ಐಪಿಎಲ್‌ ಮುಂದೂಡಿದ್ದು ನನಗಂತೂ ಒಳ್ಳೇದಾಯ್ತು ಎಂದ ಟೀಮ್‌ ಇಂಡಿಯಾ ವೇಗಿ!

ಜೈಪುರ: ಕೊರೊನಾ ವೈರಸ್‌ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಮಾರ್ಚ್ 22ರಂದು (ಭಾನುವಾರ) ದೇಶದಾದ್ಯಂತ ಸ್ವಘೋಷಿತ ಬಂಧ್‌ ಮಾದರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿರುವ 'ಜನತಾ ಕರ್ಫ್ಯೂ' ಆಚರಿಸಲಾಯಿತು. ಇದೇ ವೇಳೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯನ್ನು ಕೂಡ ಅನಿರ್ಧಿಷ್ಟಾವಧಿಯ ಕಾಲ ಮುಚ್ಚಲಾಗಿದ್ದು, ಗಾಯದ ಸಮಸ್ಯೆಗಳಿಂದ ಚೇತರಿಸುತ್ತಿದ್ದ ಎಲ್ಲಾ ಕ್ರಿಕೆಟಿಗರನ್ನು ಮನೆಗೆ ಕಳುಹಿಸಿಕೊಡಲಾಗಿದೆ. ಇದೇ ವೇಳೆ ಎನ್‌ಸಿಎದಲ್ಲಿ ಗಾಯದ ಸಮಸ್ಯೆ ಕಾರಣ ಪುನರ್ವಸತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಟೀಮ್‌ ಇಂಡಿಯಾದ ಯುವ ಬಲಗೈ ವೇಗದ ಬೌಲರ್‌ ದೀಪಕ್‌ ಚಹರ್‌ ಕೂಡ ಮನೆಗೆ ಹಿಂದಿರುಗಿದ್ದು, ಆಗ್ರಾದಲ್ಲಿರುವ ತಮ್ಮದೇ ತರಬೇತಿ ಶಿಬಿರದಲ್ಲಿ ಅಭ್ಯಾಸ ಮುಂದುವರಿಸಲಿದ್ದಾರೆ. ಈ ಕುರಿತು ಮಾತಿಗಿಳಿದ ಚಹರ್‌, ಐಪಿಎಲ್‌ ಟೂರ್ನಿಯನ್ನು ಮೂಂದೂಡಿರುವುದು ತಮ್ಮ ಪಾಲಿಗೆ ಒಳ್ಳೆಯದ್ದೇ ಆಗಿದ್ದು, ಇದರಿಂದ ಸಂಪೂರ್ಣವಾಗಿ ಚೇತರಿಸಲು ಹೆಚ್ಚು ಸಮಯ ಸಿಕ್ಕಂತಾಗಿದೆ ಎಂದಿದ್ದಾರೆ. "ಮಾರ್ಚ್‌ 19ರಂದು ಎನ್‌ಸಿಎ ಮುಚ್ಚಲಾಗಿದೆ ಎಂದು ಘೋಷಿಸಲಾಯಿತು. ಕೊರೊನಾ ವೈರಸ್‌ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇದೊಂದು ಉತ್ತಮ ನಿರ್ಧಾರ. ಏಕೆಂದರೆ ನಾವೆಲ್ಲರೂ ಹೋಟೆಲ್‌ನಲ್ಲಿ ಉಳಿದು ಅಲ್ಲಿನ ಆಹಾರ ಸೇವಿಸುತ್ತಿದ್ದೆವು. ಸದ್ಯದ ಪರಿಸ್ಥಿತಿಗಳಲ್ಲಿ ಇದು ಸುರಕ್ಷಿತವಲ್ಲ," ಎಂದು ಚಹರ್‌ ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. ರಣಜಿ ಕ್ರಿಕೆಟ್‌ನಲ್ಲಿ ರಾಜಸ್ಥಾನ್‌ ತಂಡವನ್ನು ಪ್ರತಿನಿಧಿಸುವ ದೀಪಕ್‌, ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರವಾಸಿ ವೆಸ್ಟ್‌ ಇಂಡೀಸ್ ವಿರುದ್ಧ ವೈಝಾಗ್‌ನಲ್ಲಿ ನಡೆದ ಮೊದಲ ಒಡಿಐ ಪಂದ್ಯದ ವೇಳೆ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದರು. "ಆಗ್ರಾದಲ್ಲಿ ಇರುವ ನಮ್ಮ ತಂದೆಯ ಅಕಾಡೆಮಿಯನ್ನೂ ಮುಚ್ಚಲಾಗಿದೆ. ಹೀಗಾಗಿ ಅಲ್ಲಿ ಏಕಾಂಗಿಯಾಗಿ ಅಭ್ಯಾಸ ಮಾಡಲು ಸಾಧ್ಯ. ಎರಡು ದಿನಗಳ ಹಿಂದಷ್ಟೇ ಕೆಲ ಜಿಮ್‌ ಸಲಕರಣೆಗಳನ್ನು ಆರ್ಡರ್‌ ಮಾಡಿದ್ದೇನೆ. ಹೀಗಾಗಿ ಕಸರತ್ತುಗಳು ಮುಂದುವರಿಯುವಂತೆ ನೋಡಿಕೊಳ್ಳುತ್ತೇನೆ," ಎಂದು 27 ವರ್ಷದ ಬಲಗೈ ವೇಗಿ ಹೇಳಿಕೊಂಡಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡುವ ದೀಪಕ್‌, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಮೊತ್ತ ಮೊದಲ ವೇಗದ ಬೌಲರ್‌ ಆಗಿದ್ದಾರೆ. ಇದೀಗ ಐಪಿಎಲ್‌ಗೂ ಮೊದಲು ತಮ್ಮ ಸಂಪೂರ್ಣ ಫಿಟ್ನೆಸ್‌ ಕಂಡುಕೊಳ್ಳುವತ್ತ ಎದುರು ನೋಡುತ್ತಿದ್ದಾರೆ. "ವೈಯಕ್ತಿಕ ದೃಷ್ಟಿಕೋನದಿಂದ ಹೇಳುವುದಾದರೆ ಕೊರೊನಾ ವೈರಸ್‌ ಕಾರಣ ಐಪಿಎಲ್‌ 2020 ಟೂರ್ನಿಯನ್ನು ಮುಂದೂಡಿರುವುದು ನನ್ನ ಪಾಲಿಗೆ ಒಳ್ಳೆಯದು. ಇದರಿಂದ ನನ್ನ ಚೇತರಿಕೆಗೆ ಹೆಚ್ಚಿನ ಸಮಯ ಸಿಕ್ಕಂತಾಗಿದೆ. ಐಪಿಎಲ್‌ ನಿಗದಿಯಂತೆ ಮಾರ್ಚ್ 29ಕ್ಕೆ ಶುರುವಾಗಿದ್ದರೆ ಆರಂಭದ ಕೆಲ ಪಂದ್ಯಗಳಿಂದ ನಾನು ಹೊರಗುಳಿಯುವಂತಾಗುತ್ತಿತ್ತು," ಎಂದು ಚಹರ್‌ ಹೇಳಿದ್ದಾರೆ. ವಿರುದ್ಧ ಹೋರಾಡಲು ಐಪಿಎಲ್‌ ಟೂರ್ನಿಯನ್ನು ಏಪ್ರಿಲ್ 15ರವರೆಗೆ ಮುಂದೂಡಲಾಗಿದ್ದು ಪರಿಸ್ಥಿತಿ ಸುಧಾರಿಸದೇ ಇದ್ದರೆ ಈ ಬಾರಿ ಟೂರ್ನಿಯನ್ನು ರದ್ದು ಪಡಿಸುವ ಸಾಧ್ಯತೆ ಇದೆ. ಜೊತೆಗೆ ಜುಲೈ -ಸೆಪ್ಟೆಂಬರ್‌ ಅವಧಿಯಲ್ಲಿ ಐಪಿಎಲ್‌ ಆಡಿಸುವ ಕುರಿತಾಗಿಯೂ ಬಿಸಿಸಿಐ ಸರ್ಕಸ್‌ ಮಾಡುತ್ತಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2WBeQ5c

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...