ದೇಶೀಯ ವಿಮಾನ ಸಂಚಾರಕ್ಕೆ 'ನೋ' ಎಂದ ಮಹಾರಾಷ್ಟ್ರ, ಪ.ಬಂಗಾಳ: ಕಾರಣ?

ನವದೆಹಲಿ: ನಾಳೆ(ಮೇ 25)ಯಿಂದ ದೇಶದಾದ್ಯಂತ ಪುನರಾರಂಭವಾಗಲಿದ್ದು, ದೇಶದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳು ಹಾಗೂ ವಿಮಾನಯಾನ ಸಂಸ್ಥೆಗಳು ಸರ್ವ ಸನ್ನದ್ಧವಾಗಿವೆ. ಆದರೆ ದೇಶೀಯ ವಿಮಾನ ಹಾರಾಟವನ್ನು ಒಪ್ಪದ ಹಾಗೂ ರಾಜ್ಯ ಸರ್ಕಾರಗಳು, ಮೇ 31ರವರೆಗೆ ವಿಮಾನ ಸಂಚಾರಕ್ಕೆ ಅನುಮತಿ ನೀಡುವುದು ಸಾಧ್ಯವಿಲ್ಲ ಎಂದು ಹೇಳಿವೆ. ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಜ್ಯದಲ್ಲಿ ಕೊರೊನಾ ವೈರಸ್ ಹಾವಳಿ ಉತ್ತುಂಗದಲ್ಲಿದ್ದು, ಈ ವೇಳೆ ವಿಮಾನ ಸಂಚಾರಕ್ಕೆ ಅನುಮತಿ ನೀಡಿದರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆಯೇ ಸರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ 47,190 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇದು ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಪ್ರಕರಣವಾಗಿದೆ. ಇದೇ ಹಿನ್ನೆಲೆಯಲ್ಲಿ ಮೇ 31ರ ಬಳಿಕವೂ ಲಾಕ್‌ಡೌನ್ ವಿಸ್ತರಿಸುವ ಕುರಿತು ರಾಜ್ಯ ಸರ್ಕಾರ ಚಿಂತಿಸುತ್ತಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಪಶ್ಚಿಮ ಬಂಗಾಳ: ಇನ್ನು ಪಶ್ಚಿಮ ಬಂಗಾಳ ಕೂಡ ಮೇ. 31ರವರೆಗೆ ದೇಶೀಯ ವಿಮಾನ ಸಂಚಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳಿದೆ. ಅಂಫಾನ್ ಚಂಡಮಾರುತದ ಕಾರಣ ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯ ಸಹಜ ಸ್ಥಿತಿಗೆ ಮರಳುವವರೆಗೂ ವಿಮಾನ ಸಂಚಾರ ಬೇಡ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ತಮಿಳುನಾಡು: ಇನ್ನು ತಮಿಳುನಾಡು ಕೂಡ ದೇಶೀಯ ವಿಮಾನ ಸಂಚಾರಕ್ಕೆ ಅನುಮತಿ ನೀಡಲು ಹಿಂದೇಟು ಹಾಕುತ್ತಿದೆ. ಮಹಾರಾಷ್ಟ್ರದ ಬಳಿಕ ಅತಿಹೆಚ್ಚು ಕೊರೊನಾ ವೈರಸ್ ಪ್ರಕರಣ ದಾಖಲಾಗಿರುವ ಎರಡನೇ ರಾಜ್ಯ ವಾಗಿರುವ ತಮಿಳುನಾಡು, ಮೇ 31ರವೆರೆಗೆ ವಿಮಾನ ಸಂಚಾರ ಬೇಡ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ ತುರ್ತು ಸೇವೆಗೆ ಅನುಗುಣವಾಗಿ ಏರ್ ಆಂಬುಲೆನ್ಸ್ ಹಾಗೂ ವಿದೇಶಗಳಲ್ಲಿರುವ ಭಾರತೀಯರನ್ನು ಕರೆತರುವ ವಿಮಾನಗಳ ಸಂಚಾರಕ್ಕೆ ಮೂರೂ ರಾಜ್ಯಗಳು ಬೇಡ ಎಂದಿಲ್ಲ.


from India & World News in Kannada | VK Polls https://ift.tt/2Xo6Nr3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...