ಅಧಿವೇಶನ ನಡೀತಿದೆ ಆದರೆ ನೀವೇ ಕಾಣಿಸ್ತಿಲ್ಲ: ಪ್ರಧಾನಿಗೆ ಡೆರೆಕ್ ಒ'ಬ್ರಿಯೆನ್ ಛಾಟಿ!

ನವದೆಹಲಿ: ಕೊರೊನಾ ವೈರಸ್ ಭೀತಿಯ ನಡುವೆಯೂ ಮುಂದುವರೆಸುವಂತೆ ಪ್ರಧಾನಿ ಮೋದಿ ನೀಡಿದ್ದ ಸಲಹೆಯಂತೆ, ಲೋಕಸಭೆ ಹಾಗೂ ರಾಜ್ಯಸಭೆ ಸಂಸದರು ಕಲಾಪಗಳಲ್ಲಿ ಭಾಗವಹಿಸುತ್ತಿದ್ದಾರೆ. ಕೆಲವರು ಪ್ರಧಾನಿ ಮೋದಿ ಇಚ್ಛೆಯಂತೆ ಕಲಾಪಗಳಲ್ಲಿ ಭಾಗವಹಿಸುತ್ತಿದ್ದರೆ, ಮತ್ತೆ ಕೆಲವರು ಪ್ರಧಾನಿ ಹೇಳಿದ್ದಾರಲ್ಲ ಎಂಬ ಒತ್ತಾಯದ ಮನೋಭಾವದಿಂದ ಕಲಾಪಗಳಿಗೆ ಹಾಜರಾಗುತ್ತಿದ್ದಾರೆ. ಈ ಮಧ್ಯೆ ಬಜೆಟ್ ಅಧಿವೇಶನ ಮುಂದುವರೆಯಲಿ ಎಂಬ ಪ್ರಧಾನಿ ಮೋದಿ ಆಶಯವನ್ನು ಪ್ರಶ್ನಿಸಿರುವ ಟಿಎಂಸಿ ಸಂಸದ ಡೆರೆಕ್ ಒ'ಬ್ರಿಯೆನ್, ನಾವೇನೋ ಕಲಾಪದಲ್ಲಿ ಭಾಗವಹಿಸುತ್ತಿದ್ದೇವೆ. ಆದರೆ ನಮಗೆ ಆದೇಶ ನೀಡಿದ ಪ್ರಧಾನಿಯೇ ಸಂಸತ್ತಿನಲ್ಲಿ ಕಾಣಿಸುತ್ತಿಲ್ಲ ಎಂದು ಛಾಟಿ ಬೀಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಡೆರೆಕ್ ಒ'ಬ್ರಿಯೆನ್, ಕಲಾಪದ ಮುಂದುವರೆಯಲಿ ಎಂದ ಪ್ರಧಾನಿಯೇ ಸಂಸತ್ತಿನ ಮೊಗಸಾಲೆಯಲ್ಲಿ ಕಾಣಿಸುತ್ತಿಲ್ಲ. ಅಂದರೆ ತಮ್ಮದೇ ಆದೇಶ ಪ್ರಧಾನಿಗೆ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ನಿನ್ನೆಯಷ್ಟೇ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, 65 ವರ್ಷ ಮೇಲ್ಪಟ್ಟವರು ಮನೆ ಬಿಟ್ಟು ಹೊರಬರದಂತೆ ಮನವಿ ಮಾಡಿದ್ದಾರೆ. ಇದು ಸಂಸದರಿಗೆ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿರುವ ಡೆರೆಕ್, ಸ್ವತಃ ಪ್ರಧಾನಿ ಕೂಡ 65 ವರ್ಷ ಮೇಲ್ಪಟ್ಟವರು ಎಂದು ನೆನಪಿಸಿದ್ದಾರೆ. ದೇಶಕ್ಕೆ ನಿನ್ನೆ ಪ್ರಧಾನಿ ಮೋದಿ ನೀಡಿದ ಸಲಹೆಗಳು ಸಂಸತ್ತಿಗೂ ಅನ್ವಯಿಸುತ್ತವೆ ಎಂದು ಭಾವಿಸಿದ್ದೇನೆ. ಅಷ್ಟಕ್ಕೂ ಪ್ರಧಾನಿ ಆದೇಶ ಪಾಲಿಸುತ್ತಿರುವ ನಾವು ಸಂಸತ್ತಿಗೆ ಹಾಜರಾಗುತ್ತಿದ್ದರೆ, ನಮಗೆ ಆದೇಶ ನೀಡಿದ ಪ್ರಧಾನಿಯೇ ಸಂಸತ್ತಿನಲ್ಲಿ ಕಾಣಿಸುತ್ತಿಲ್ಲ ಎಂದು ಡೆರೆಕ್ ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯಸಭೆಯ ಶೇ.44ರಷ್ಟು ಹಾಗೂ ಲೋಕಸಭೆಯ ಶೇ.33ರಷ್ಟು ಸಂಸದರು 65 ವರ್ಷ ಮೇಲ್ಪಟ್ಟವರಾಗಿದ್ದು, ಕೊರೊನಾ ಭೀತಿ ಈ ಹಿರಿಯ ಸಂಸದರನ್ನು ಕಾಡುವುದಿಲ್ಲವೇ ಎಂದು ಡೆರೆಕ್ ಪ್ರಶ್ನಿಸಿದ್ದಾರೆ. ಅಲ್ಲದೇ ಕೂಡಲೇ ಅಧಿವೇಶನವನ್ನು ಮೊಟುಕುಗೊಳಿಸುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.


from India & World News in Kannada | VK Polls https://ift.tt/2UknqCA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...