ಛಂಡೀಗಡ: ಬ್ಯಾಂಕ್ನವರು ಎಂದೂ ಫೋನ್ ಮಾಡಿ ಒಟಿಪಿ ಇತ್ಯಾದಿ ವಿವರಗಳನ್ನು ಕೇಳುವುದೇ ಇಲ್ಲ ಎಂದು ಸಾಕಷ್ಟು ಜಾಗೃತಿ ಕರೆಗಳು ಬರುತ್ತಲೇ ಇರುತ್ತವೆ. ಮೊಬೈಲ್ ನಂಬರ್ಗೆ ಎಚ್ಚರಿಕೆ ಮೆಸೇಜ್ ಇತ್ಯಾದಿ ಹಲವಾರು ರೀತಿಯಲ್ಲಿ ಗ್ರಾಹಕರು ಎಚ್ಚರವಾಗಿರುವಂತೆ ಸೂಚನೆಗಳು ಬರುತ್ತವೆ. ಆದರೂ, ಪಂಜಾಬ್ ಮುಖ್ಯಮಂತ್ರಿ ಪತ್ನಿ ಹುಸಿ ಕರೆಗೆ 23 ಲಕ್ಷ ರೂ ಕಳೆದುಕೊಂಡಿದ್ದಾರೆ. ಸೈಬರ್ ಅಪರಾಧಕ್ಕೆ ಬೆಲೆ ತೆತ್ತಿರುವ ಅಮರಿಂದರ್ ಸಿಂಗ್ ಪತ್ನಿ ಪ್ರೆನೀತ್ ಕೌರ್ಗೆ ಬ್ಯಾಂಕ್ ಮ್ಯಾನೇಜರ್ ಎಂದು ಫೋನ್ ಮಾಡಿರುವ ವ್ಯಕ್ತಿ, ಒಟಿಪಿ ಹಾಗೂ ಬ್ಯಾಂಕ್ ಡಿಟೇಲ್ಸ್ಗಳನ್ನು ಕೇಳಿ ಯಾಮಾರಿಸಿದ್ದಾರೆ. ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಪಂಜಾಬ್ ಪೊಲೀಸ್ ತಂಡ, ಆತನ ಮೊಬಬೈಲ್ ನಂಬರ್ ಕಾರ್ಯನಿರ್ವಹಿಸಿದ ಸ್ಥಳವನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಜಾರ್ಖಂಡ್ನ ರಾಂಚಿಯಲ್ಲಿ ಕುಳಿತು ಈ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂದು ತಿಳಿದು ಬಂದಿದೆ. ಪಟಿಯಾಲ ಲೋಕಸಭೆ ಸದಸ್ಯರಾಗಿರುವ ಕೌರ್, ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ದಿಲ್ಲಿಯಲ್ಲಿದ್ದರು. ವೇತನ ವರ್ಗಾವಣೆ ಮಾಡಲು ನಿಮ್ಮ ಬ್ಯಾಂಕ್ ವಿವರ ನೀಡುವುದಕ್ಕೆ ಫೋನ್ ಮಾಡಿರುವುದಾಗಿ ವಂಚಕ ತಿಳಿಸಿದ್ದಾನೆ. ಅಲ್ಲದೆ ಎಟಿಎಂ ಪಿನ್, ಸಿವಿಸಿ ಹಾಗೂ ಒಟಿಪಿಯ ಮಾಹಿತಿಯನ್ನೂ ಕೌರ್ನಿಂದ ಪಡೆದುಕೊಂಡಿದ್ದಾನೆ. ತಮ್ಮ ಎಕೌಂಟ್ನಿಂದ 23 ಲಕ್ಷ ರೂ. ವರ್ಗಾವಣೆ ಆದಾಗಲೇ ತಾನು ಮೋಸ ಹೋಗಿರುವ ಕುರಿತು ಕೌರ್ಗೆ ಅರಿವಾಗಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜಾರ್ಖಂಡ್ನಿಂದ ಆರೋಪಿಯನ್ನು ಪಂಜಾಬ್ಗೆ ಕರೆದುಕೊಂಡು ಬರಲಾಗುತ್ತಿದೆ ಎಂದು ಪಟಿಯಾಲ ಹಿರಿಯ ಎಸ್ಪಿ ಮಂದೀಪ್ ಸಿಂಗ್ ಸಿಧು ಮಾಹಿತಿ ನೀಡಿದ್ದಾರೆ.
from India & World News in Kannada | VK Polls https://ift.tt/2KnluFG