ಯಶಸ್ವಿಯಾಗುತ್ತಾ “ಜನತಾ ಕರ್ಫ್ಯೂ” ! ಏನಂತಾರೆ ನೆಟ್ಟಿಗರು?

ಬೆಂಗಳೂರು: ದೇಶಾದ್ಯಂತ ಹರಡುತ್ತಿರುವ ಕೋವಿಡ್‌-19 ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜನರು ಸ್ವತಃ ನಿರ್ಬಂಧಕ್ಕೆ ಒಳಗಾಗುವ “ಜನತಾ ಕರ್ಫ್ಯೂ”ವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಘೋಷಣೆ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಕೊರೊನಾದ ವಿರುದ್ಧ ಜನರ ಹೋರಾಟಕ್ಕೆ ಪ್ರಧಾನಿ ನೀಡಿದ ಸಲಹೆಗೆ ಪರ ಹಾಗೂ ವಿರುದ್ಧವಾದ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಭಾನುವಾರ ನಡೆಯಲಿರುವ ಜನತಾ ಕರ್ಫ್ಯೂವನ್ನು ಯಶಸ್ವಿಗೊಳಿಸಲು ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಹಲವರು ವಿನಂತಿ ಮಾಡಿಕೊಂಡಿದ್ದಾರೆ. ಒಂದು ದಿನಗಳ ಕಾಲ ಮನೆಯಲ್ಲಿ ಉಳಿದುಕೊಂಡು ಕೊರೊನಾ ವಿರುದ್ಧದ ದೇಶದ ಜನರ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ವಿನಂತಿಸಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಟ್ವಿಟ್ಟರ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದು “ಭಾನುವಾರ ನಡೆಯಲಿರುವ ಜನತಾ ಕರ್ಫ್ಯೂಯಲ್ಲಿ ಭಾಗಿಯಾಗಿ ಸಂಕಲ್ಪ ಹಾಗೂ ಸಂಯಮದಿಂದ ಕೊರೊನಾ ವಿರುದ್ಧ ಹೋರಾಟ ನಡೆಸಬೇಕು” ಎಂದಿದ್ದಾರೆ. ಸಚಿವ ವಿ. ಸೋಮಣ್ಣ ಟ್ವೀಟ್ ಮಾಡಿ, “ನಾವೆಲ್ಲರೂ ಬೆಳಿಗ್ಗೆ 7 ರಿಂದ ಸಾಯಂಕಾಲ 9ರ ವರೆಗೆ ಹೊರಗಡೆ ಎಲ್ಲಿಯೂ ತಿರುಗಾಡದೇ, ಮನೆಯಲ್ಲಿಯೇ ಇರುವ ಮುಖಾಂತರ ಜನತಾ ಕರ್ಫ್ಯೂವನ್ನು ಬೆಂಬಲಿಸೋಣ. ನರೇಂದ್ರ ಮೋದಿಯವರ ಕರೆಗೆ ಬೆಂಬಲಸಿ ಸರ್ವರೂ ಇದರಲ್ಲಿ ಪಾಲ್ಗೊಂಡು ಜನರಲ್ಲಿ ಜಾಗೃತಿ ಮೂಡಿಸೋಣ” ಎಂದು ಮನವಿ ಮಾಡಿದ್ದಾರೆ. ಪ್ರವಾಸೋದ್ಯಮ ಸಚಿವ ಸಿಟಿ ರವಿ ಕೂಡಾ ಜನತಾ ಕರ್ಫ್ಯೂನಲ್ಲಿ ಜನರು ಭಾಗಿಯಾಗಬೇಕು ಎಂದು ವಿನಂತಿ ಮಾಡಿದ್ದು “ಮಾರ್ಚ್ 22, ಭಾನುವಾರ ಸಂಜೆ 5:00 ಗಂಟೆಗೆ, ಕೋವಿಡ್‌ ಭೀತಿಯ ನಡುವೆಯೂ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ಧನ್ಯವಾದ ಹೇಳಲು ನಿಮ್ಮ ಮನೆಯ ಮಹಡಿ, ಬಾಗಿಲ ಅಥವಾ ಕಿಟಕಿಯ ಬಳಿ ನಿಂತು ಒಗ್ಗಟ್ಟಾಗಿ ಚಪ್ಪಾಳೆ ತಟ್ಟುವಂತೆ ನಾನು ವಿನಂತಿಸುತ್ತೇನೆ” ಎಂದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿರುವ ಜನತಾ ಕರ್ಫ್ಯೂಗೆ ಕೆಲವರು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೊರೊನಾ ಹರಡದಂತೆ ತಡೆಯಲು ಜನರ ಸ್ವಯಂ ನಿರ್ಬಂಧವಷ್ಟೇ ಸಾಲದು, ಅಗತ್ಯ ಚಿಕಿತ್ಸೆ, ಸೂಕ್ತ ಆಸ್ಪತ್ರೆ ಹಾಗೂ ಇನ್ನಿತರ ವೈದ್ಯಕೀಯ ಸಲಕರಣೆಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸಿನಿಮಾ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಟ್ವೀಟ್ ಮಾಡಿ, ಜನತಾ ಕರ್ಪ್ಯೂ ಮೂಲಕ ಜೊತೆಗೂಡಿ ಕೊರೊನಾ ವಿರುದ್ಧ ಹೋರಾಟ ನಡೆಸೋಣ. ಅದರ ಜೊತೆಗೆ ಕೇರಳ ಸರ್ಕಾರ ಕೊರೊನಾ ಸೋಂಕು ನಿರ್ವಹಣೆಗೆ 20,000 ಕೋಟಿ ಮೀಸಲಿಟ್ಟಿರುವ ವರದಿಯ ಲಿಂಕ್ ಹಾಕಿ ಈ ಕುರಿತಾಗಿಯೂ ಪ್ರಧಾನಿ ನರೇಂದ್ರ ಮೋದಿ ಯೋಚಿಸಲಿ ಎಂದಿದ್ದಾರೆ. ಸದ್ಯ ರಾಜ್ಯದಲ್ಲಿ 15 ಕೊರೊನಾ ಪ್ರಕರಣಗಳು ಅಧಿಕೃತಗೊಂಡಿದ್ದು ಅವರಿಗೆಲ್ಲಾ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕೆಲವೊಂದು ಶಂಕಿತ ಪ್ರಕರಣಗಳು ವರದಿಯಾಗಿದ್ದು ಅವರನ್ನು ನಿಗಾದಲ್ಲಿ ಇಡಲಾಗಿದೆ. ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ. ಈ ನಡುವೆ ಭಾನುವಾರ ನಡೆಯಲಿರುವ ಜನತಾ ಕರ್ಪ್ಯೂನಲ್ಲಿ ಭಾಗಿಯಾಗುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಜನರು ಸಾಥ್ ನೀಡಬೇಕು ಎಂದು ಕೇಳಿಕೊಂಡಿದೆ.


from India & World News in Kannada | VK Polls https://ift.tt/396YpA6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...