ಭಾರತದಂತಹ ತಂಡದಲ್ಲಾದರೆ ಯಾವ ಪಾಕ್ ಬ್ಯಾಟ್ಸ್‌ಮನ್‌ಗೂ ಆಡಲು ಅವಕಾಶ ಸಿಗಲ್ಲ: ಮಿಯಾಂದಾದ್

ಹೊಸದಿಲ್ಲಿ: ತಮ್ಮ ಆಡುವ ಕಾಲಘಟ್ಟದಲ್ಲಿ ಮೈದಾನದಲ್ಲಿ ಭಾರತ ವಿರುದ್ಧ ಸದಾ ವೈರತ್ವವನ್ನು ಕಾಪಾಡಿಕೊಂಡಿರುವ ಪಾಕಿಸ್ತಾನದ ಮಾಜಿ ನಾಯಕ , ಸಮಕಾಲೀನ ಪಾಕ್ ತಂಡದ ಬಗ್ಗೆ ಗಂಭೀರವಾದ ಟೀಕೆಗಳನ್ನು ಮಾಡಿದ್ದಾರೆ. ಹಾಗೊಂದು ವೇಳೆ ಭಾರತದಲ್ಲಾದರೆ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಿಗೆ ಆಡಲು ಅವಕಾಶವೇ ದೊರಕುತ್ತಿರಲಿಲ್ಲ ಎಂದು ಛೇಡಿಸಿದ್ದಾರೆ. ಈ ಮೂಲಕ ದಾಂಡಿಗರ ಬ್ಯಾಟಿಂಗ್ ಗುಣಮಟ್ಟವನ್ನು ಕೆಣಕಿದ್ದಾರೆ. "ನಾನವರನ್ನು ಕೇಳಲು ಬಯಸುತ್ತೇನೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಭಾರತದಂತಹ ತಂಡಗಳಲ್ಲಿನ ಆಟಗಾರರನ್ನು ಬದಲಾಯಿಸಬಲ್ಲ ಆಟಗಾರರು ಪಾಕಿಸ್ತಾನ ತಂಡದಲ್ಲಿ ಇದ್ದಾರೆಯೇ? ನಮ್ಮ ಯಾವುದೇ ಬ್ಯಾಟ್ಸ್‌ಮನ್‌ಗಳು ಈ ತಂಡದಲ್ಲಿ ಆಡಲು ಸಾಧ್ಯವೇ ಇಲ್ಲ. ನಮ್ಮಲ್ಲಿ ಬೌಲರ್‌ಗಳಿದ್ದಾರೆ. ಆದರೆ ಬ್ಯಾಟಿಂಗ್ ಸಾಲಿನಲ್ಲಿ ಯಾರೂ ಇಲ್ಲ" ಎಂದು ಮಿಯಾಂದಾದ್ ಟೀಕಾ ಪ್ರಹಾರ ಮಾಡಿದರು. "ಇಡೀ ಜಗತ್ತೇ ದೈನಂದಿನ ವೇತನದಲ್ಲಿ ಚಲಿಸುತ್ತದೆ. ಇಂದು ರನ್ ಗಳಿಸಿ, ಹಣವನ್ನು ಪಡೆದುಕೊಂಡು ಹೋಗಿ. ನಾಳೆ ರನ್ ಗಳಿಸಿದರೆ ಮತ್ತೆ ಹಣ ನೀಡುತ್ತೇವೆ. ನೀವು ವೃತ್ತಿಪರರು. ಹಾಗೊಂದು ವೇಳೆ ನೀವು ಕೆಲಸ ಮಾಡದಿದ್ದರೆ ಅಥವಾ ರನ್ ಗಳಿಸದಿದ್ದರೆ ಹಣವನ್ನು ಏಕೆ ಪಡೆಯಬೇಕು? ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕೆಲಸವಿದು. ಯಾರೂ ಅನುದಾನವಾಗಿ ಪಡೆಯಬಾರದು ಎಂಬುದನ್ನು ಖಾತ್ರಿಪಡಿಸುವುದು ಪಿಸಿಬಿ ಕೆಲಸವಾಗಿದೆ" ಎಂದು ಬೊಟ್ಟು ಮಾಡಿದರು. "ನನ್ನ ಫಿಟ್ನೆಸ್ ಹಾಗೂ ಕೌಶಲ್ಯವನ್ನು ಪರಿಗಣಿಸಿದರೆ ನಾನು ಇನ್ನು 12 ವರ್ಷಗಳಷ್ಟು ಕಾಲ ಪಾಕಿಸ್ತಾನಕ್ಕಾಗಿ ಆಡಬಲ್ಲೆ ಎಂಬ ಪಾಕ್ ಆಟಗಾರ ಅಹ್ಮದ್ ಶೆಹಜಾದ್ ಹೇಳಿಕೆಗೆ ಪ್ರತಿಯಾಗಿ ಜಾವೇದ್ ಮಿಯಾಂದಾದ್ ಗರಂ ಆದರು. "ಯಾಕೆ 12 ವರ್ಷ? ನೀವು 20 ವರ್ಷಗಳಷ್ಟು ಕಾಲ ಆಡಬಹುದು ಎಂಬುದಕ್ಕೆ ನಾನು ಗ್ಯಾರಂಟಿ ನೀಡುತ್ತೇನೆ. ಆದರೆ ನೀವು ಪ್ರದರ್ಶನ ನೀಡಬೇಕು. ಪ್ರತಿದಿನ ಪ್ರದರ್ಶನ ನೀಡಿದರೆ ಯಾರೂ ನಿಮ್ಮನ್ನು ಹೊರಗಟ್ಟುವುದಿಲ್ಲ. ಆಟಗಾರರು ಪ್ರದರ್ಶನ ನೀಡದಿದ್ದಾಗ ಕೈಬಿಡುತ್ತಾರೆ" ಎಂದು ಸೇರಿಸಿದರು. "ಆಟಗಾರರು ಇಂತಹ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಬಾರದು. ಇದರ ಬದಲು ಮೈದಾನದಲ್ಲಿ ಅವರ ಪ್ರದರ್ಶನಗಳೇ ಮಾತನಾಡಬೇಕು" ಎಂದು ಮಿಯಾಂದಾದ್ ತಿಳಿಸಿದರು. ಪಾಕ್ ಕ್ರಿಕೆಟ್ ಮೇಲೆ ಮತ್ತಷ್ಟು ಆರೋಪಗಳನ್ನು ಮುಂದುವರಿಸಿದ ಮಿಯಾಂದಾದ್, ಹಿಂದಿನ ಪ್ರದರ್ಶನದ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡುವ ಏಕೈಕ ತಂಡ ಪಾಕಿಸ್ತಾನವಾಗಿದೆ ಎಂದು ಟೀಕಿಸಿದರು. "ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಂತಹ ತಂಡಗಳು ಸರಣಿಯಿಂದ ಸರಣಿಗೆ ತಂಡಗಳನ್ನು ಆರಿಸುತ್ತದೆ. ಹಿಂದಿನ ಸರಣಿಯಲ್ಲಿ ನೀವು 500 ರನ್ ಗಳಿಸಿದರೂ ಅವರು ಮರೆಯುತ್ತಾರೆ. ಶತಕ ಗಳಿಸಿದ ನಂತರ 10 ಇನ್ನಿಂಗ್ಸ್‌ಗಳ ಅವಕಾಶ ನೀಡುವ ಏಕೈಕ ತಂಡ ಪಾಕಿಸ್ತಾನವಾಗಿದೆ. ಆಟಗಾರರು ವಿಫಲರಾಗುತ್ತಾರೆ. ಆದರೆ ಯಾವುದೇ ಆತಂಕವಿಲ್ಲ. ಅದಕ್ಕಾಗಿಯೇ ಈ ತಂಡದಲ್ಲಿ ಸಮಸ್ಯೆಗಳು ಹೆಚ್ಚಿವೆ" ಎಂದು ಬೊಟ್ಟು ಮಾಡಿದರು. "ಉದಾಹರಣೆಯಾಗಿ ಭಾರತವನ್ನೇ ತೆಗೆದುಕೊಳ್ಳಿ. ಅವರು 70, 80, 100 ಮತ್ತು 200 ರನ್ ಗಳಿಸುತ್ತಾರೆ. ಅದುವೇ ಫರ್ಫಾಮನ್ಸ್. ಆದರೆ ನಮ್ಮ ತಂಡದಿಂದ ಯಾರೂ ವಿಶ್ವದ ಉನ್ನತ ದರ್ಜೆಯ ತಂಡಗಳಲ್ಲಿ ಆಡಲು ಸಾಧ್ಯವಿಲ್ಲ" ಎಂದು ಕೊರಗಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/33rCuT1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...