ಬೆಂಗಳೂರು: ತಡೆಗೆ ರಾಷ್ಟ್ರಾದ್ಯಂತ 21 ದಿನಗಳ ವರೆಗೆ ಲಾಕ್ಡೌನ್ ಘೋಷಣೆ ನಡುವೆಯೂ ಹಿಂದೂಗಳ ಹೊಸ ವರ್ಷದ ಮೊದಲ ಹಬ್ಬ ಯುಗಾದಿ ಹಬ್ಬದ ಮರುದಿನ ಆಚರಿಸುವ ವರ್ಷದ ತೊಡಕಿಗೆ ರಾಜ್ಯದ ಅಲ್ಲಲ್ಲಿ ಮಾಂಸ ಕೊಳ್ಳಲು ಮಂದಿ ಸಾಲುಗಟ್ಟಿ ನಿಂತಿದ್ದು ಕಂಡು ಬಂತು. 21 ದಿನಗಳ ಕಾಲ ಮನೆಯಿಂದ ಅನಗತ್ಯವಾಗಿ ಹೊರಗೆ ಬರಬೇಡಿ. ಮಾರುಕಟ್ಟೆಯಲ್ಲಿ ಗುಂಪಾಗಿ ಸೇರಬೇಡಿ. ಸ್ವಚ್ಛತೆ ಬಗ್ಗೆ ನಿಗಾ ವಹಿಸಿ. ಸುರಕ್ಷತೆಗೆ ಗಮನಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಸಹಿತಿ ಎಲ್ಲರೂ ಹೇಳುತ್ತಿದ್ದರು ಜನರಿಗೆ ಕೇಳಿಸಿಕೊಳ್ಳುವ ವ್ಯವಧಾನವೇ ಇಲ್ಲದಾಗಿದೆ. ಒಂದು ಬಾರಿ ಹಬ್ಬವನ್ನು ಸರಳವಾಗಿ ಆಚರಿಸದಿದ್ದರೆ ಪ್ರಾಣ ಹೋಗಿಬಿಡುತ್ತದೇನೋ ಎಂಬಂತೆ ವರ್ತಿಸುತ್ತಿರುವುದು ಸೋಚನೀಯವಾಗಿದೆ. ವರ್ಷದ ತೊಡಕು ಬಂತೆಂದರೆ ಕೋಳಿ, ಕುರಿ, ಮೇಕೆಯ ಬೇಡಿಕೆ ಸಹಜವಾಗೇ ಹೆಚ್ಚಿರುತ್ತದೆ. ಆದರೆ ಈ ವರ್ಷ ಹಕ್ಕಿ ಜ್ವರ, ಹಂದಿ ಜ್ವರ ಸೇರಿದಂತೆ ವೈರಸ್ ಭೀತಿಯಿಂದ ಮಾಂಸ ತಿನ್ನುವವರ ಸಂಖ್ಯೆ ಕಡಿಮೆಯಾಗಿದೆ. ಕೊರೊನಾ ಸೋಂಕು ಕೋಳಿ ಮಾಂಸ ತಿನ್ನುವುದರಿಂದ ತಗಲುವುದಿಲ್ಲ ಎಂಬ ವರದಿಗಳು ಪ್ರಕಟವಾದರೂ ತಿನ್ನುವವರ ಸಂಖ್ಯೆ ಕಡಿಮೆಯಾಗಿದೆ.
from India & World News in Kannada | VK Polls https://ift.tt/2QNWkTf