ನವದೆಹಲಿ: ಮಾರಕ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಬಿಳಿ ಬಣ್ಣದ ಏಪ್ರನ್ ಧರಿಸಿರುವ ವೈದ್ಯರೇ ನಮ್ಮ ಕಣ್ಣ ಮುಂದಿರುವ ದೇವರು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಆದರೆ ಕೊರೊನಾ ಹೋಗಲಾಡಿಸಬೇಕಾದ ಅದೇ ವೈದ್ಯನಿಗೆ ವೈರಸ್ ಅಂಟಿದರೆ ಇಡೀ ಸಮಾಜದಲ್ಲಿ ಆತಂಕ ಮನೆ ಮಾಡುತ್ತದೆ. ರೋಗಿಗಳನ್ನು ರಕ್ಷಿಸಬೇಕಾದರಿಗೇ ರೋಗ ತಗುಲಿದರೆ ಜನಸಾಮಾನ್ಯರು ಚಿಂತೆಗೀಡಾಗುವುದು ಸಹಜ. ಅದರಂತೆ ದೆಹಲಿಯ ಮೊಹಲ್ಲಾ ಕ್ಲಿನಿಕ್ವೊಂದರ ವೈದ್ಯನ ಇಡೀ ಕುಟುಂಬಕ್ಕೆ ಕೊರೊನಾ ವೈರಸ್ ತಗುಲಿದ್ದು, ಈ ವೈದ್ಯ ಚಿಕಿತ್ಸೆ ನೀಡುತ್ತಿದ್ದ ಸುತ್ತಲಿನ ಪ್ರದೇಶದ ಎಲ್ಲಾ ಜನರನ್ನು ಇದೀಗ ಗೃಹ ಬಂಧನಕ್ಕೆ ದೂಡಲಾಗಿದೆ. ದೆಹಲಿಯ ಮೌಜ್ಪುರ್ ಪ್ರದೇಶದದಲ್ಲಿ ಮೊಹಲ್ಲಾ ಕ್ಲಿನಿಕ್ನ ವೈದ್ಯರು, ಅವರ ಪತ್ನಿ ಹಾಗೂ ಪುತ್ರಿಗೆ ಕೊರೊನಾ ವೈರಸ್ ತಗುಲಿದ್ದು, ಮಾ.12 ರಿಂದ 18ರವೆರೆಗೆ ವೈದ್ಯರು ಚಿಕಿತ್ಸೆ ನೀಡಿದ್ದ ಸುತ್ತಲಿನ ಪ್ರದೇಶದ ಜನರಿಗೆ ಮನೆಯಿಂದ ಹೊರಬರದಂತೆ ಆದೇಶ ನೀಡಲಾಗಿದೆ. ವಿದೇಶದಿಂದ ಬಂದ ತಮ್ಮ ಸ್ನೇಹಿತರೊಬ್ಬರನ್ನು ಈ ವೈದ್ಯ ಭೇಟಿಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದ್ದು, ಇಡೀ ಕುಡುಂಬವನ್ನು ಇದೀಗ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
from India & World News in Kannada | VK Polls https://ift.tt/2xpMfoR