from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3bdAuBN
ಹೊಸದಿಲ್ಲಿ: ಕಳೆದ ಎರಡು ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಸುರೇಶ್ ರೈನಾ ಹೊರನಡೆದಿದ್ದೇಕೆ ಎಂಬ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಆದರೆ, ಎಲ್ಲಾ ಊಹಾ ಪೋಹಗಳಿಗೆ ಉತ್ತರವನ್ನು ಸುರೇಶ್ ರೈನಾ ಅವರೇ ಬಹಿರಂಗ ಪಡಿಸಬೇಕಿದ್ದು, ಸದ್ಯಕ್ಕಂತೂ ಮೌನಕ್ಕೆ ಶರಣಾಗಿದ್ದಾರೆ.ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ತಂಡದ ಒಡೆತನ ಹೊಂದಿರುವ ಇಂಡಿಯಾ ಸಿಮೆಂಟ್ಸ್ನ ಮುಖ್ಯಸ್ಥ ಎನ್ ಶ್ರೀನಿವಾಸನ್ ಮಾತನಾಡಿದ್ದು, ಐಪಿಎಲ್ 2020 ಟೂರ್ನಿಯಿಂದ ಸುರೇಶ್ ರೈನಾ ಹಿಂದೆ ಸರಿಯುವ ನಿರ್ಧಾರ ಮಾಡಿರುವುದಕ್ಕೆ ಬಹಳ ಪಶ್ಚಾತಾಪ ಪಡಲಿದ್ದಾರೆ ಎಂದು ಹೇಳಿದ್ದಾರೆ.ಈ ಮಧ್ಯೆ 'ದೈನಿಕ್ ಜಾಗರಣ್' ಪತ್ರಿಕೆಯು ವರದಿಯೊಂದನ್ನು ಮಾಡಿದ್ದು, ಐಪಿಎಲ್ 2020 ಟೂರ್ನಿಯಿಂದ ಹೊರಬರಲು ಇದ್ದ ನೈಜ ಕಾರಣ ಏನೆಂಬುದನ್ನು ಖುದ್ದಾಗಿ ಸುರೇಶ್ ರೈನಾ ಹೇಳಿಕೊಂಡಿದ್ದಾರೆ ಎಂದಿದೆ. ಕೋವಿಡ್-19 ಸೋಂಕಿನ ಕಾರಣ ಸೃಷ್ಟಿಯಾಗಿದ್ದ ಗೊಂದಲದ ವಾತಾವರಣವೇ ಟೂರ್ನಿಯಿಂದ ಹೊರಬರಲು ಮುಖ್ಯ ಕಾರಣ ಎಂದು ರೈನಾ ಹೇಳಿರುವುದಾಗಿ ದೈನಿಕ್ ಜಾಗರಣ್ ವರದಿ ಮಾಡಿದೆ.ಐಪಿಎಲ್ 2020ಗೆ ಹೊಸ ಜರ್ಸಿ ಅನಾವರಣ ಪಡಿಸಿದ ಮುಂಬೈ ಇಂಡಿಯನ್ಸ್!ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆಗೆ ಕಳೆದ ವಾರ ದುಬೈಗೆ ತೆರಳಿದ್ದ ಸುರೇಶ್ ರೈನಾ, ತಮಗೆ ಮತ್ತು ತಮ್ಮ ಕುಟುಂಬವರ ಸುರಕ್ಷತೆಗೆ ಸುಸಜ್ಜಿತ ಕೊಠಡಿ ವ್ಯವಸ್ಥೆ ಕಲ್ಪಿಸುವಂತೆ ಕೇಳಿದ್ದರು. ಇದಕ್ಕೆ ಹೋಟೆಲ್ನಲ್ಲಿ ಅವಕಾಶ ಲಭ್ಯವಾಗದೇ ಹೋದ ಕಾರಣ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನಗೊಂಡು ಐಪಿಎಲ್ ಟೂರ್ನಿಯಿಂದಲೇ ಹೊರ ನಡೆಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. "ನನಗೆ ನನ್ನ ಕುಟುಂಬ ಮತ್ತು ಮಕ್ಕಳೇ ಮುಖ್ಯ. ಅವರಿಗಾಗಿ ಏನನ್ನು ಬೇಕಾದರೂ ಬಿಡಲು ನಾನು ಸಿದ್ಧನಿದ್ದೇನೆ. ಐಪಿಎಲ್ ಮಾತ್ರವೇ ಅಲ್ಲ," ಎಂದು ರೈನಾ ಹೇಳಿರುವುದಾಗಿ ದೈನಿಕ್ ಜಾಗರಣ್ ವರದಿಯಾಗಿದೆ.
ಹೊಸದಿಲ್ಲಿ
: ಕಳೆದ ಎರಡು ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಸುರೇಶ್ ರೈನಾ ಹೊರನಡೆದಿದ್ದೇಕೆ ಎಂಬ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಆದರೆ, ಎಲ್ಲಾ ಊಹಾ ಪೋಹಗಳಿಗೆ ಉತ್ತರವನ್ನು ಸುರೇಶ್ ರೈನಾ ಅವರೇ ಬಹಿರಂಗ ಪಡಿಸಬೇಕಿದ್ದು, ಸದ್ಯಕ್ಕಂತೂ ಮೌನಕ್ಕೆ ಶರಣಾಗಿದ್ದಾರೆ.
ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ತಂಡದ ಒಡೆತನ ಹೊಂದಿರುವ ಇಂಡಿಯಾ ಸಿಮೆಂಟ್ಸ್ನ ಮುಖ್ಯಸ್ಥ ಎನ್ ಶ್ರೀನಿವಾಸನ್ ಮಾತನಾಡಿದ್ದು, ಐಪಿಎಲ್ 2020 ಟೂರ್ನಿಯಿಂದ ಸುರೇಶ್ ರೈನಾ ಹಿಂದೆ ಸರಿಯುವ ನಿರ್ಧಾರ ಮಾಡಿರುವುದಕ್ಕೆ ಬಹಳ ಪಶ್ಚಾತಾಪ ಪಡಲಿದ್ದಾರೆ ಎಂದು ಹೇಳಿದ್ದಾರೆ.
ಈ ಮಧ್ಯೆ 'ದೈನಿಕ್ ಜಾಗರಣ್' ಪತ್ರಿಕೆಯು ವರದಿಯೊಂದನ್ನು ಮಾಡಿದ್ದು, ಐಪಿಎಲ್ 2020 ಟೂರ್ನಿಯಿಂದ ಹೊರಬರಲು ಇದ್ದ ನೈಜ ಕಾರಣ ಏನೆಂಬುದನ್ನು ಖುದ್ದಾಗಿ ಸುರೇಶ್ ರೈನಾ ಹೇಳಿಕೊಂಡಿದ್ದಾರೆ ಎಂದಿದೆ. ಕೋವಿಡ್-19 ಸೋಂಕಿನ ಕಾರಣ ಸೃಷ್ಟಿಯಾಗಿದ್ದ ಗೊಂದಲದ ವಾತಾವರಣವೇ ಟೂರ್ನಿಯಿಂದ ಹೊರಬರಲು ಮುಖ್ಯ ಕಾರಣ ಎಂದು ರೈನಾ ಹೇಳಿರುವುದಾಗಿ ದೈನಿಕ್ ಜಾಗರಣ್ ವರದಿ ಮಾಡಿದೆ.
ಐಪಿಎಲ್ 2020ಗೆ ಹೊಸ ಜರ್ಸಿ ಅನಾವರಣ ಪಡಿಸಿದ ಮುಂಬೈ ಇಂಡಿಯನ್ಸ್!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆಗೆ ಕಳೆದ ವಾರ ದುಬೈಗೆ ತೆರಳಿದ್ದ ಸುರೇಶ್ ರೈನಾ, ತಮಗೆ ಮತ್ತು ತಮ್ಮ ಕುಟುಂಬವರ ಸುರಕ್ಷತೆಗೆ ಸುಸಜ್ಜಿತ ಕೊಠಡಿ ವ್ಯವಸ್ಥೆ ಕಲ್ಪಿಸುವಂತೆ ಕೇಳಿದ್ದರು. ಇದಕ್ಕೆ ಹೋಟೆಲ್ನಲ್ಲಿ ಅವಕಾಶ ಲಭ್ಯವಾಗದೇ ಹೋದ ಕಾರಣ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನಗೊಂಡು ಐಪಿಎಲ್ ಟೂರ್ನಿಯಿಂದಲೇ ಹೊರ ನಡೆಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. "ನನಗೆ ನನ್ನ ಕುಟುಂಬ ಮತ್ತು ಮಕ್ಕಳೇ ಮುಖ್ಯ. ಅವರಿಗಾಗಿ ಏನನ್ನು ಬೇಕಾದರೂ ಬಿಡಲು ನಾನು ಸಿದ್ಧನಿದ್ದೇನೆ. ಐಪಿಎಲ್ ಮಾತ್ರವೇ ಅಲ್ಲ," ಎಂದು ರೈನಾ ಹೇಳಿರುವುದಾಗಿ ದೈನಿಕ್ ಜಾಗರಣ್ ವರದಿಯಾಗಿದೆ.

ರೈನಾ ನಿರ್ಗಮದ ಬಗ್ಗೆ ಮಾತನಾಡಿದ್ದ ಬಿಸಿಸಿಐನ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್, "ನಿಮಗೆ ವ್ಯವಸ್ಥೆಗಳ ಮೇಲೆ ಅಸಮಾಧಾನ ಇದ್ದರೆ ದಯವಿಟ್ಟು ವಾಪಸ್ ಹೋಗಿ. ಯಾರೊಬ್ಬರನ್ನೂ ಬಲವಂತವಾಗಿ ಇರಿಸಿಕೊಳ್ಳಲು ನಮಗೆ ಇಷ್ಟವಿಲ್ಲ ಎಂದೇ ಹೇಳಿದ್ದೆ. ಆದರೆ. ಕೆಲವೊಮ್ಮೆ ಯಶಸ್ಸು ಎಂಬುದು ತಲೆಗೆ ಹತ್ತಿರುತ್ತದೆ," ಎಂದು ಔಟ್ಲುಕ್ಗೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಶ್ರೀನಿವಾಸನ್ ಹೇಳಿಕೊಂಡಿದ್ದಾರೆ.
ಇನ್ನು ವರದಿಗಳು ಹೇಳಿರುವಂತೆ ಸುರೇಶ್ ರೈನಾ ದುಬೈನಲ್ಲಿ ಉಳಿದುಕೊಂಡಿದ್ದ ಕೊಠಡಿಯಲ್ಲಿ ಬಾಲ್ಕನಿ ವ್ಯವಸ್ಥೆ ಇರಲಿಲ್ಲ. ಕ್ಯಾಪ್ಟನ್ ಎಂಎಸ್ ಧೋನಿಗೆ ಒದಗಿಸಿರುವಂತೆ ಬಾಲ್ಕನಿ ಇರುವ ಕೊಠಡಿಯನ್ನು ತಮಗೂ ನೀಡುವಂತೆ ಕೇಳಿದ್ದರು ಎನ್ನಲಾಗಿದೆ. "ಕ್ರಿಕೆಟಿಗರು ಒಂದು ರೀತಿ ಹಳೇ ಕಾಲದ ಸಿಡುಕು ಸ್ವಭಾವದ ನಟ ನಟಿಯರಿದ್ದಹಾಗೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಾ ಒಂದು ಕುಟುಂಬದಂತೆ ಇದೆ. ತಂಡದ ಎಲ್ಲಾ ಹಿರಿಯ ಆಟಗಾರರು ಪರಸ್ಪರ ಹೊಂದಾಣಿಕೆಯಿಂದ ಮುನ್ನಡೆಯುತ್ತಿದ್ದಾರೆ," ಎಂದು ಶ್ರೀನಿವಾಸನ್ ತಿಳಿಸಿದ್ದಾರೆ.
'ಕ್ರಿಕೆಟಿಗನಾಗಿ ಬೆಳೆಯಲು ಇವರ ಸಹಾಯ ಸ್ಮರಣೀಯ' : ಆಸೀಸ್ ದಿಗ್ಗಜನನ್ನು ಶ್ಲಾಘಿಸಿದ ಅಯ್ಯರ್!

ಇನ್ನು ಸ್ಫೋಟಕ ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ ಹಠಾತ್ ನಿರ್ಧಾರ ತೆಗೆದುಕೊಂಡು ಟೂರ್ನಿಯಿಂದ ಹಿಂದೆ ಸರಿದಿರುವುದಕ್ಕೆ ಕ್ಯಾಪ್ಟನ್ ಎಂಎಸ್ ಧೋನಿ ಯಾವುದೇ ರೀತಿಯಲ್ಲೂ ತಲೆ ಕೆಡಿಸಿಕೊಂಡಿಲ್ಲ ಎಂದು ಶ್ರೀನಿವಾಸನ್ ಹೇಳಿದ್ದಾರೆ.
"ಎಂಎಸ್ ಧೋನಿ ಜೊತೆಗೆ ನಾನು ಚರ್ಚಿಸಿದ್ದೇನೆ. ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ಕೂಡ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ. ಝೂಮ್ ಕಾಲ್ ಮೂಲಕ ಆಟಗಾರರ ಜೊತೆಗೆ ಮಾತೂಕತೆ ನಡೆಸಿ ಸುರಕ್ಷಿತವಾಗಿ ಇರುವಂತೆ ಹೇಳಿದ್ದಾರೆ. ಏಕೆಂದರೆ ಯಾರಲ್ಲಿ ಕೊರೊನಾ ವೈರಸ್ ಇದೆ ಎಂಬುದನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಈ ಬಾರಿಯ ಟೂರ್ನಿ ಇನ್ನೂ ಶುರುವಾಗಿಲ್ಲ. ರೈನಾಗೆ ಅವರು ಕಳೆದುಕೊಳ್ಳಲಿರುವ ಹಣದ ಮೌಲ್ಯ (11 ಕೋಟಿ ರೂ.) ಅರಿವಿಗೆ ಬಂದು ಮರಳಿ ಆಡಲು ಬರುವ ಸಾಧ್ಯತೆ ಇದೆ," ಎಂದು ಶ್ರೀನಿವಾಸನ್ ವಿವರಿಸಿದ್ದಾರೆ.
ಶುಕ್ರವಾರವಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ವೇಗದ ಬೌಲರ್ ದೀಪಕ್ ಚಹರ್ ಸೇರಿದಂತೆ ಕೆಲ ಆಟಗಾರರಲ್ಲಿ ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು. ಇದೇ ಕಾರಣಕ್ಕೆ ತಂಡದ ಅಭ್ಯಾಸ ಶಿಬಿರವನ್ನು ನಿಲ್ಲಿಸಿ 6 ದಿನಗಳ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಧೋನಿಯಲ್ಲಿ ಪಂದ್ಯ ಗೆದ್ದುಕೊಡುವ ಸಾಮರ್ಥ್ಯ ಕ್ಷೀಣಿಸಿತ್ತು ಎಂದ ಮಾಜಿ ವೇಗಿ!

'ಮಿಸ್ಟರ್ ಐಪಿಎಲ್' ಎಂದೇ ಖ್ಯಾತಿ ಪಡೆದಿರುವ 33 ವರ್ಷ ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯಲು ಅವರ ಚಿಕ್ಕಪ್ಪನ ಕೊಲೆ ವಿಚಾರ ಮುಖ್ಯ ಕಾರಣ ಎನ್ನಲಾಗಿತ್ತು. ಆದರೆ ವಾಸ್ತವದಲ್ಲಿ ಇದೊಂದು ನೆಪ ಮಾತ್ರ ಎನ್ನಲಾಗುತ್ತಿದೆ. ಏಕೆಂದರೆ, ಪಂಜಾಬ್ನ ಪಠಾಣ್ಕೋಟ್ನಲ್ಲಿ ಅವರ ಚಿಕ್ಕಪ್ಪನ ಮನೆಗೆ ದರೋಡೆ ಕೋರರು ನುಗ್ಗಿ ಹಲ್ಲೆ ನಡೆಸಿದ್ದ ಘಟನೆ ನಡೆದಿರುವುದು ಆಗಸ್ಟ್ 19ರಂದು ಆಗ ರೈನಾ ಇನ್ನೂ ಭಾರತದಲ್ಲೇ ಇದ್ದರು.
ಬಳಿಕ ಆಗಸ್ಟ್ 21ರಂದು ಸಿಎಸ್ಕೆ ತಂಡದೊಂದಿಗೆ ದುಬೈಗೆ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ತಮ್ಮ ಚಿಕ್ಕಪ್ಪನ ಸಾವಿನ ಕುರಿತಾಗಿ ತಮಗೆ ಬಂದಿದ್ದ ಎಸ್ಎಮ್ಎಸ್ ತಡವಾಗಿ ಗಮನಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ವಾಸ್ತವದಲ್ಲಿ ಅವರು ತಮ್ಮ ನಿರ್ಗಮನಕ್ಕೆ ಅಸಲಿ ಕಾರಣ ಏನೆಂಬುದನ್ನು ಯಾವುದೇ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿಲ್ಲ. ಅಂದಹಾಗೆ ಐಪಿಎಲ್ ಇತಿಹಾಸದಲ್ಲಿ 2ನೇ ಅತ್ಯಧಿಕ ರನ್ ಸ್ಕೋರರ್ ಆಗಿರುವ ರೈನಾ ಟೂರ್ನಿಯಿಂದ ಹಿಂದೆ ಸರಿದಿರುವುದು ಸಿಎಸ್ಕೆಗೆ ಭಾರಿ ಹಿನ್ನಡೆಯನ್ನೇ ತಂದೊಡ್ಡಿದೆ.
'ಕಣ್ಣೀರಿನಲ್ಲಿದೆ ಸುರೇಶ್ ರೈನಾ ಕುಂಟುಂಬ' : ಎಡಗೈ ಬ್ಯಾಟ್ಸ್ಮನ್ ಐಪಿಎಲ್ ತೊರೆದ ಕಾರಣ ಶಾಕಿಂಗ್.!

ಐಪಿಎಲ್ 2020 ಟೂರ್ನಿ ಈ ಬಾರಿ ಯುನೈಟೆಡ್ ಅರಬ್ ಎಮಿರೇಟ್ಸ್ ಅಂಗಣದಲ್ಲಿ ಆಯೋಜನೆಯಾಗಲಿದ್ದು, ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಬಯೋ ಸೆಕ್ಯೂರ್ ವಾತಾವರಣ ಇರುವ ದುಬೈ, ಶರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಟೂರ್ನಿ ಸಲುವಾಗಿ ಈಗಾಗಗಲೇ ಎಲ್ಲಾ 8 ತಂಡಗಳು ದುಬೈನಲ್ಲಿ ಬೀಡು ಬಿಟ್ಟಿದ್ದು, 3 ವಾರಗಳ ಅಭ್ಯಾಸ ಶಿಬಿರ ಆರಂಭಿಸಿವೆ.
ಆದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿರುವುದು ಇದೀಗ ಕಳವಳಕ್ಕೆ ಕಾರಣವಾಗಿದೆ. ಆಟಗಾರರಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಸಿಎಸ್ಕೆ ಮರಳಿ 6 ದಿನಗಳ ಕ್ವಾರಂಟೈನ್ಗೆ ಒಳಪಡಬೇಕಿದೆ. ಹೀಗಾಗಿ ಸೆಪ್ಟೆಂಬರ್ 19ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ದದ ಐಪಿಎಲ್ 2020 ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಸೂಪರ್ ಕಿಂಗ್ಸ್ ಅಲಭ್ಯವಾಗುವ ಸಾಧ್ಯತೆ ಇದೆ.
"ಐಪಿಎಲ್ 2020 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸಿಎಸ್ಕೆ ಸ್ಪರ್ಧಿಸುವ ಸ್ಥಿತಿಯಲ್ಲಿಲ್ಲ. ಈ ಹಿನ್ನಡೆಯಿಂದ ಪುಟಿದೇಳಲು ಸಿಎಸ್ಕೆಗೆ ಹೆಚ್ಚು ಸಮಯ ಸಿಗುವಂತೆ ಅವಕಾಶ ಮಾಡಿಕೊಡಲಿದ್ದೇವೆ. ಟೂರ್ನಿಗೆ ಕಂಟಕವಾಗಿ ಎದುರಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದೇ ಕಾರಣಕ್ಕೆ ಟೂರ್ನಿಯ ವೇಳಾಪಟ್ಟಿ ಬಿಡುಗಡೆಯನ್ನು ತಡ ಮಾಡಲಾಗಿದೆ," ಎಂದು ಟೈಮ್ಸ್ ಆಫ್ ಇಂಡಿಯಾಗೆ ಬಿಸಿಸಿಐನ ಮೂಲಗಳು ಹೇಳಿವೆ.
5 ತಿಂಗಳ ಬಳಿಕ ಬ್ಯಾಟಿಂಗ್ ಮಾಡಿದ್ದಕ್ಕೆ ಸ್ವಲ್ಪ ಭಯವಾಯಿತೆಂದ ವಿರಾಟ್ ಕೊಹ್ಲಿ!
ಹೊಸದಿಲ್ಲಿ: ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್ ಆದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ವರ್ಷದಿಂದ ವರ್ಷಕ್ಕೆ ತನ್ನ ಪ್ರಾಮುಖ್ಯತೆ ಹಾಗೂ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ಅಲ್ಲದೆ, ಹಲವು ಮೈಲುಗಲ್ಲು ಹಾಗೂ ದಾಖಲೆಗಳು ಪ್ರತಿ ಆವೃತ್ತಿಯಲ್ಲಿ ದಾಖಲಾಗುತ್ತಿವೆ. 2008ರಲ್ಲಿ ಆರಂಭವಾಗಿದ್ದ ಐಪಿಎಲ್ ಟೂರ್ನಿ ಇಲ್ಲಿಯವರೆಗೂ ಹಲವು ವಿಶಿಷ್ಠ ದಾಖಲೆಗಳು ಸೃಷ್ಟಿಯಾಗಿವೆ ಮತ್ತು ಇನ್ನೂ ಕೆಲವು ದಾಖಲೆಗಳನ್ನು ಇದುವರೆಗೂ ಯಾರಿಂದಲೂ ಮುಟ್ಟಲಾಗಿಲ್ಲ. ಐಪಿಎಲ್ನಲ್ಲಿ ದಾಖಲಾಗಿರುವ ಕೆಲ ವಿಶಿಷ್ಠ ದಾಖಲೆಗಳನ್ನು ಇದುವರೆಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ ಹಾಗೂ ಯಾವ ಆಟಗಾರನಿಂದಲೂ ತಲುಪಲು ಸಾಧ್ಯವಾಗಿಲ್ಲ. ಇವುಗಳು ಐಪಿಎಲ್ನ ಸಾರ್ವಕಾಲಿಕ ಮೈಲುಗಲ್ಲು ಅಥವಾ ದಾಖಲೆಗಳಾಗಿ ಉಳಿದಿವೆ. ವಿಶ್ವದ ಕೆಲ ಸ್ಟಾರ್ ಆಟಗಾರರು ಇವುಗಳನ್ನು ಮುರಿಯಬಹುದು ಆದರೆ ಕಷ್ಟ ಸಾಧ್ಯ. ಹಲವಾರು ಪ್ರಯತ್ನಗಳ ಹೊರತಾಗಿಯೂ, ಅನೇಕ ಆಟಗಾರರು ಈ ದಾಖಲೆಗಳನ್ನು ಮುರಿಯುವಲ್ಲಿ ವಿಫಲರಾಗಬಹುದು.13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸೆ.19 ರಿಂದ ಯುಎಇಯಲ್ಲಿ ಆರಂಭವಾಗುತ್ತಿದ್ದು, ಎಲ್ಲಾ ಫ್ರಾಂಚೈಸಿಗಳು ದುಬೈನಲ್ಲಿ ಕಠಿಣ ತಾಲೀಮು ನಡೆಸುತ್ತಿವೆ. ಕಳೆದ ಮಾ.29 ರಿಂದಲೇ ಟೂರ್ನಿ ಆರಂಭವಾಗಬೇಕಿತ್ತು ಆದರೆ, ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದರಿಂದ ಫ್ರಾಂಚೈಸಿ ಲೀಗ್ ಅನ್ನು ಎರಡು ಬಾರಿ ಮುಂದೂಡಲಾಗಿತ್ತು. ಭಾರತದಲ್ಲಿ ಮಾರಣಾಂತಿಕ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಟೂರ್ನಿಯನ್ನು ಯುಎಇಗೆ ಸ್ಥಳಾಂತರ ಮಾಡಲಾಗಿದೆ.
ಹೊಸದಿಲ್ಲಿ:
ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್ ಆದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ವರ್ಷದಿಂದ ವರ್ಷಕ್ಕೆ ತನ್ನ ಪ್ರಾಮುಖ್ಯತೆ ಹಾಗೂ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ಅಲ್ಲದೆ, ಹಲವು ಮೈಲುಗಲ್ಲು ಹಾಗೂ ದಾಖಲೆಗಳು ಪ್ರತಿ ಆವೃತ್ತಿಯಲ್ಲಿ ದಾಖಲಾಗುತ್ತಿವೆ. 2008ರಲ್ಲಿ ಆರಂಭವಾಗಿದ್ದ ಐಪಿಎಲ್ ಟೂರ್ನಿ ಇಲ್ಲಿಯವರೆಗೂ ಹಲವು ವಿಶಿಷ್ಠ ದಾಖಲೆಗಳು ಸೃಷ್ಟಿಯಾಗಿವೆ ಮತ್ತು ಇನ್ನೂ ಕೆಲವು ದಾಖಲೆಗಳನ್ನು ಇದುವರೆಗೂ ಯಾರಿಂದಲೂ ಮುಟ್ಟಲಾಗಿಲ್ಲ.
ಐಪಿಎಲ್ನಲ್ಲಿ ದಾಖಲಾಗಿರುವ ಕೆಲ ವಿಶಿಷ್ಠ ದಾಖಲೆಗಳನ್ನು ಇದುವರೆಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ ಹಾಗೂ ಯಾವ ಆಟಗಾರನಿಂದಲೂ ತಲುಪಲು ಸಾಧ್ಯವಾಗಿಲ್ಲ. ಇವುಗಳು ಐಪಿಎಲ್ನ ಸಾರ್ವಕಾಲಿಕ ಮೈಲುಗಲ್ಲು ಅಥವಾ ದಾಖಲೆಗಳಾಗಿ ಉಳಿದಿವೆ. ವಿಶ್ವದ ಕೆಲ ಸ್ಟಾರ್ ಆಟಗಾರರು ಇವುಗಳನ್ನು ಮುರಿಯಬಹುದು ಆದರೆ ಕಷ್ಟ ಸಾಧ್ಯ. ಹಲವಾರು ಪ್ರಯತ್ನಗಳ ಹೊರತಾಗಿಯೂ, ಅನೇಕ ಆಟಗಾರರು ಈ ದಾಖಲೆಗಳನ್ನು ಮುರಿಯುವಲ್ಲಿ ವಿಫಲರಾಗಬಹುದು.
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸೆ.19 ರಿಂದ ಯುಎಇಯಲ್ಲಿ ಆರಂಭವಾಗುತ್ತಿದ್ದು, ಎಲ್ಲಾ ಫ್ರಾಂಚೈಸಿಗಳು ದುಬೈನಲ್ಲಿ ಕಠಿಣ ತಾಲೀಮು ನಡೆಸುತ್ತಿವೆ. ಕಳೆದ ಮಾ.29 ರಿಂದಲೇ ಟೂರ್ನಿ ಆರಂಭವಾಗಬೇಕಿತ್ತು ಆದರೆ, ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದರಿಂದ ಫ್ರಾಂಚೈಸಿ ಲೀಗ್ ಅನ್ನು ಎರಡು ಬಾರಿ ಮುಂದೂಡಲಾಗಿತ್ತು. ಭಾರತದಲ್ಲಿ ಮಾರಣಾಂತಿಕ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಟೂರ್ನಿಯನ್ನು ಯುಎಇಗೆ ಸ್ಥಳಾಂತರ ಮಾಡಲಾಗಿದೆ.

ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಒಮ್ಮೆ ಬ್ಯಾಟಿಂಗ್ನಲ್ಲಿ ಸಿಡಿದರೆ, ದಾಖಲೆಗಳನ್ನು ಬರೆಯುವುದು ಗ್ಯಾರೆಂಟಿ. ಅಂದಹಾಗೇ ಅವರು ಐಪಿಎಲ್ ಇತಿಹಾಸದಲ್ಲಿ ಹಲವಾರು ದಾಖಲೆಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಒಂದೇ ಇನಿಂಗ್ಸ್ ನಲ್ಲಿ 175 ರನ್ ಗಳಿಸಿದ್ದು, ಐಪಿಎಲ್ನಲ್ಲಿ ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
2013ರ ಏಪ್ರಿಲ್ 23ರಂದು ಪುಣೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವನ್ನು ಪ್ರತಿನಿಧಿಸಿದ್ದ ಕ್ರಿಸ್ ಗೇಲ್, ಪುಣೆ ವಾರಿಯರ್ಸ್ ವಿರುದ್ಧ ಅಜೇಯ 175 ರನ್ ಗಳಿಸುವ ಮೂಲಕ 2008 ರ ಬ್ರೆಂಡನ್ ಮೆಕಲಂ (158* ರನ್) ದಾಖಲೆಯನ್ನು ಮುರಿದಿದ್ದರು. ಇದು ಆಟಗಾರನೊಬ್ಬನ ಇದುವರೆಗಿನ ವೈಯಕ್ತಿಕ ಗರಿಷ್ಠ ಮೊತ್ತವಾಗಿದ್ದು, ಈ ಬಾರಿಯ ಐಪಿಎಲ್ ನಲ್ಲಿ ಗೇಲ್ ದಾಖಲೆಯನ್ನು ಯಾರಾದರೂ ಮುರಿಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರನನ್ನು ಹೆಸರಿಸಿದ ಕೆಎಲ್ ರಾಹುಲ್!

2013ರ ಆವೃತ್ತಿಯಲ್ಲಿ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಮೊತ್ತ ದಾಖಲಿಸಿದ್ದ ಪಂದ್ಯದಲ್ಲಿಯೇ ಕ್ರಿಸ್ ಗೇಲ್ ಅವರು 30 ಎಸೆತ ಎದುರಿಸಿ ಶತಕ ಪೂರೈಸಿದ್ದರು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ವೇಗದ ಶತಕ ಇದಾಯಿತು. ಈ ಪಂದ್ಯದಲ್ಲಿ ಗೇಲ್ 66 ಎಸೆತಗಳನ್ನು ಎದುರಿಸಿ ಅಜೇಯ 175 ರನ್ ಗಳಿಸಿದ್ದರು. ಎದುರಾಳಿ ಪುಣೆ ಬೌಲರ್ಗಳನ್ನು ಯೂನಿವರ್ಸಲ್ ಬಾಸ್ ನೂಚ್ಚು ನೂರು ಮಾಡಿದ್ದರು. ಭುವನೇಶ್ವರ್ ಕುಮಾರ್ ಮಾತ್ರ ನಾಲ್ಕು ಓವರ್ಗಳಿಗೆ 23 ರನ್ ನೀಡಿ ಉತ್ತಮ ಬೌಲರ್ ಎನಿಸಿಕೊಂಡಿದ್ದರು. ಇವರನ್ನು ಬಿಟ್ಟು ಇನ್ನುಳಿದ ವೇಗಿಗಳು ದುಬಾರಿಯಾಗಿದ್ದರು. ಇದೇ ಪಂದ್ಯದಲ್ಲಿ ಗೇಲ್ ಸಿಕ್ಸ್ ಸಿಡಿಸುವ ಮೂಲಕ ಯೂಸಫ್ ಪಠಾಣ್ ಅವರ ವೇಗದ ಶತಕವನ್ನು ಮುರಿದರು. ಯೂಸಫ್ ಪಠಾಣ್ 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
ಐಪಿಎಲ್ 2020: ಉದ್ಘಾಟನಾ ಪಂದ್ಯದಿಂದ ಸಿಎಸ್ಕೆ ಹಿಂದೆ ಸರಿಯುವ ಸಾಧ್ಯತೆ!

ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನ ಯಶಸ್ವಿ ನಾಯಕನಾಗಿ ಮಾತ್ರ ಸೀಮಿತವಾಗಿಲ್ಲ, ಅವರು ಶ್ರೀಮಂತ ಫ್ರಾಂಚೈಸಿ ಲೀಗ್ ಐಪಿಎಲ್ನಲ್ಲೂ ಅತ್ಯಂತ ಸಕ್ಸಸ್ ಕ್ಯಾಪ್ಟನ್ ಆಗಿದ್ದಾರೆ. 2008ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಎಂಎಸ್ ಧೋನಿ 9 ಬಾರಿ ತಮ್ಮ ತಂಡವನ್ನು ಫೈನಲ್ಗೆ ತಲುಪಿಸಿದ್ದಾರೆ. ಇದರಲ್ಲಿ ಮೂರು ಬಾರಿ ಸಿಎಸ್ಕೆ ಫ್ರಾಂಚೈಸಿಗೆ ಪ್ರಶಸ್ತಿ ತಂದುಕೊಟ್ಟಿದ್ದಾರೆ. 2009, 2014 ಹಾಗೂ 2016ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿದೆ. ರೋಹಿತ್ ಶರ್ಮಾ(ನಾಲ್ಕು ಬಾರಿ ಚಾಂಪಿಯನ್) ಬಳಿಕ ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ನಾಯಕರಾಗಿ ಎಂಎಸ್ ಧೋನಿ ಹೊರಹೊಮ್ಮಿದ್ದಾರೆ.
ಐಪಿಎಲ್ 2020ಗೆ ಹೊಸ ಜರ್ಸಿ ಅನಾವರಣ ಪಡಿಸಿದ ಮುಂಬೈ ಇಂಡಿಯನ್ಸ್!

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಲ್ಲಾ ಆವೃತ್ತಿಗಳಲ್ಲೂ ಪ್ಲೇಆಫ್ಗೆ ತಲುಪಿದೆ. ಈ ಸಾಧನೆ ಮಾಡಿದ ಮೊದಲ ಫ್ರಾಂಚೈಸಿ ಎಂಬ ದಾಖಲೆಗೆ ಸಿಎಸ್ಕೆ ಭಾಜನವಾಗಿದೆ. 2008ರಿಂದ ಇದುವರೆಗೂ12 ಆವೃತ್ತಿಗಳಲ್ಲಿ ಈ ದಾಖಲೆಯನ್ನು ಬೇರೆ ಯಾವ ತಂಡವು ಮಾಡಿಲ್ಲ. ಎಂಎಸ್ ಧೋನಿಯ ಚಾಣಾಕ್ಷತನದ ನಾಯಕತ್ವದಿಂದ ಎಂತಹ ಒತ್ತಡವಿದ್ದರೂ ಮೆಟ್ಟಿನಿಂತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. 2016 ಮತ್ತು 2017ರ ಆವೃತ್ತಿಗಳಲ್ಲಿ ಎಂಎಸ್ ಧೋನಿ ನಾಯಕತ್ವದ ಸಿಎಸ್ಕೆ ಸಕ್ರಿಯವಾಗಿದ್ದರೆ, ಒಟ್ಟು 12 ಆವೃತ್ತಿಗಳಲ್ಲೂ ಪ್ಲೇಆಫ್ಗೆ ತಲುಪಿದಂತಾಗುತ್ತಿತ್ತು. ಈ ಎರಡು ವರ್ಷಗಳು ಸಿಎಸ್ಕೆ ಅಮಾನತು ಶಿಕ್ಷಗೆ ಒಳಗಾಗಿತ್ತು.
ಟಿ20 ಕ್ರಿಕೆಟ್ಗೆ ಗಂಗೂಲಿ ಲಾಯಕ್ಕಲ್ಲ ಎಂದ ಕೆಕೆಆರ್ ತಂಡದ ಮಾಜಿ ಕೋಚ್!

ಕ್ರಿಸ್ ಗೇಲ್ 175 ರನ್ಗಳನ್ನು ಸಿಡಿಸಿದ ಎರಡು ವರ್ಷಗಳಿಗೂ ಮುನ್ನ ಕೊಚ್ಚಿ ಟಸ್ಕರ್ಸ್ ತಂಡದ ಯುವ ವೇಗಿ ಪ್ರಶಾಂತ್ ಪರಮೇಶ್ವರನ್ ಅವರ ಒಂದೇ ಓವರ್ಗೆ 37 ರನ್ ಸಿಡಿಸಿದ್ದರು. ಈ ಆವೃತ್ತಿಗೆ ಗೇಲ್ ಅನ್ಸೋಲ್ಡ್ ಆಗಿದ್ದರು. ಆದರೆ, ಡರ್ಕ್ ನ್ಯಾನಿಸ್ ಅವರ ಸ್ಥಾನಕ್ಕೆ ಬಂದು 2011ರ ಆವೃತ್ತಿಯಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ಗಳನ್ನು ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಪಡೆದರು. ಮುಂದಿನ ವರ್ಷವೂ ಕ್ರಿಸ್ ಗೇಲ್ ಆರ್ಸಿಬಿಯಲ್ಲಿಯೇ ಮುಂದುವರಿದರು.
37 ರನ್ಗಳಲ್ಲಿ ಕ್ರಿಸ್ ಗೇಲ್ ಪಂದ್ಯದ ಮೂರು ಸಿಕ್ಸರ್ ಹಾಗೂ ಮೂರು ಬೌಂಡರಿಗಳನ್ನು ಸಿಡಿಸಿದ್ದರು. ಇದರಲ್ಲಿ ಪರಮೇಶ್ವರನ್ ಎರಡು ಎಸೆತದಲ್ಲಿ ಗೆರೆ ದಾಟಿ ಚೆಂಡು ಎಸೆದಿದ್ದರು, ಆ ಎಸೆತವನ್ನು ಗೇಲ್ ಸಿಕ್ಸರ್ ಬಾರಿಸಿದ್ದರು. ಆ ಪಂದ್ಯದಲ್ಲಿ 127 ರನ್ ಗಳಿಸುವ ಮೂಲಕ ಆರ್ಸಿಬಿಯ 9 ವಿಕೆಟ್ಗಳ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
5 ತಿಂಗಳ ಬಳಿಕ ಬ್ಯಾಟಿಂಗ್ ಮಾಡಿದ್ದಕ್ಕೆ ಸ್ವಲ್ಪ ಭಯವಾಯಿತೆಂದ ವಿರಾಟ್ ಕೊಹ್ಲಿ!

ಐಪಿಎಲ್ ಇತಿಹಾಸದಲ್ಲಿಯೇ ಅಮಿತ್ ಮಿಶ್ರಾ ಮೂರು ಹ್ಯಾಟ್ರಿಕ್ ವಿಕೆಟ್ಗಳ ಸಾಧನೆಯನ್ನು ಮಾಡಿದ್ದಾರೆ. 2011ರಲ್ಲಿ ಡೆಕ್ಕಾನ್ ಚಾರ್ಜರ್ಸ್ ಪರ , 2013ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಹಾಗೂ 2008ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಒಟ್ಟು ಮೂರು ಹ್ಯಾಟ್ರಿಕ್ ವಿಕೆಟ್ಗಳನ್ನು ಅಮಿತ್ ಮಿಶ್ರಾ ಪಡೆದಿದ್ದಾರೆ. ಒಟ್ಟು 147 ಐಪಿಎಲ್ ಪಂದ್ಯಗಳಿಂದ 157 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಅಮಿತ್ ಮಿಶ್ರಾ ಬಳಿಕ ಯುವರಾಜ್ ಸಿಂಗ್ ಎರಡು ಹ್ಯಾಟ್ರಿಕ್ ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಆದರೆ, ಯುವಿ ಇದಾಗಿ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಸ್ಯಾಮ್ ಕರನ್ ಕಳೆದ ಆವೃತ್ತಿಯಲ್ಲಿ ಒಂದು ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ.
ಧೋನಿಯಲ್ಲಿ ಪಂದ್ಯ ಗೆದ್ದುಕೊಡುವ ಸಾಮರ್ಥ್ಯ ಕ್ಷೀಣಿಸಿತ್ತು ಎಂದ ಮಾಜಿ ವೇಗಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 2016ರ ಐಪಿಎಲ್ ಆವೃತ್ತಿಯಲ್ಲಿ 973 ರನ್ಗಳನ್ನು ದಾಖಲಿಸಿದ್ದರು. ಕೊಹ್ಲಿ ಪಾಲಿಗೆ ಅಂದಿನ ಆವೃತ್ತಿ ಅದ್ಬುತವಾಗಿತ್ತು. 2008ರ ಆವೃತ್ತಿಯಿಂದ ಆರ್ಸಿಬಿ ಪರ ಆಡುತ್ತಿದ್ದ ನಾಯಕ ಕೊಹ್ಲಿ 2016ರಲ್ಲಿ ತಾವೇನೆಂದೂ ಸಾಬೀತು ಪಡಿಸಿದರು. ಆರ್ಸಿಬಿ ತಂಡ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾದರೂ ಕೊಹ್ಲಿ ಆರೆಂಜ್ ಕ್ಯಾಪ್ ಪಡೆದಿದ್ದರು.
31ರ ಪ್ರಾಯದ ಆಟಗಾರ 16 ಪಂದ್ಯಗಳಿಂದ 81.08ರ ಆವೃತ್ತಿಯಲ್ಲಿ 973 ರನ್ ದಾಖಲಿಸಿದ್ದರು. ಅದೇ ಆವೃತ್ತಿಯಲ್ಲಿ ಡೇವಿಡ್ ವಾರ್ನರ್ ಅವರು 848 ರನ್ಗಳನ್ನು ಗಳಿಸುವ ಮೂಲಕ ಎರಡನೇ ಗರಿಷ್ಠ ವೈಯಕ್ತಿಕ ಮೊತ್ತದ ದಾಖಲೆಗೆ ಭಾಜನರಾಗಿದ್ದರು.
ಧೋನಿಯಲ್ಲಿ ಪಂದ್ಯ ಗೆದ್ದುಕೊಡುವ ಸಾಮರ್ಥ್ಯ ಕ್ಷೀಣಿಸಿತ್ತು ಎಂದ ಮಾಜಿ ವೇಗಿ!
ಹೊಸದಿಲ್ಲಿ: ಬಹು ನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸಾಕಷ್ಟು ಅಡೆ ತಡೆಗಳು ಎದುರಾಗುತ್ತಿವೆ. ಟೂರ್ನಿ ಆರಂಭಕ್ಕೆ 20 ದಿನಗಳಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಶನಿವಾರ ತಂಡದ 12 ಮಂದಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದು, ಮತ್ತೆ ಆಟಗಾರರು ಕ್ವಾರಂಟೈನ್ಗೆ ತೆರಳಿದ್ದಾರೆ. ಇದಕ್ಕಿಂದ ಮುಖ್ಯವಾಗಿ ಚೆನ್ನೈ ಫ್ರಾಂಚೈಸಿ ನಾಯಕ ಎಂಎಸ್ ಧೋನಿಗೆ 2008ರಿಂದ ಬೆನ್ನೆಲುಬಾಗಿದ್ದ ನಿಂತಿದ್ದ ಎಡಗೈ ಹಿರಿಯ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರು ವೈಯಕ್ತಿಕ ಕಾರಣಗಳಿಂದ 13ನೇ ಆವೃತ್ತಿಯ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರು ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಇದರಿಂದ ಸಿಎಸ್ಕೆ ಪಾಳಯದಲ್ಲಿ ಟೂರ್ನಿ ಆರಂಭಕ್ಕೂ ಮುನ್ನವೇ ಹಿನ್ನಡೆಯಾಗಿದೆ. ಈ ಕುರಿತು ಸಿಎಸ್ಕೆ ಸಿಇಓ ಕೆ.ಎಸ್ ವಿಶ್ವನಾಥನ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.ಇದೀಗ ಸುರೇಶ್ ರೈನಾ ಸ್ಥಾನಕ್ಕೆ ಯಾರನ್ನು ಆಡಿಸಲಾಗುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಕಳೆದ 11 ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇಆಫ್ ತಲುಪುವಲ್ಲಿ ಸುರೇಶ್ ರೈನಾ ಮಹತ್ವದ ಪಾತ್ರವಹಿಸಿದ್ದರು. ಹಾಗಾಗಿ, ರೈನಾ ಸ್ಥಾನಕ್ಕೆ ಚೆನ್ನೈ ಫ್ರಾಂಚೈಸಿಯು ಮೂರು ಆಟಗಾರರನ್ನು ಆಡಿಸುವ ಸಾಧ್ಯತೆ ಇದೆ.
ಹೊಸದಿಲ್ಲಿ:
ಬಹು ನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸಾಕಷ್ಟು ಅಡೆ ತಡೆಗಳು ಎದುರಾಗುತ್ತಿವೆ. ಟೂರ್ನಿ ಆರಂಭಕ್ಕೆ 20 ದಿನಗಳಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಶನಿವಾರ ತಂಡದ 12 ಮಂದಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದು, ಮತ್ತೆ ಆಟಗಾರರು ಕ್ವಾರಂಟೈನ್ಗೆ ತೆರಳಿದ್ದಾರೆ.
ಇದಕ್ಕಿಂದ ಮುಖ್ಯವಾಗಿ ಚೆನ್ನೈ ಫ್ರಾಂಚೈಸಿ ನಾಯಕ ಎಂಎಸ್ ಧೋನಿಗೆ 2008ರಿಂದ ಬೆನ್ನೆಲುಬಾಗಿದ್ದ ನಿಂತಿದ್ದ ಎಡಗೈ ಹಿರಿಯ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರು ವೈಯಕ್ತಿಕ ಕಾರಣಗಳಿಂದ 13ನೇ ಆವೃತ್ತಿಯ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರು ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಇದರಿಂದ ಸಿಎಸ್ಕೆ ಪಾಳಯದಲ್ಲಿ ಟೂರ್ನಿ ಆರಂಭಕ್ಕೂ ಮುನ್ನವೇ ಹಿನ್ನಡೆಯಾಗಿದೆ. ಈ ಕುರಿತು ಸಿಎಸ್ಕೆ ಸಿಇಓ ಕೆ.ಎಸ್ ವಿಶ್ವನಾಥನ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
ಇದೀಗ ಸುರೇಶ್ ರೈನಾ ಸ್ಥಾನಕ್ಕೆ ಯಾರನ್ನು ಆಡಿಸಲಾಗುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಕಳೆದ 11 ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇಆಫ್ ತಲುಪುವಲ್ಲಿ ಸುರೇಶ್ ರೈನಾ ಮಹತ್ವದ ಪಾತ್ರವಹಿಸಿದ್ದರು. ಹಾಗಾಗಿ, ರೈನಾ ಸ್ಥಾನಕ್ಕೆ ಚೆನ್ನೈ ಫ್ರಾಂಚೈಸಿಯು ಮೂರು ಆಟಗಾರರನ್ನು ಆಡಿಸುವ ಸಾಧ್ಯತೆ ಇದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ಆಲ್ರೌಂಡರ್ ಯೂಸಫ್ ಪಠಾಣ್ ಅವರನ್ನು 2020ರ ಐಪಿಎಲ್ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಒಟ್ಟು ಮೂರು ಫ್ರಾಂಚೈಸಿಗಳಲ್ಲಿ ಆಡಿರುವ ಪಠಾಣ್, ಅಂತೆಯೇ ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 2007 ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ಆಡಿದ್ದರು.
ಯೂಸಫ್ ಪಠಾಣ್ ತಮ್ಮ ವೃತ್ತಿ ಜೀವನದಲ್ಲಿ 174 ಐಪಿಎಲ್ ಪಂದ್ಯಗಳಾಡಿದ್ದು, 3,204 ರನ್ಗಳನ್ನು ಗಳಿಸಿದ್ದಾರೆ ಹಾಗೂ ಸ್ಪಿನ್ ಬೌಲಿಂಗ್ನಲ್ಲಿಯೂ 42 ವಿಕೆಟ್ಗಳನ್ನು ಕಬಳಿಸಿದ್ದಾರೆ. ಸುರೇಶ್ ರೈನಾ ರೀತಿಯ ಕೌಶಲ ಹೊಂದಿರುವ ಯೂಸಫ್ ಪಠಾಣ್ ಅವರನ್ನು ಎಡಗೈ ಬ್ಯಾಟ್ಸ್ಮನ್ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ.
ಕೆಕೆಆರ್ ತಂಡದ ಭವಿಷ್ಯದ ನಾಯಕನ ಬಗ್ಗೆ ಸುಳಿವು ಕೊಟ್ಟ ಕೋಚ್ ಮೆಕಲಮ್!

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ವಿದೇಶಿ ಆಟಗಾರರಿಗೆ ಸ್ಥಾನಗಳನ್ನು ಸಂಪೂರ್ಣ ಭರ್ತಿಯಾಗಿವೆ. ಇದೀಗ ಸುರೇಶ್ ರೈನಾ ಸ್ಥಾನಕ್ಕೆ ಭಾರತೀಯ ಆಟಗಾರನನ್ನೇ ತುಂಬಲು ಟೀಮ್ ಮ್ಯಾನೇಜ್ ಎದುರು ನೋಡುತ್ತಿದೆ. ಈ ಸ್ಥಾನಕ್ಕೆ ಹನುಮ ವಿಹಾತಿ ಸೂಕ್ತ ಆಟಗಾರರಾಗಿದ್ದಾರೆ. 2019ರ ಆವೃತ್ತಿಯಲ್ಲಿ ಆಂಧ್ರ ಆಟಗಾರನನ್ನು ಡೆಲ್ಲಿ ಕ್ಯಾಪಿಟಲ್ಸ್ ಫಿನಿಷರ್ ಸ್ಥಾನದಲ್ಲಿ ಆಡಿಸಿತ್ತು. ಆದರೆ, ಹನುಮ ವಿಹಾರಿ ಅಗ್ರ ಕ್ರಮಾಂಕದಲ್ಲಿ ಆಡುವ ಆಟಗಾರನಾಗಿದ್ದಾರೆ.
ರೈನಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಒಮ್ಮೆ ಸನ್ ರೈಸರ್ಸ್ ಹೈದರಾಬಾದ್ ಪರ ವಿಹಾರಿ ಮೂರನೇ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಅಲ್ಲದೆ, ಬಲಗೈ ಬ್ಯಾಟ್ಸ್ಮನ್ ಮಧ್ಯಮ ಕ್ರಮಾಂಕದಲ್ಲಿ ಬೌಲಿಂಗ್ ಕೂಡ ಮಾಡಬಲ್ಲರು. ಆದ್ದರಿಂದ ಚೆನ್ನೈ ವಿಹಾರಿ ಕಡೆಯೂ ಒಂದು ಕಣ್ಣನ್ನು ಇಟ್ಟಿದೆ.
'ಯಾರನ್ನು ಎಲ್ಲಿ ಆಡಿಸಬೇಕೆಂಬುದು ನಮಗೆ ಗೊತ್ತಿದೆ' : ಆರ್ಸಿಬಿ ಬಗೆಗಿನ ಗಾಳಿ ಸುದ್ದಿಗೆ ಹೇಸನ್ ಗರಂ!

ಕಳೆದ ವರ್ಷ ಡಿಸೆಂಬರ್ನಲ್ಲಿ ಜರುಗಿದ್ದ 2020ರ ಐಪಿಎಲ್ ಹರಾಜಿನಲ್ಲಿ ಕರ್ನಾಟಕದ ಬ್ಯಾಟ್ಸ್ಮನ್ ರೋಹನ್ ಕದಮ್ ಅವರ ಬಗ್ಗೆ ಹಲವು ಫ್ರಾಂಚೈಸಿಗಳು ಒಲವು ತೋರಿದ್ದವು. ಏಕೆಂದರೆ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮುಂಬೈ ವಿರುದ್ಧ 71 ರನ್ ಸಿಡಿಸಿದ್ದರು. ಆದರೆ ಅನಿರೀಕ್ಷಿತವಾಗಿ ಕದಮ್, 13ನೇ ಆವೃತ್ತಿಗೆ ಯಾವ ಫ್ರಾಂಚೈಸಿಗೂ ಆಯ್ಕೆಯಾಗಲಿಲ್ಲ.
ಈ ಬಾರಿ ಸುರೇಶ್ ರೈನಾ ಸ್ಥಾನಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಕರ್ನಾಟಕದ ಆಟಗಾರನನ್ನು ಆಯ್ಕೆ ಮಾಡಿಕೊಂಡರೆ, ರೋಹನ್ ಐಪಿಎಲ್ ಪದಾರ್ಪಣೆ ಮಾಡಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಕದಮ್, ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಎರಡು ಪಂದ್ಯಗಳಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದರು.
ಐಪಿಎಲ್ 2020: ಈ ಬಾರಿ ಆರ್ಸಿಬಿ ಪರ ಇನಿಂಗ್ಸ್ ಆರಂಭಿಸಲಿರುವ ಕನ್ನಡಿಗ.!

ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಹಠಾತ್ ನಿವೃತ್ತಿ ಘೋಷಿಸಿದ್ದ 33 ವರ್ಷದ ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ, ವೈಯಕ್ತಿಕ ಕಾರಣಗಳಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ ಎಂದು ಸಿಎಸ್ಕೆ ಸಿಇಒ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಅಂದಹಾಗೆ ರೈನಾ ಹಿಂದೆ ಸರಿಯಲುಇರುವ ನೈಜ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೇವಲ ವೈಯಕ್ತಿಕ ಕಾರಣ ಎಂದಷ್ಟೇ ಹೇಳಲಾಗಿದೆ. ಆದರೆ, ಶುಕ್ರವಾರವಷ್ಟೇ ಚೆನ್ನೈ ಸೂಪ್ ಕಿಂಗ್ಸ್ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ಆಗಸ್ಟ್ 21ಕ್ಕೆ ದುಬೈ ತಲುಪಿದ್ದ ಸಿಎಸ್ಕೆ ಆಟಗಾರರು 6 ದಿನಗಳ ಕ್ವಾರಂಟೈನ್ ಬಳಿಕ ಅಭ್ಯಾಸಕ್ಕೆ ಮುಂದಾಗಿದ್ದರು. ನಂತರ ಕೆಲ ಆಟಗಾರರಲ್ಲಿ ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ.
ಸಿಎಸ್ಕೆಗೆ ಬಿಗ್ ಶಾಕ್, ಐಪಿಎಲ್ 2020ಯಿಂದ ಸುರೇಶ್ ರೈನಾ ಔಟ್!
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...