ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ಕಂಡ ಶ್ರೆಷ್ಠ ಸ್ಪಿನ್ನರ್ಗಳಲ್ಲಿ ಕೂಡ ಒಬ್ಬರು. ಟೆಸ್ಟ್ ಕ್ರಿಕೆಟ್ನ ಒಂದೇ ಇನಿಂಗ್ಸ್ನಲ್ಲಿ 10 ವಿಕೆಟ್ಗಳನ್ನು ಪಡೆದ ವಿಶ್ವದ ಎರಡನೇ ಬೌಲರ್ ಎಂಬ ಸಾಧನೆಗೆ ಅನಿಲ್ ಕುಂಬ್ಳೆ 1999ರ ಫೆಬ್ರುವರಿ 7ರಂದು ಭಾಜನರಾಗಿದ್ದರು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧಈ ಸಾಧನೆ ಮೂಡಿಬಂದಿದ್ದು ವಿಶೇಷ. ಪಂದ್ಯದ ನಾಲ್ಕನೇ ದಿನ ಪಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಅನಿಲ್ ಕುಂಬ್ಳೆ ತಮ್ಮ ಸ್ಪಿನ್ ಮೋಡಿಯಿಂದ ಪಾಕಿಸ್ತಾನ ಬ್ಯಾಟಿಂಗ್ ವಿಭಾಗವನ್ನು ಪತನಗೊಳಿಸಿದರು. ಪಾಕಿಸ್ತಾನ 207 ರನ್ಗಳಿಗೆ ಆಲೌಟ್ ಆಯಿತು, ಭಾರತ 212 ರನ್ಗಳಿಂದ ಜಯ ಸಾಧಿಸಿತು. ಅಂದಿನ ವಿಶೇಷ ದಿನದಂದು ಪಾಕಿಸ್ತಾನ ಕೊನೆಯ ವಿಕೆಟ್ ಪಡೆಯುವ ಅಂಚಿನಲ್ಲಿ ತಮ್ಮ ಮನಸಿನಲ್ಲಿ ಉಂಟಾದ ಭಾವನೆಗಳನ್ನು ಸ್ಪಿನ್ ದಿಗ್ಗಜ ಹಂಚಿಕೊಂಡಿದ್ದಾರೆ. ಕುಂಬ್ಳೆ 10ನೇ ವಿಕೆಟ್ ಪಡೆಯಬೇಕೆಂಬ ಉದ್ದೇಶದಿಂದ ಜಾವಗಲ್ ಶ್ರೀನಾಥ್, ಅಗಲವಾದ ಎಸೆತಗಳಿಗೆ ಮೊರೆ ಹೋದ ಸನ್ನಿವೇಶದ ದೃಶ್ಯವೂ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸಿನಲ್ಲಿ ಕೆತ್ತಲಾಗಿದೆ. ಮತ್ತೊಂದು ತುದಿಯಲ್ಲಿ ಕರ್ನಾಟಕ ಸಹ ಆಟಗಾರ ಬೌಲಿಂಗ್ ಮಾಡುತ್ತಿದ್ದು, ಮುಂದಿನ ಓವರ್ನಲ್ಲಿ ತಾನು ಹೇಗೆ ವಿಕೆಟ್ ಪಡೆಯಲು ಸಹಾಯಕವಾಯಿತು ಎಂಬುದನ್ನು ಕುಂಬ್ಳೆ ಬಹಿರಂಗಪಡಿಸಿದರು. "ಟೀ ವಿರಾಮದ ಬಳಿಕ, ನಾನು 7, 8 ಹಾಗೂ 9 ವಿಕೆಟ್ಗಳನ್ನು ಪಡೆದು ನನ್ನ ಓವರ್ ಮುಗಿಸಿದೆ. ಮತ್ತೊಂದು ಓವರ್ ಜಾವಗಲ್ ಶ್ರೀನಾಥ್ ಬೌಲಿಂಗ್ ಮಾಡಬೇಕಿತ್ತು. ಅವರಿಗೆ ಈ ಓವರ್ ಬೌಲಿಂಗ್ ಮಾಡುವುದು ಕಷ್ಟವಾಗಿತ್ತು," ಎಂದು ಕುಂಬ್ಳೆ ಜಿಂಬಾಂಬ್ವೆ ತಂಡದ ಮಾಜಿ ಆಟಗಾರ ಪೊಮ್ಮಿ ಎಂಬಾಂಗ್ವ ಅವರೊಂದಿಗೆ ಇನ್ಸ್ಟಾಗ್ರಾಮ್ ಲೈವ್ ಚಾಟ್ನಲ್ಲಿ ಹೇಳಿದರು. "ತಮ್ಮ ಎಲ್ಲ ಕೌಶಲಗಳನ್ನು ಬದಿಗಿಟ್ಟು ಶ್ರೀನಾಥ್ ವೈಡ್ ಎಸೆತಗಳನ್ನು ಹಾಕುತ್ತಿದ್ದಾರೆ. ಆದರೆ, ತಾನು ಇನ್ನೂ ಒಂದು ಓವರ್ ಮಾಡಬೇಕು ಎಂದು ನನಗೆ ಅವರನ್ನು ಕೇಳಬೇಕು ಎನಿಸಲಿಲ್ಲ, ನನ್ನ ಮೇಲೆ ನಂಬಿಕೆ ಇತ್ತು. ವಾಸೀಮ್ಗೆ ಒಂದು ರನ್ ನೀಡಬೇಕೆಂದು ನನಗೆ ಅನಿಸಿತ್ತು. ಮತ್ತೊಂದು ಓವರ್ ಬೌಲಿಂಗ್ ಮಾಡಬೇಕೆಂದು ನಿರೀಕ್ಷೆ ಮಾಡಿದ್ದೆ, ಆದರೆ, ಈ ವಿಷಯನ್ನು ಕೇಳಲು ಮುಜುಗರವಾಗುತ್ತಿತ್ತು. ಆಗ ನಾನು ವಿಧಿಗೆ ಅಂಟಿಕೊಂಡೆ. ಪಾಕಿಸ್ತಾನ ವಿರುದ್ಧ ಆ ಇನಿಂಗ್ಸ್ ಶ್ರೇಷ್ಠವಾದದ್ದು," ಎಂದು ಕುಂಬ್ಳೆ ಸ್ಮರಿಸಿಕೊಂಡರು. ಅದಕ್ಕೂ ಮುನ್ನ ಚೆನ್ನೈ ಪಂದ್ಯದಲ್ಲಿ ಭಾರತ, 12 ರನ್ಗಳಿಂದ ಪಾಕಿಸ್ತಾನ ವಿರುದ್ಧ ಸೋಲು ಅನುಭವಿಸಿತ್ತು. ತವರು ಅಭಿಮಾನಿಗಳ ಎದುರು ಸರಣಿ ಸೋಲದೇ ಇರುವುದು ಭಾರತ ತಂಡಕ್ಕೆ ಅಂದು ಪ್ರತಿಷ್ಠೆಯಾಗಿತ್ತು. ಎರಡನೇ ಪಂದ್ಯದಲ್ಲಿ 420 ರನ್ ಗುರಿ ಹಿಂಬಾಲಿಸಿದ ಪಾಕಿಸ್ತಾನ ತಂಡದ ಆರಂಭಿಕರಾದ ಸಯೀದ್ ಅನ್ವರ್ ಹಾಗೂ ಶಾಹೀದ್ ಅಫ್ರಿದಿ ಮೊದಲನೇ ವಿಕೆಟ್ಗೆ 101 ರನ್ ಕಲೆ ಹಾಕಿದರು. ಅಂದಿನ ನಾಯಕರಾಗಿದ್ದ ಮೊಹಮ್ಮದ್ ಅಜರುದ್ದೀನ್, ಲಂಚ್ ಹಾಗೂ ಟೀಮ್ ವಿರಾಮದ ನಡುವೆ ಅನಿಲ್ ಕುಂಬ್ಳೆಯನ್ನು ನಿಲ್ಲಿಸದೇ ಬೌಲಿಂಗ್ ಮಾಡಿಸಿದ್ದರು. ಲೆಗ್ ಸ್ಪಿನ್ನರ್ ಮೊದಲನೇ ವಿಕೆಟ್ ಜತೆಯಾಟವನ್ನು ಮುರಿದರು. ನಂತರ ಇನ್ನುಳಿದ 9 ವಿಕೆಟ್ಗಳನ್ನು ಪಡೆಯುವವರೆಗೂ ಕುಂಬ್ಳೆ ನಿಲ್ಲಲೇ ಇಲ್ಲ. "ಈ ಘಟನೆ ನನಗೆ ನಿನ್ನೆ ನಡೆದಂತೆ ಭಾಸವಾಗುತ್ತದೆ. ಅದು ನನ್ನ ಪಾಲಿಗೆ ವಿಶೇಷವಾದದ್ದು. ತುಂಬಾ ವರ್ಷಗಳ ನಂತರ ಪಾಕಿಸ್ತಾನ, ಭಾರತ ಪ್ರವಾಸ ಮಾಡಿದ್ದರಿಂದ ನಮ್ಮ ಮೇಲೆ ಹೆಚ್ಚಿನ ಒತ್ತಡವಿತ್ತು. ಕೋಟ್ಲಾ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿದೆವು. ಪಿರೋಜ್ ಶಾ ಕೋಟ್ಲಾ ವಿಕೆಟ್ ಬೌನ್ಸ್ ಇದ್ದಿದ್ದರಿಂದ ನನ್ನ ಬೌಲಿಂಗ್ ಪರಿಣಾಮಕಾರಿಯಾಗಿತ್ತು," ಎಂದು ಭಾರತ ತಂಡದ ಮಾಜಿ ನಾಯಕ ಹೇಳಿದರು. "ಮಧ್ಯಾಹ್ನದ ಉಪಹಾರದವರೆಗೂ ಪಾಕಿಸ್ತಾನ ಅದ್ಭುತ ಆರಂಭವನ್ನು ಕಂಡಿತ್ತು. ಒಂದೇ ಒಂದು ವಿಕೆಟ್ನ ವಿಷಯ ಎಂದು ನನಗೂ ಅರಿವಿತ್ತು. ಭೋಜನ ವಿರಾಮದ ಬಳಿಕ ನಾನು, ಬೌಲಿಂಗ್ ತುದಿಯನ್ನು ಬದಲಾಯಿಸಿದೆ. ಆ ಮೇಲೆ ಒಂದು, ನಂತರ ಎರಡು ವಿಕೆಟ್ ಪಡೆದುಕೊಂಡೆ. ನಂತರ ಭೋಜನ ವಿರಾಮದಿಂದ ಟೀಮ್ ವಿರಾಮದವರೆಗೂ ನಿಲ್ಲಿಸದೇ ಬೌಲಿಂಗ್ ಮಾಡಿದೆ. ಸ್ವಲ್ಪ ಸುಸ್ತು ಆಗಿದ್ದರೂ, ಈ ಹಿಂದಿನ ಪ್ರದರ್ಶನವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಅದ್ಭುತ ಅವಕಾಶವಿದೆ ಎಂದು ಅರಿತುಕೊಂಡಿದ್ದೆ," ಎಂದು ಅನಿಲ್ ಕುಂಬ್ಳೆ ವೃತ್ತಿ ಜೀವನದ ಶ್ರೇಷ್ಠ ಪಂದ್ಯವನ್ನು ಸ್ಮರಿಸಿಕೊಂಡರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/30KusU3