ಹೊಸದಿಲ್ಲಿ: ಚೀನಾದ ವುಹಾನ್ ನಗರದಲ್ಲಿ ಹುಟ್ಟಿಕೊಂಡಿರುವ ಮಾರಣಾಂತಿಕ , ಈಗ ವಿಶ್ವದೆಲ್ಲೆಡೆ ಅತ್ಯಂತ ಭೀಕರವಾಗಿ ಪಸರಿಸಿದೆ. ಕೋವಿಡ್ 19 ಸೋಂಕಿಗೆ ಆಧುನಿಕ ಲೋಕ ತತ್ತರಿಸಿ ಹೋಗಿದೆ. ಕೊರೊನಾ ವೈರಸ್ ಮಟ್ಟ ಹಾಕಲು ಇದುವರೆಗೆ ಯಾವುದೇ ರೀತಿಯ ಔಷಧಿಯನ್ನು ಕಂಡು ಹುಡುಕಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೇ ಸಾಂಕ್ರಾಮಿಕ ಎಂದು ಘೋಷನೆ ಮಾಡಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಎಚ್ಚರಿಸಿದೆ. ಇಲ್ಲಿ ಬೆಚ್ಚಿ ಬೀಳಿಸುವ ವಿಷಯ ಏನೆಂದರೆ ಕೊರೊನಾ ವೈರಸ್ ಚೀನಾದ ಪೂರ್ವಯೋಚಿತ ಕೃತ್ಯವೇ ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಭಾರತೀಯ ಕ್ರಿಕೆಟಿಗ ಬಿಡುಗಡೆ ಮಾಡಿರುವ ವಿಡಿಯೋ ಹಲವಾರು ವದಂತಿಗಳಿಗೆ ಎಡೆ ಮಾಡಿಕೊಟ್ಟಿದೆ. ಎರಡು ವರ್ಷಗಳ ಹಿಂದೆ 2018ರಲ್ಲಿ ವಿಡಿಯೋ ಜಾಲತಾಣ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾದ ಚೀನಾದ ವೆಬ್ ಸಿರೀಸ್ನಲ್ಲಿ ಕೊರೊನಾ ವೈರಸ್ ಅದರ ಪರಿಣಾಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇದನ್ನು ಭಜ್ಜಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪೂರ್ವಯೋಜಿತ ಕೃತ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಗಮನಾರ್ಹ ಅಂಶವೆಂದರೆ ಚೀನಾದಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣ ಕಂಡುಬಂದಿತ್ತು. ಇದೀಗ ವೈರಸ್ ಹರಡುವುದನ್ನು ಬಹುತೇಕ ನಿಯಂತ್ರಿಸಿದ್ದೇವೆ ಎಂದು ಸ್ವಯಂ ಘೋಷಿಸಿದೆ. ಇನ್ನೊಂದೆಡೆ ವುಹಾನ್ ನಗರದಲ್ಲಿ ಆರಂಭವಾಗಿರುವ ಈ ವೈರಸ್ ಇಡೀ ವಿಶ್ವವನ್ನೇ ಆವರಿಸಿದೆ. ಆದರೆ ಪ್ರತಿಷ್ಠಿತ ನಗರವಾದ ಬೀಜಿಂಗ್ ಹಾಗೂ ಶಾಂಘೈ ನಗರಕ್ಕೆ ರೋಗ ಹರಡಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ. ಅದೇಗೆ ಸಾಧ್ಯವಾಯಿತು? ಚೀನಾ ಏನನ್ನೋ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ. ಇಡೀ ಜಗತ್ತಿಗೆ ಈ ಬಗ್ಗೆ ಉತ್ತರ ನೀಡಬೇಕು ಎಂದು ಭಜ್ಜಿ ರಿ ಟ್ವೀಟ್ ಮಾಡಿದ್ದಾರೆ. ಇದುವರೆಗಿನ ಅಧಿಕೃತ ಮಾಹಿತಿಗಳ ಪ್ರಕಾರ ಚೀನಾದಲ್ಲಿ 81340 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಪೈಕಿ 3292 ಮಂದಿ ಸಾವಿಗೆ ಶರಣಾಗಿದ್ದು, 74,588 ಮಂದಿ ಚೇತರಿಕೆಯನ್ನು ಪಡೆದಿದ್ದಾರೆ. ಅಂದ ಹಾಗೆ ಭಾರತದಲ್ಲಿ 724 ಮಂದಿಯಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದ್ದು, 17 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಏಪ್ರಿಲ್ 14ರ ವರೆಗೆ ಲೌಕ್ ಡೌನ್ ಘೋಷಣೆ ಮಾಡಲಾಗಿದೆ. ಇದನ್ನು ಉಲ್ಲಂಘಿಸಿ ಕೆಲವು ಜನರು ರೋಡ್ಗಳಿದು ಪೊಲೀಸ್ ಮೇಲೆಯೇ ಹಲ್ಲೆ ಮಾಡುತ್ತಿರುವ ಪ್ರಕರಣ ಆಘಾತಕಾರಿಯೆನಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಭಜ್ಜಿ, "ನಾವು ನಮ್ಮ ಮನೋಸ್ಥಿತಿಯನ್ನು ಬದಲಾಯಿಸಬೇಕಿದೆ ಎಂದರು. ಪೊಲೀಸರು ತಮ್ಮ ಜೀವವನ್ನೇ ಪಣಕ್ಕಿಟ್ಟು ನಮ್ಮ ರಕ್ಷಣೆಗಾಗಿ ಬಂದಿದ್ದಾರೆ. ಅವರಿಗೂ ಕುಟುಂಬವಿದೆ. ಆದರೂ ದೇಶಕ್ಕಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಉತ್ತಮ ಭವಿಷ್ಯಕ್ಕಾಗಿ ಮನೆಯಲ್ಲೇ ಇದ್ದುಕೊಂಡು ಯಾಕೆ ಜವಾಬ್ದಾರಿತನ ಮೆರೆಯಬಾರದು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2UlqMGn