ಬೆಂಗಳೂರು: ವಿಧಾನ ಪರಿಷತ್ಗೆ ವಲಸಿಗರ ಆಯ್ಕೆ ನಡೆಯುತ್ತಾ ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಬಿಎಸ್ವೈ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಮೂಲಕ ‘ಮಾತು ತಪ್ಪಿ ನಡೆಯುವುದಿಲ್ಲ’ ಎಂಬುವುದನ್ನು ಸಾಬೀತು ಪಡಿಸಿದ್ದಾರೆ. ಪಕ್ಷದ ಆಂತರಿಕ ಒತ್ತಡದ ನಡುವೆಯೂ ತಮ್ಮ ಆಪ್ತರಿಗೆ ಸ್ಥಾನ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸಮ್ಮಿಶ್ರ ಸರ್ಕಾರದ ಪತನದಲ್ಲಿ ಮಹತ್ವದ ಪಾತ್ರ ವಹಿಸಿ ಚುನಾವಣೆಯಲ್ಲಿ ಸೋತರೂ ವಿಶ್ವನಾಥ್ ಮೇಲ್ಮನೆ ಸೇರಿದ್ದಾರೆ. ಈ ನಡುವೆ ಚರ್ಚೆ ಕೂಡಾ ಆರಂಭವಾಗಿದ್ದು ಎಂಟಿಬಿ ನಾಗರಾಜ್ ಹಾಗೂ ವಿಶ್ವನಾಥ್ಗೆ ಗೂಟದ ಕಾರು ಭಾಗ್ಯ ದೊರಕುತ್ತಾ ಎಂಬುವುದು ಕೂಡಾ ಕುತೂಹಲ ಕೆರಳಿಸಿದೆ. ಎಚ್. ವಿಶ್ವನಾಥ್ಗೆ ಪರಿಷತ್ ಸ್ಥಾನ ನೀಡುವ ವಿಚಾರವಾಗಿ ಪಕ್ಷದ ಆಂತರಿಕ ವಲಯದಲ್ಲೇ ವಿರೋಧವಿತ್ತು. ಅನರ್ಹತೆಯ ಕಾನೂನಾತ್ಮಕ ತೊಡಕು ಮುಂದಿಟ್ಟುಕೊಂಡು ಇದು ಅಸಾಧ್ಯ ಎಂಬ ಅರ್ಥದಲ್ಲಿ ಕಮಲದ ಕೆಲವು ಮುಖಂಡರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆದರೆ ಈ ತೊಡಕುಗಳ ನಡುವೆಯೂ ಬಿಎಸ್ವೈ ವಿಶ್ವನಾಥ್ಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಮೇಲ್ಮನೆ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಎಚ್.ವಿಶ್ವನಾಥ್ ಅವರು ಸಚಿವ ಸ್ಥಾನ ಸಿಗಬಹುದೇ ಎಂಬ ಕುತೂಹಲವೂ ಕೆರಳಿದೆ. ಸಂಪುಟ ವಿಸ್ತರಣೆಯಾದಲ್ಲಿ ಸಾಕಷ್ಟು ಜನರು ಆಕಾಂಕ್ಷಿಗಳು ಸರದಿಯ ಸಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಉಮೇಶ್ ಕತ್ತಿ ಬಣ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದೆ. ಇನ್ನು ವಲಸಿಗರ ಪೈಕಿ ಆರ್. ಶಂಕರ್, ಎಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಕೂಡಾ ಗೂಟದ ಕಾರನ್ನು ಏರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಪೈಕಿ ಎಂಟಿಬಿ ನಾಗರಾಜ್ಗೆ ಸಚಿವ ಸ್ಥಾನ ನೀಡುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ಆರ್. ಶಂಕರ್ ಹಾಗೂ ಎಚ್ ವಿಶ್ವನಾಥ್ ಪೈಕಿ ಯಾರಿಗೆ ಈ ಭಾಗ್ಯ ಸಿಗುತ್ತದೆ ಎಂಬುವುದು ಸದ್ಯದ ಕುತೂಹಲ. ಮೇಲ್ಮನೆ ಸದಸ್ಯರ ಆಯ್ಕೆ ವಿಚಾರದಲ್ಲಿ ಎಚ್ಚರಿಕೆಯ ನಡೆಯ ಮೂಲಕ ಸಂಭಾಳಿಸಿಕೊಂಡು ಹೆಜ್ಜೆ ಇಟ್ಟ ಸಿಎಂ ಅವರಿಗೆ ಸಂಪುಟ ವಿಸ್ತರಣೆ ಕೂಡಾ ಸವಾಲಿನ ಸಂಗತಿಯಾಗಿದೆ. ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುವುದೇ ಸದ್ಯದ ಕುತೂಹಲ.
from India & World News in Kannada | VK Polls https://ift.tt/2WMcTlz