿವೃತ್ತಿಯ ದಿನ ಕಾಲೇಜಿಗೆ ಹಾಜರಾಗಿದ್ದರು. ಪ್ರಕರಣದ ತನಿಖೆ ನಡೆಸಲು ಸರಕಾರ ಎಸಿಬಿಗೆ ಗ್ರೀನ್‌ ಸಿಗ್ನಲ್‌ ಕೊಡುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಅವರು ನಿವೃತ್ತಿ ದಿನವಾದ ಗುರುವಾರ (ಡಿ.31/2020) ಕಾಲೇಜಿಗೆ ಬಂದು, ನಿವೃತ್ತಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಟಿ.ಶೇಖರಪ್ಪ ಅವರಿಗೆ ಪ್ರಭಾರ ವಹಿಸಿ ಹಿಂತಿರುಗಿದ್ದಾರೆ. ಪ್ರಕರಣದ ಹಿನ್ನೆಲೆ ಪ್ರಿನ್ಸಿಪಾಲ್‌ ಅಲ್ಲಮಪ್ರಭು ಮತ್ತು ಎಫ್‌ಡಿಎ ಸುನೀಲ್‌ ಕೂರ್ಗಿ ಕಾಲೇಜು ಅಭಿವೃದ್ಧಿ ಸಮಿತಿಯಿಂದ ಅತಿಥಿ ಉಪಸನ್ಯಾಸಕರಿಗೆ ಗೌರವಧನ ನೀಡಿ, ಸರಕಾರದಿಂದ ಬಂದ ವೇತನವನ್ನು ಖಜಾನೆ-2 ಮೂಲಕ ಅನರ್ಹರ ಖಾತೆಗೆ ವರ್ಗಾಯಿಸಿದ್ದಾರೆ. ಅಲ್ಲಮ ಪ್ರಭು ಬಾಮೈದ ಹಾಗೂ ಸುನೀಲ್‌ ಕೂರ್ಗಿ ಪತ್ನಿ ಖಾತೆಗೆ ಅತಿಥಿ ಉಪನ್ಯಾಸಕರ ಹಣ ವರ್ಗಾವಣೆ ಆಗಿದ್ದು, ಪ್ರಕರಣದ ತನಿಖೆಗೆ ಸರಕಾರ ಎಸಿಬಿಗೆ ಒಪ್ಪಿಗೆ ನೀಡಿತ್ತು. ಡಿ.29ರಂದು 7ನೇ ಜಿಲ್ಲಾಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿದ್ದು, ಸದ್ಯ ಪ್ರಕರಣ ಎಸಿಬಿ ತನಿಖಾ ಹಂತದಲ್ಲಿದೆ.


from India & World News in Kannada | VK Polls https://ift.tt/3pIt3sg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...