ದಣಿವರಿಯದ ಕತಾರ್ ಕನ್ನಡಿಗ ಸುಬ್ರಮಣ್ಯ ಹೆಬ್ಬಾಗಿಲು: ಕೊರೊನಾ ಕಾಲದಲ್ಲಿ ಸಾರ್ಥಕ ಸೇವೆ

ಸುಬ್ರಮಣ್ಯ ಹೆಬ್ಬಾಗಿಲು.. ಇವರು ದೇಶದ ಕೊರೊನಾ ವಾರಿಯರ್ಸ್‌ಗಳ ಪೈಕಿ ಅಗ್ರಗಣ್ಯರು..! 2020 ಮಾರ್ಚ್ ತಿಂಗಳಲ್ಲಿ ಜಗತ್ತಿನ ಮೂಲೆ ಮೂಲೆಗೂ ವ್ಯಾಪಿಸಿದ ಎಂಬ ಮಹಾಮಾರಿ, ಪ್ರಪಂಚದೆಲ್ಲೆಡೆ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ಈ ಕಠಿಣ ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಹಲವು ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿ ವೈರಸ್ ಪ್ರಸರಣವನ್ನು ತಡೆಯಲು ಪ್ರಯತ್ನಿಸಿದವು. ಈ ಲಾಕ್‌ಡೌನ್ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಿತು. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ ಅತ್ಯಂತ ಕಷ್ಟದ ದಿನಗಳನ್ನು ಎದುರಿಸಬೇಕಾಯ್ತು. ಈ ವಿಚಾರದಲ್ಲಿ ಕತಾರ್ ದೇಶದ ಪರಿಸ್ಥಿತಿ ಕೂಡಾ ಭಿನ್ನವಾಗೇನೂ ಇರಲಿಲ್ಲ. ಕೊರೊನಾ ಮಹಾಮಾರಿ ಕತಾರ್‌ನಲ್ಲಿ ಬದುಕು ಕಟ್ಟಿಕೊಂಡಿದ್ದ ಲಕ್ಷಾಂತರ ಅನಿವಾಸಿ ಭಾರತೀಯ ಕಾರ್ಮಿಕರ ಬದುಕಿಗೆ ಕೊಳ್ಳಿ ಇಟ್ಟಿತ್ತು. ಉದ್ಯೋಗ ಕಳೆದುಕೊಂಡ ಕಾರ್ಮಿಕರ ಬದುಕು ದುರ್ಬರವಾಗಿತ್ತು. ಜೀವನ ನಡೆಸುವುದು ಅತ್ಯಂತ ಕಷ್ಟಕರವಾಗಿತ್ತು. ಸಂಕಷ್ಟದಲ್ಲಿದ್ದ ಕಾರ್ಮಿಕರು ಸ್ವದೇಶಕ್ಕೆ ಮರಳಲೂ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ, ವಿಮಾನಯಾನ ಸೇವೆ ಸ್ಥಗಿತಗೊಂಡಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರ್ಗತಿಕ ಕಾರ್ಮಿಕರ ಆಶಾ ಕಿರಣವಾಗಿದ್ದು 'ಭಾರತೀಯ ಸಮುದಾಯ ಸೇವಾ ಸಂಸ್ಥೆ' (ICBF). ಈ ಸಂಸ್ಥೆಯು ಕಷ್ಟದಲ್ಲಿದ್ದ ಭಾರತೀಯ ಕಾರ್ಮಿಕರ ತೊಂದರೆಗಳಿಗೆ ಸ್ಪಂದಿಸುತ್ತಾ ಅವರ ಕಷ್ಟಗಳಲ್ಲಿ ಭಾಗಿಯಾಗಿ, ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಹಗಲಿರುಳು ಶ್ರಮಿಸಿದರು. ವಿಶೇಷವಾಗಿ ಸುಬ್ರಮಣ್ಯ ಹೆಬ್ಬಾಗಿಲು ಅವರಂತೂ ತಮ್ಮ ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿ ನಿರ್ಗತಿಕ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲು ನೆರವಾಗಿ ಕಾರ್ಮಿಕರ ಪಾಲಿನ ಬಂಧುವಾಗಿ ನಿಂತರು. ತಮ್ಮ ವೈಯಕ್ತಿಕ ಬದುಕನ್ನು ಬದಿಗೊತ್ತಿ ನಿರಂತರವಾಗಿ ಕಾರ್ಮಿಕರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಶ್ರಮಿಸಿದರು. ಸುಬ್ರಮಣ್ಯ ಹೆಬ್ಬಾಗಿಲು ಅವರು ಸ್ಥಳೀಯ ಗಲ್ಫಾರ್ ಸಂಸ್ಥೆಯಲ್ಲಿ Project Co-Ordinator ಆಗಿ ಸೇವೆ ಸಲ್ಲಿಸುತ್ತಾ ನಿರಂತರವಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕತಾರ್‌ನ ಪ್ರತಿಷ್ಠಿತ ಸಂಸ್ಥೆಯಾದ 'ಕರ್ನಾಟಕ ಸಂಘ ಕತಾರ್' ನ ಸಕ್ರಿಯ ಸದಸ್ಯರಾಗಿದ್ದು, ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ತಮ್ಮ ಅವಧಿಯಲ್ಲಿ ಸಂಘದ ಅಭ್ಯುದಯಕ್ಕಾಗಿ ಶ್ರಮಿಸಿದ್ದಾರೆ. ಕತಾರ್ ನಲ್ಲಿ ನೆಲೆಸಿರುವ ಕನ್ನಡಿಗರ ಪ್ರೀತಿಯ 'ಸುಬ್ಬು' ಆಗಿ ಗುರುತಿಸಿಕೊಂಡಿದ್ದಾರೆ. ಇವರು ಮೂಲತಃ ಕರ್ನಾಟಕದ ಉಡುಪಿ ಜಿಲ್ಲೆಯ ತಗ್ಗರ್ಸೆಯವರಾಗಿದ್ದು, ಬಾಲ್ಯದಿಂದಲೇ ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿದ್ದರು. ಇದಕ್ಕೆ ಸ್ಪೂರ್ತಿಯಾಗಿ ನಿಂತವರು ಸುಬ್ರಮಣ್ಯ ಅವರ ತಂದೆ. ದಾವಣಗೆರೆಯಲ್ಲಿ ತಮ್ಮ ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ನಂತರ ಚಿತ್ರದುರ್ಗ -ಹಾವೇರಿ ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿ ಅಭಿಯಂತರರಾಗಿ ಸೇವೆ ಸಲ್ಲಿಸಿ ನಂತರ ಉದ್ಯೋಗವನ್ನರಿಸಿ ದೋಹಾಕ್ಕೆ ಆಗಮಿಸಿದ , ಕರ್ನಾಟಕ ಸಂಘದ ಮೂಲಕ ತಮ್ಮ ಸಾಮಾಜಿಕ ಕಾರ್ಯಗಳನ್ನು ಆರಂಭಿಸಿ ಹಂತ ಹಂತವಾಗಿ ಬೆಳೆದು ಕರ್ನಾಟಕ ಸಂಘ ಕತಾರ್‌ನ ಉಪಾಧ್ಯಕ್ಷ ಹುದ್ದೆಯವರೆಗೂ ತಲುಪಿ ಸಮುದಾಯದಲ್ಲಿ ತಮ್ಮ ಛಾಪನ್ನು ಮೂಡಿಸಿದರು. ಇವರ ಸೇವೆಯನ್ನು ಗುರುತಿಸಿದ ಭಾರತೀಯ ಸಮುದಾಯದ ಹೆಮ್ಮೆಯ ಸಂಸ್ಥೆಯಾದ 'ಭಾರತೀಯ ಸಮುದಾಯ ಸೇವಾ ಸಂಸ್ಥೆ' (ICBF) ತನ್ನ ಸಂಸ್ಥೆಯ ಸಹ-ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ತು. ಸಂಸ್ಥೆಯ ಮೂಲ ಧ್ಯೇಯವಾದ 'ಸೇವಾ ಮನೋಭಾವ'ವನ್ನು ಸಾಕಾರಗೊಳಿಸುವಲ್ಲಿ ಸುಬ್ರಮಣ್ಯ ಹೆಬ್ಬಾಗಿಲು ಅವರು ಪ್ರತಿಕ್ಷಣವನ್ನೂ ವಿನಿಯೋಗಿಸಿ ಯಶಸ್ವಿಯಾಗಿದ್ದಾರೆ. ಕೋವಿಡ್-19 (ಕೊರೊನಾ) ಕಠಿಣ ಸಂದರ್ಭದಲ್ಲಿ ICBF ಮುಖಾಂತರ ಸಂಕಷ್ಟದಲ್ಲಿ ಸಿಲುಕಿದ್ದ ಭಾರತೀಯ ಕಾರ್ಮಿಕರಿಗೆ ಅವಶ್ಯಕ ಆಹಾರ ಸಾಮಗ್ರಿ, ಔಷಧೋಪಚಾರವನ್ನು ಸಮಗ್ರವಾಗಿ ವಿತರಿಸಿ ಅವರ ಕಷ್ಟಗಳಿಗೆ ಸ್ಪಂದಿಸಿ ಕಾರ್ಮಿಕರಲ್ಲಿ ಮನೋಸ್ಥೈರ್ಯವನ್ನು ತುಂಬುವಲ್ಲಿ ಸುಬ್ರಮಣ್ಯ ಹೆಬ್ಬಾಗಿಲು ಅವರ ಕಾರ್ಯ ಶ್ಲಾಘನೀಯವಾದದ್ದು ಮತ್ತು ಈ ಸಂಕಷ್ಟದಲ್ಲಿ ಸಿಲುಕಿ ನಲುಗಿ ಹೋಗಿದ್ದ ಕಾರ್ಮಿಕರು ಮರಳಿ ತಾಯ್ನಾಡಿಗೆ ತೆರಳಲು ಅವಶ್ಯಕವಾಗಿದ್ದ ವಿಮಾನಯಾನ ಸೇವೆಯನ್ನು ಒದಗಿಸಲು ಭಾರತದ ಕೇಂದ್ರ ಸಚಿವರು, ಅಧಿಕಾರಿಗಳು, ಕತಾರ್‌ನಾ ಭಾರತೀಯ ದೂತವಾಸ ಕೇಂದ್ರ ಹಾಗೂ ವಿಮಾನ ನಿಲ್ದಾಣಗಳ ಪ್ರಾಧಿಕಾರಗಳ ಜೊತೆ ನಿರಂತರ ಸಂಪರ್ಕ ಸಾಧಿಸಿ ಒಂದೇ ಭಾರತ ಮಿಷನ್ ಅಡಿಯಲ್ಲಿ ವಿಮಾನಯಾನ ಆರಂಭವಾದಾಗ ಅದನ್ನು ಕತಾರ್‌ನಲ್ಲಿರುವ ಭಾರತೀಯರಿಗೆ ತಲುಪಿಸುವಲ್ಲಿ ಯಶಸ್ವಿಯಾದರು. ವಿಮಾನ ನಿಲ್ದಾಣದಲ್ಲಿ ನಿರಂತರವಾಗಿ ICBF ಆಡಳಿತ ಮಂಡಳಿಯ ಸದಸ್ಯರ ಒಡಗೂಡಿ ಸ್ವತಃ ಸುಬ್ರಮಣ್ಯ ಹೆಬ್ಬಾಗಿಲು ಅವರು ನಿಂತು ಕಾರ್ಮಿಕರಲ್ಲಿ ಆತ್ಮಸ್ಥೈರ್ಯ ತುಂಬಿ ಅವರನ್ನು ಕಳಿಸಿಕೊಡುವಾಗ ಸುಬ್ರಮಣ್ಯ ಅವರ ಕಣ್ಣಲ್ಲಿ ಸಾರ್ಥಕತೆಯ ಕಣ್ಣೀರು ತುಂಬಿ ಬರುತ್ತಿತ್ತು. ಒಂದೆಡೆ ಭಾರತ ಸರಕಾರದ ಯೋಜನೆ 'ಒಂದೇ ಭಾರತ ಮಿಷನ್'ನ ವಿಮಾನಗಳು ಪ್ರಯಾಣಿಕರ ಅವಶ್ಯಕತೆಗೆ ಅನುಗುಣವಾಗಿ ಸಾಲದೇ ಹೋಗಿ ಬೇಡಿಕೆ ಹೆಚ್ಚಾದಾಗ, ಸುಬ್ರಮಣ್ಯ ಹೆಬ್ಬಾಗಿಲು ಅವರು ಕರ್ನಾಟಕ ಸಂಘ ಕತಾರ್‌ನ ಸಹಯೋಗದೊಂದಿಗೆ 'ಚಾರ್ಟೆಡ್ ವಿಮಾನ'ಗಳನ್ನು ಆಯೋಜಿಸಿ ಯಶಸ್ವಿಯಾಗಿ ಇಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳಿಸಿಕೊಡುವಲ್ಲಿ ಸುಬ್ರಮಣ್ಯ ಅವರ ಸಾಧನೆಯನ್ನು ಎಲ್ಲರೂ ಮೆಚ್ಚಿಕೊಂಡರು. ಈ ಕಾರ್ಯದಲ್ಲಿ ಸುಬ್ರಮಣ್ಯ ಅವರ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿದ ಮತ್ತೊಬ್ಬ ICBF ಉಪಾಧ್ಯಕ್ಷರಾದ ಮಹೇಶ್ ಗೌಡ.. ICBF ನ ಆಡಳಿತ ಮಂಡಳಿ ಹಾಗೂ ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷರಾದ ನಾಗೇಶ್ ರಾವ್ ಮತ್ತು ಅವರ ತಂಡ ಕೂಡಾ ನೆರವಾಯ್ತು. ಸುಬ್ರಮಣ್ಯ ಹೆಬ್ಬಾಗಿಲು ಅವರ ಈ ಕಾರ್ಯವನ್ನು ಭಾರತೀಯ ಸಮುದಾಯವೆಲ್ಲ ಹಾಡಿ ಹೊಗಳಿತು. ಸುಬ್ರಮಣ್ಯ ಹೆಬ್ಬಾಗಿಲು ಅವರ ಈ ಮಹತ್ತರ ಸೇವೆಯನ್ನು ಗುರುತಿಸಿ ಕರಾತ್‌ನ ಭಾರತೀಯ ರಾಯಭಾರಿಗಳು ಗೌರವಿಸಿದರು. ಸಿಎಂ ಯಡಿಯೂರಪ್ಪ ಕೂಡಾ ಸುಬ್ರಹ್ಮಣ್ಯ ಅವರ ಸೇವೆಯನ್ನು ಹೊಗಳಿ ಪತ್ರದ ಮುಖಾಂತರ ಅಭಿನಂದಿಸಿದ್ದಾರೆ. ಸುಬ್ರಮಣ್ಯ ಹೆಬ್ಬಾಗಿಲು ಅವರ ಮುಡಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಸುಬ್ರಮಣ್ಯ ಹೆಬ್ಬಾಗಿಲು ಅವರ ಈ ನಿರಂತರವಾಗಿರಲಿ ಮತ್ತು ಕನ್ನಡಾಂಬೆ ಅವರಿಗೆ ಮತ್ತಷ್ಟು ಶಕ್ತಿಯನ್ನು ನೀಡಿ ಇನ್ನೂ ಹೆಚ್ಚಿನ ಸೇವೆ ಮಾಡುವಂತಾಗಲಿ ಎಂದು ಆಶಿಸೋಣ.


from India & World News in Kannada | VK Polls https://ift.tt/2TMQouV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...