ಬೆಂಗಳೂರು: ವೈದ್ಯೆಯ ಮಗ ಪುಟಾಣಿ ಬಾಲಕನೊಬ್ಬ ವೈರಸ್ ತಡೆ ನಿಟ್ಟಿನಲ್ಲಿ ಮತ್ತು 21 ದಿನಗಳ ಲಾಕ್ಡೌನ್ ಯಶಸ್ವಿಗೊಳಿಸಲು ಕರೆ ನೀಡಿ ಹಿಡಿದಿರುವ ಪೇಪರ್ ಫಲಕ ಎಲ್ಲರ ಗಮನ ಸೆಳೆದಿದೆ. ''ನನ್ನ ಅಮ್ಮ ವೈದ್ಯೆ. ಅವಳು ನಿಮಗೆ ಸಹಾಯ ಮಾಡಲು ನನ್ನಿಂದ ದೂರವಿದ್ದಾಳೆ. ನೀವು ಮನೆಯಲ್ಲಿದ್ದುಕೊಂಡು ಅವಳಿಗೆ ಸಹಾಯ ಮಾಡುತ್ತೀರಾ?'' ಎಂದು ಮನವಿ ಮಾಡುತ್ತಿರುವ ಬಾಲಕನ ಫೋಟೊವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಬಾಲಕನ ಜಾಗೃತಿ ಕರೆಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನಮಗೋಸ್ಕರ ಈ ಬಾಲಕನ ಕೋರಿಕೆಯನ್ನು ಈಡೇರಿಸಲು ಸಾಧ್ಯವಿಲ್ಲವೇ? ಎಂದು ಡಾ. ಕೆ. ಸುಧಾಕರ್ ಪ್ರಶ್ನಿಸಿದ್ದಾರೆ. ಚೀನಾದ ನಲ್ಲಿ ಮೊದಲು ಪತ್ತೆಯಾಗಿದ್ದ ವಿಶ್ವಾದ್ಯಂತ 20,000ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. ಭಾರತ ಸೇರಿ ಒಟ್ಟು 195ರಾಷ್ಟ್ರಗಳಿಗೂ ಹೆಚ್ಚು ಕಡೆ ವೈರಸ್ ಹರಡಿದೆ. ಕರ್ನಾಟಕದಲ್ಲಿ 40 ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ. ದೇಶದಲ್ಲಿ ಒಟ್ಟು 10 ಸಾವಿನ ಪ್ರಕರಣ ದಾಖಲಾಗಿದೆ. ಭಾರತದಲ್ಲಿ 600ಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ತಡೆಗೆ ರಾಷ್ಟ್ರಾದ್ಯಂತ 21 ದಿನಗಳ ವರೆಗೆ ಲಾಕ್ಡೌನ್ ಘೋಷಣೆ ನಡುವೆಯೂ ಹಿಂದೂಗಳ ಹೊಸ ವರ್ಷದ ಮೊದಲ ಹಬ್ಬ ಯುಗಾದಿ ಹಬ್ಬದ ಮರುದಿನ ಆಚರಿಸುವ ವರ್ಷದ ತೊಡಕಿಗೆ ರಾಜ್ಯದ ಅಲ್ಲಲ್ಲಿ ಮಾಂಸ ಕೊಳ್ಳಲು ಮಂದಿ ಸಾಲುಗಟ್ಟಿ ನಿಂತಿದ್ದು ಕಂಡು ಬಂತು. ಮಾರುಕಟ್ಟೆಯಲ್ಲಿ ಗುಂಪಾಗಿ ಸೇರಬೇಡಿ. ಸ್ವಚ್ಛತೆ ಬಗ್ಗೆ ನಿಗಾ ವಹಿಸಿ. ಸುರಕ್ಷತೆಗೆ ಗಮನಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಸಹಿತಿ ಎಲ್ಲರೂ ಹೇಳುತ್ತಿದ್ದರು ಜನರಿಗೆ ಕೇಳಿಸಿಕೊಳ್ಳುವ ವ್ಯವಧಾನವೇ ಇಲ್ಲದಾಗಿದೆ. ಒಂದು ಬಾರಿ ಹಬ್ಬವನ್ನು ಸರಳವಾಗಿ ಆಚರಿಸದಿದ್ದರೆ ಪ್ರಾಣ ಹೋಗಿಬಿಡುತ್ತದೇನೋ ಎಂಬಂತೆ ವರ್ತಿಸುತ್ತಿರುವುದು ಸೋಚನೀಯವಾಗಿದೆ
from India & World News in Kannada | VK Polls https://ift.tt/2Uk97yY