ಬೆಂಗಳೂರು: ಹರಡುವಿಕೆ ನಿಯಂತ್ರಿಸಲು ಒಂಬತ್ತು ಜಿಲ್ಲೆಗಲ್ಲಿ ಜಾರಿ ಮಾಡಲಾಗಿದ್ದ ಲಾಕ್ಡೌನ್ ಆದೇಶವನ್ನು ಸರಕಾರ ಇಡೀ ರಾಜ್ಯಕ್ಕೆ ವಿಸ್ತರಿಸಿದೆ. ಭಾನುವಾರ 'ಜನತಾ ಕಫ್ರ್ಯೂ'ವಿಗೆ ಪ್ರಜ್ಞಾಪೂರ್ವಕವಾಗಿ ಸ್ಪಂದಿಸಿದ್ದ ರಾಜ್ಯದ ಜನತೆ ಸೋಮವಾರ ಲಂಗುಲಗಾಮಿಲ್ಲದೆ ವರ್ತಿಸಿ ಬೀದಿಗಿಳಿದ ಹಿನ್ನೆಲೆಯಲ್ಲಿ ಸರಕಾರ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ರಾಜ್ಯದಲ್ಲಿ ಸೋಮವಾರ ಮತ್ತೆ ಏಳು ಹೊಸ ಪ್ರಕರಣಗಳು ದಾಖಲಾಗಿದ್ದು ಆತಂಕವನ್ನು ಹೆಚ್ಚಿಸಿದೆ. ದೇಶದೆಲ್ಲೆಡೆ ಭಾರಿ ನಿರ್ಬಂಧಗಳನ್ನು ವಿಧಿಸಿದ್ದರೂ ಜನರು ಅದಕ್ಕೆ ಕ್ಯಾರೇ ಅನ್ನದೆ ಬೀದಿಗಿಳಿದ ಹಿನ್ನೆಲೆಯಲ್ಲಿ ಪಂಜಾಬ್, ಮಹಾರಾಷ್ಟ್ರ ಸರಕಾರಗಳು ಲಾಕ್ಡೌನ್ ಜತೆಗೆ ಕಫ್ರ್ಯೂವನ್ನು ವಿಧಿಸುವ ಕಠಿಣ ನಿರ್ಧಾರಕ್ಕೆ ಬಂದವು. ರಾಜ್ಯದಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತುರ್ತು ಸಭೆ ನಡೆಸಿ ಕಠಿಣ ಕ್ರಮಕ್ಕೆ ಮುಂದಾದರು. ಈ ಹಂತದಲ್ಲಿ ರಾಜ್ಯಾದ್ಯಂತ ಕಫ್ರ್ಯೂ ಸಹಿತ ಲಾಕ್ಡೌನ್ ನಡೆಸುವ ಸೂಚನೆಗಳು ದೊರಕಿದವು. ಅಂತಿಮವಾಗಿ ಸರಕಾರ ಸದ್ಯದ ಮಟ್ಟಿಗೆ ಲಾಕ್ಡೌನ್ ವಿಸ್ತರಣೆಗಷ್ಟೇ ಮನ ಮಾಡಿದೆ. ಕಫ್ರ್ಯೂ ಬದಲು ಸೆಕ್ಷನ್ 144ರ ನಿಷೇಧಾಜ್ಞೆ ಮೂಲಕವೇ ನಿಯಂತ್ರಿಸಲು ಮುಂದಾಗಿದೆ. ಏಪ್ರಿಲ್ 1ರವರೆಗೆ ಈ ಆದೇಶ ಜಾರಿಯಲ್ಲಿರಲಿದ್ದು, ಒಂದೊಮ್ಮೆ ಜನತೆ ಇದನ್ನೂ ಉಲ್ಲಂಘಿಸುವಷ್ಟು ಬೇಜವಾಬ್ದಾರಿತನ ತೋರಿದರೆ ಕಫ್ರ್ಯೂ ಸಹಿತ ಲಾಕ್ಡೌನ್ಗೆ ಮುಂದಾಗುವ ಅವಕಾಶವನ್ನು ಸರಕಾರ ಉಳಿಸಿಕೊಂಡಿದೆ. ರಾಜ್ಯ ಸರಕಾರದ ಈ ಮಹತ್ವದ ತೀರ್ಮಾನದೊಂದಿಗೆ ಇಡೀ ರಾಜ್ಯವೇ ಬಹುತೇಕ ಸ್ತಬ್ಧವಾಗಲಿದೆ. ನಿಯಮದ ಪ್ರಕಾರ ತುರ್ತು ಅಗತ್ಯಗಳನ್ನು ಹೊರತುಪಡಿಸಿ ಯಾರು ಕೂಡಾ ಇರುವ ಜಿಲ್ಲೆ ಬಿಟ್ಟು ಇನ್ನೊಂದು ಜಿಲ್ಲೆಗೆ ಹೋಗುವಂತಿಲ್ಲ. ಉದಾಹರಣೆಗೆ ಬೆಂಗಳೂರಿನಿಂದ ಯಾರೂ ಹೊರಗೆ ಹೋಗುವಂತಿಲ್ಲ, ಬೆಂಗಳೂರಿಗೂ ಯಾರೂ ಹೊಸದಾಗಿ ಪ್ರವೇಶಿಸುವಂತಿಲ್ಲ. ಯಾವುದಕ್ಕೆ ನಿರ್ಬಂಧ- ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಚೇರಿಗಳು ಬಂದ್ - ಎಲ್ಲಾ ಕೈಗಾರಿಕೆಗಳು, ಕಾರ್ಖಾನೆಗಳ ಕಾರ್ಯ ಸ್ಥಗಿತ - ಓಲಾ, ಉಬರ್, ಟ್ಯಾಕ್ಸಿಗಳು, ರಿಕ್ಷಾ ಸೇವೆ ರದ್ದು - ಅಂತರ ರಾಜ್ಯ, ಅಂತರ ಜಿಲ್ಲೆ ಮತ್ತು ಜಿಲ್ಲೆಯೊಳಗಿನ ಎಲ್ಲಾ ಪ್ರಯಾಣಿಕ ಸಾರಿಗೆ ಸೇವೆಗಳು, ರಸ್ತೆ ಸಾರಿಗೆ ನಿಗಮಗಳ ಹಾಗೂ ಖಾಸಗಿ ಸಾರಿಗೆ ಕಾರ್ಯಾಚರಣೆ ಸ್ಥಗಿತ. - ಅಗತ್ಯವಿಲ್ಲದ ಸೇವೆಗಳನ್ನು ವ್ಯವಹರಿಸುವ ಎಲ್ಲಾ ಸರಕಾರಿ ಕಚೇರಿಗಳ ಬಂದ್ - ವೈದ್ಯಕೀಯ ತುರ್ತು, ಅನಿವಾರ್ಯ ಸನ್ನಿವೇಶ ಹೊರತುಪಡಿಸಿ ನೆರೆ ರಾಜ್ಯದ ಗಡಿಗಳಲ್ಲಿ ಪ್ರಯಾಣಿಕ ವಾಹನ, ಭಾರಿ ಮತ್ತು ಲಘು ವಾಹನಗಳ ಸಂಚಾರ ನಿಷೇಧ ಯಾವುದಕ್ಕೆ ನಿಬಂಧನೆಗಳು- ವಿದೇಶದಿಂದ ಬಂದವರೆಲ್ಲರೂ ಮನೆಯಲ್ಲೇ ಇರಬೇಕು. ನಿಯಮ ಉಲ್ಲಂಘಿಘಿಸಿದರೆ ಕಾನೂನು ಕ್ರಮದ ಜತೆಗೆ ಸರಕಾರಿ ಏಕಾಂತ ವಾಸಕ್ಕೆ ಸ್ಥಳಾಂತರ - ಕಾರ್ಮಿಕರನ್ನು ಯಾರನ್ನೂ ಕೆಲಸದಿಂದ ತೆಗೆಯದೆ ವೇತನ ಸಹಿತ ರಜೆ ಮಂಜೂರು ಮಾಡಬೇಕು. - ಧಾರ್ಮಿಕ ಪ್ರಾರ್ಥನೆಗೆ ಸೇರುವುದು, ಹಬ್ಬಗಳ ಆಚರಣೆಗೆ ಜನ ಸೇರುವುದು ನಿಷೇಧ - ಐಟಿ-ಬಿಟಿ ನೌಕರರು ಮನೆಯಿಂದಲೇ ಕೆಲಸ ನಿರ್ವಹಿಸುವುದು - ಐದಕ್ಕಿಂತ ಹೆಚ್ಚು ಮಂದಿ ಜತೆಯಾಗಿ ಸೇರುವಂತಿಲ್ಲ. ಯಾವುದಕ್ಕೆ ವಿನಾಯಿತಿ- ಆಹಾರ, ದಿನಸಿ ಅಂಗಡಿಗಳು, ಹಾಲು, ತರಕಾರಿ, ದಿನಬಳಕೆ ವಸ್ತುಗಳು - ಮಾಂಸ ಮೀನು, ಹಣ್ಣು, ಸಗಟು ಮತ್ತು ಚಿಲ್ಲರೆ ಮಾರುಕಟ್ಟೆ - ಪೆಟ್ರೋಲ್ ಬಂಕ್ಗಳು, ಅಡುಗೆ ಅನಿಲ - ವೈದ್ಯಕೀಯ ಉಪಕರಣ, ಔಷಧ - ಅಗತ್ಯ ಸರಕುಗಳ ಸಂಗ್ರಹಣೆ ಮತ್ತು ಸಾಗಣೆ - ಬ್ಯಾಂಕ್, ಎಟಿಎಂ, ಅಂಚೆ ಸೇವೆ. - ಅಗತ್ಯ ಸೇವೆಯೊಂದಿಗೆ ವ್ಯವಹರಿಸುವ ಸರಕಾರಿ ಕಚೇರಿಗಳು - ರೆಸ್ಟೋರೆಂಟ್ಗಳಿಂದ ಕೊಂಡೊಯ್ಯುವ/ಹೋಂ ಡೆಲಿವರಿ - ಸರಕಾರದಿಂದ ನಡೆಸುವ ಕ್ಯಾಂಟೀನ್ ಸೇವೆಗಳು. - ಮುದ್ರಣ ಮತ್ತುವಿದ್ಯುನ್ಮಾನ ಮಾಧ್ಯಮ
from India & World News in Kannada | VK Polls https://ift.tt/2UCyefw