ಕಿವೀಸ್ ಸರಣಿಗೆ ಭಾರತ ತಂಡ; ಹಾರ್ದಿಕ್ ಪಾಂಡ್ಯ ಮೇಲೆ ಎಲ್ಲರ ಕಣ್ಣು!

ಮುಂಬಯಿ: ನ್ಯೂಜಿಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾ ಆಯ್ಕೆ ಪ್ರಕ್ರಿಯೆ ಡಿಸೆಂಬರ್ 12 ಭಾನುವಾರದಂದು ನಡೆಯಲಿದೆ. ಗಾಯದ ಸಮಸ್ಯೆಯಿಂದ ಗುಣಮುಖರಾಗಿ ಪುನರಾಗಮನದ ಹೊಸ್ತಿಲಲ್ಲಿರುವ ಬಲಗೈ ಆಲ್‌ರೌಂಡರ್ ಕಮ್‌ಬ್ಯಾಕ್ ಮಾಡುವರೇ ಎಂಬುದು ಬಹಳಷ್ಟು ಕುತೂಹಲವೆನಿಸಿದೆ. ನ್ಯೂಜಿಲೆಂಡ್ ವಿರುದ್ಧ ಭಾರತ ಐದು ಪಂದ್ಯಗಳ ಟಿ20, ಮೂರು ಪಂದ್ಯಗಳ ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಗಳಲ್ಲಿ ಭಾಗವಹಿಸಲಿದೆ. ಇದಕ್ಕೂ ಮೊದಲು ಭಾರತ 'ಎ' ತಂಡವು ನ್ಯೂಜಿಲೆಂಡ್ 'ಎ' ವಿರುದ್ಧ ಮೂರು ಪಂದ್ಯಗಳ ಅನಧಿಕೃತ ಏಕದಿನ ಹಾಗೂ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಭಾರತ 'ಎ' ತಂಡದಲ್ಲಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದು, ಮ್ಯಾಚ್ ಫಿಟ್ನೆಸ್ ಸಾಬೀತು ಮಾಡುವ ಅವಕಾಸ ಪಡೆದಿದ್ದಾರೆ. ಭಾರತ 'ಎ' ಮತ್ತು ಕಿವೀಸ್ 'ಎ' ನಡುವಣ ಮೂರು ಪಂದ್ಯಗಳ ಅನಧಿಕೃತ ಏಕದಿನ ಸರಣಿಯು ಜನವರಿ 26ಕ್ಕೆ ಕೊನೆಗೊಳ್ಳಲಿದೆ. ಈ ನಡುವೆ ಟಿ20 ಸರಣಿಯು ಜನವರಿ 24ರಂದು ಆರಂಭವಾಗಲಿದೆ. ಹಾಗಾಗಿ ಜನವರಿ 29ರಂದು ನಡೆಯಲಿರುವ ಮೂರನೇ ಟಿ20 ಪಂದ್ಯದ ವೇಳೆಯಾಗುವಾಗ ಹಾರ್ದಿಕ್ ಪಾಂಡ್ಯ ತಂಡವನ್ನು ಸೇರಿಕೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ. ಹಾಗಾದ್ದಲ್ಲಿ ಟಿ20 ಸರಣಿ ಮೊದಲೆರಡು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಸುದೀರ್ಘ ನ್ಯೂಜಿಲೆಂಡ್ ಸರಣಿಯಲ್ಲಿ ಐದು ಟಿ20 ಹಾಗೂ ಮೂರು ಏಕದಿನ ಸೇರಿದಂತೆ ಒಟ್ಟು ಎಂಟು ಸೀಮಿತ ಓವರ್‌ಗಳ ಪಂದ್ಯಗಳನ್ನು ಆಡಲಿರುವುದರಿಂದ 15ರ ಬದಲು 16 ಅಥವಾ 17 ಸದಸ್ಯ ಬಳಗದ ತಂಡವನ್ನು ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ. ಮುಂಬರುವ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಬಲಿಷ್ಠ ತಂಡ ಸಂಯೋಜನೆ ರೂಪಿಸಿಕೊಳ್ಳುವುದು ಟೀಮ್ ಇಂಡಿಯಾ ಗುರಿಯಾಗಿರಲಿದೆ. ಹಾರ್ದಿಕ್ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಅಧಿಕಾರಿಗಳು, ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ ಯೋಜನೆಯ ಭಾಗವಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸಂಪೂರ್ಣವಾಗಿ ಫಿಟ್ ಆಗಿದ್ದಾರೆಯೇ ಇಲ್ಲವೇ ಎಂಬುದನ್ನು ಮಾತ್ರ ಪರಿಶೀಲಿಸಬೇಕಿದೆ ಎಂದಿದ್ದಾರೆ. ಟಿ20 ತಂಡದಲ್ಲಿರುವ ಬಹುತೇಕ ಆಟಗಾರರನ್ನು ಏಕದಿನ ತಂಡದಲ್ಲೂ ಸೇರಿಕೊಳ್ಳುವ ಸಾಧ್ಯತೆಯಿದೆ. ಈ ನಡುವೆ ಕೇದರ್ ಜಾಧವ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವರೇ ಎಂಬುದು ಅನುಮಾನವೆನಿಸಿದೆ. ಮುಂಬಯಿ ಆಟಗಾರ ಸೂರ್ಯಕುಮಾರ್ ಯಾದವ್, ಆಯ್ಕೆ ಸಮಿತಿ ಪಾಲಿಗೆ ತಲೆನೋವು ಸೃಷ್ಟಿಸಲಿದ್ದಾರೆ. ಅಜಿಂಕ್ಯ ರಹಾನೆ ಆಯ್ಕೆಯನ್ನು ಪರಿಗಣಿಸಲಾಗುವುದೇ ಎಂಬುದು ತಿಳಿದು ಬಂದಿಲ್ಲ. ಟೆಸ್ಟ್ ತಂಡದಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವುದಿಲ್ಲ. ಆದರೂ ಮೂರನೇ ಓಪನರ್ ಸ್ಥಾನಕ್ಕಾಗಿ ಶುಬಮನ್ ಗಿಲ್ ಜೊತೆಗೆ ಕೆಎಲ್ ರಾಹುಲ್ ಪೈಪೋಟಿ ಒಡ್ಡಲಿದ್ದಾರೆ. ರಾಹುಲ್‌ಗೆ ಕೆಟ್ಟ ಪ್ರದರ್ಶನದಿಂದಾಗಿ ಟೆಸ್ಟ್ ಆರಂಭಿಕ ಸ್ಥಾನ ನಷ್ಟವಾಗಿತ್ತು. ಆದರೆ ಸೀಮಿತ ಓವರ್‌ಗಳಲ್ಲಿ ಅಮೋಘ ಫಾರ್ಮ್‌ಗೆ ಮರಳಿದ್ದು, ಇದೀಗ ಸುದೀರ್ಘ ಕಿವೀಸ್ ಸರಣಿಗೂ ಆಯ್ಕೆಯಾದರೂ ಅಚ್ಚರಿಪಡಬೇಕಿಲ್ಲ. ಗಾಯಾಳು ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಸಹ ಮತ್ತಷ್ಟು ಸಮಯ ಕಾಯಬೇಕಿದೆ. ಇನ್ನು ಗಾಯ ಮುಕ್ತಗೊಂಡಿರುವ ಜಸ್ಪ್ರೀತ್ ಬುಮ್ರಾ ಕಮ್‌ಬ್ಯಾಕ್ ಮಾಡಲಿದ್ದಾರೆ. ಹಾಗೆಯೇ ಐದನೇ ವೇಗದ ಬೌಲರ್ ರೂಪದಲ್ಲಿ ಸ್ಪೀಡ್ ಸ್ಟಾರ್ ನವದೀಪ್ ಸೈನಿ ರೇಸ್‌ನಲ್ಲಿದ್ದಾರೆ. ಅದೇ ಹೊತ್ತಿಗೆ ಕಿವೀಸ್ ಪರಿಸ್ಥತಿಯಲ್ಲಿ ಮೂರನೇ ಸ್ಪಿನ್ನರ್ ಕುಲ್‌ದೀಪ್ ಯಾದವ್ ಅವಶ್ಯಕತೆಯಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/39YTind

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...