ದೈವಸ್ಥಾನಗಳನ್ನು ಧಾರ್ಮಿಕ ಪರಿಷತ್‌ನಿಂದ ಹೊರಗಿಡಬೇಕು; ಬಿ ರಮಾನಾಥ ರೈ ಆಗ್ರಹ

ಮಂಗಳೂರು: ದೈವಸ್ಥಾನವನ್ನು ಎಂಡೋಮೆಂಟ್‌ನಿಂದ ಹೊರಗಿಡಬೇಕು. ಧಾರ್ಮಿಕ ಪರಿಷತ್‌ ಇದರಲ್ಲಿ ಮೂಗು ತೂರಿಸುವುದು ಸರಿಯಲ್ಲ. ಸಂಪ್ರದಾಯವನ್ನು ಮುರಿಯುವುದು ದೈವಾರಾಧನೆಯ ಕಟ್ಟುಪಾಡಿಗೆ ವಿರುದ್ಧವಾಗಿದೆ ಎಂದು ಮಾಜಿ ಸಚಿವ ಬಿ. ಹೇಳಿದರು. ನಗರದ ಸಕ್ರ್ಯೂಟ್‌ ಹೌಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಅವರು, ದೈವಾರಾಧನೆ ಪ್ರವಾಸೋದ್ಯಮ ಕೇಂದ್ರವಲ್ಲ. ಅದೊಂದು ಭಕ್ತಿಯ ಕೇಂದ್ರ. ಕರಾವಳಿ ಭಾಗದಲ್ಲಿ ದೈವದ ಭಂಡಾರವನ್ನು ದೈವಸ್ಥಾನದಲ್ಲಿ ಇಡೋದಿಲ್ಲ. ಸಾಮಾನ್ಯವಾಗಿ ಭಂಡಾರ ಮನೆಯಲ್ಲಿಡುವುದು ಸಂಪ್ರದಾಯ, ಯಾವುದೇ ಕಾರಣಕ್ಕೂ ದೈವಸ್ಥಾನದಲ್ಲಿ ಇಡುವ ಸಂಪ್ರದಾಯವಿಲ್ಲ. ಆದರೆ ಧಾರ್ಮಿಕ ಪರಿಷತ್‌ನವರು ದೈವಜ್ಞ ಪ್ರಶ್ನೆ ಇಟ್ಟು ಬಂಟ್ವಾಳ ತಾಲೂಕಿನ ಮೊಗರ್ನಾಡು ಸೀಮೆಯ ದೈವಗಳ ಭಂಡಾರವನ್ನು ದೈವಸ್ಥಾನದಲ್ಲಿ ಇರಿಸಲು ಹೊರಟಿರುವುದು ಧಾರ್ಮಿಕ ನಂಬಿಕೆಗೆ ಅಪಚಾರ ಎಂದು ಹೇಳಿದರು. ಕರಾವಳಿಯಲ್ಲಿ ದೈವಾರಾಧನೆ ಅನಾದಿ ಕಾಲದಿಂದಲೂ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಅದೇ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವುದು ಕಟ್ಟು ಕಟ್ಟಳೆ. ದೈವಸ್ಥಾನದಲ್ಲಿ ಭಂಡಾರ ಇಡುವುದು ಕಟ್ಟುಪಾಡಿಗೆ ವಿರೋಧವಾಗಿದ್ದು, ಎಲ್ಲರೂ ಅದನ್ನು ವಿರೋಧಿಸಬೇಕು. ದೈವಸ್ಥಾನದ ಭಂಡಾರದಲ್ಲಿ ಚಿನ್ನಾಭರಣಗಳಿರುತ್ತವೆ. ಅಮೂಲ್ಯ ವಸ್ತುಗಳಿರುತ್ತವೆ. ಅದನ್ನು ರಕ್ಷಣೆ ಮಾಡಬೇಕಾದರೆ ಅದು ಸಂಬಂಧಪಟ್ಟ ಭಂಡಾರ ಮನೆ, ಬೀಡುವಿನಲ್ಲಿಇರಬೇಕು. ದೈವಸ್ಥಾನದಲ್ಲಿ ಕಳ್ಳತನ ನಡೆದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಹರಿನಾಥ್‌, ಎಪಿಎಂಸಿ ಮಾಜಿ ಸದಸ್ಯ ಜಯಶೀಲ ಅಡ್ಯಂತಾಯ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಅಶೋಕ್‌ ಡಿ.ಕೆ., ಧಾರ್ಮಿಕ ಪರಿಷತ್‌ ಮಾಜಿ ಸದಸ್ಯ ಪದ್ಮನಾಭ ಉಪಸ್ಥಿತರಿದ್ದರು. ಆರೆಸ್ಸೆಸ್ ಬಗ್ಗೆ ಕಾಂಗ್ರೆಸ್ ಟೀಕೆ ಮೂರ್ಖತನದ್ದು; ದ. ಕ ಬಿಜೆಪಿ ಅಧ್ಯಕ್ಷ : ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ಸಂಕಲ್ಪದಿಂದ ಸೇವಾಕಾರ್ಯ ಮಾಡುತ್ತಿರುವ ಆರೆಸ್ಸೆಸ್‌ ಬಗ್ಗೆ ಕಾಂಗ್ರೆಸ್‌ ನಾಯಕರು ಮಾಡುತ್ತಿರುವ ಟೀಕೆ ಮೂರ್ಖತನದ ಪರಮಾವಧಿಯದ್ದು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ತಿಳಿಸಿದ್ದಾರೆ. ಆರೆಸ್ಸೆಸ್‌ ಸಂಘಟನೆ ಯಾವುದೇ ತೆಗಳಿಕೆಗೆ, ಬೆದರಿಕೆಗೆ, ಆರೋಪಗಳಿಗೆ ಜಗ್ಗದೆ ಹಿಂದು ಸಮಾಜವನ್ನು ಸಂಘಟನೆ ಮಾಡುವ ಕಾರ್ಯವನ್ನು ಮಾಡುತ್ತ, ರಾಷ್ಟ್ರ ಭಕ್ತರನ್ನು ನಿರ್ಮಿಸಿ ಸಮಾಜಕ್ಕೆ ನೀಡುತ್ತಾ ಬಂದಿದೆ. ಸಂಘದ ಸ್ವಯಂಸೇವಕರು ಸಮಾಜದ ವಿವಿಧ ಕ್ಷೇತ್ರದಲ್ಲಿ ರಾಷ್ಟ್ರೀಯ ವಿಚಾರ ಧಾರೆಯೊಂದಿಗೆ ಪ್ರಾಮಾಣಿಕವಾಗಿ ಕಾರ್ಯ ಮಾಡುತ್ತಿರುದರಿಂದ ದೇಶದಲ್ಲಿ ಸಮಾಜದಲ್ಲಿ ಪರಿವರ್ತನೆ ಆಗಿದೆ. ಸಂಘದ ರಾಷ್ಟ್ರೀಯ ವಿಚಾರವನ್ನು ಕಾಂಗ್ರೆಸ್‌ ಒಪ್ಪುವ ಅಗತ್ಯ ಇಲ್ಲ. ದೇಶದ ಪ್ರಜೆಗಳು ಒಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸಂಘದ ಸ್ವಯಂಸೇವಕರು ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳು ಆಗಿದ್ದಾರೆ. ಕಾಂಗ್ರೆಸ್‌ನ ವಿದೇಶಿ ಚಿಂತನೆ, ಮತೀಯ ತುಷ್ಟಿಕರಣ, ನಕಲಿ ಜಾತ್ಯತೀತವಾದ ಜನ ತಿರಸ್ಕರಿಸಿದ್ದಾರೆ. ದೇಶದಲ್ಲಿ ಭಯೋತ್ಪಾದನೆಗೆ, ಎಲ್‌ಟಿಟಿಇಗೆ, ಮಾವೋವಾದಿಗಳಿಗೆ, ನಕ್ಸಲೈಟರಿಗೆ ರಕ್ಷಣೆ, ಬೆಂಬಲ ನೀಡಿದ್ದ ಕಾಂಗ್ರೆಸ್‌ನದ್ದು ತಾಲಿಬಾನ್‌ ಸಂಸ್ಕೃತಿ ಎಂದು ಸುದರ್ಶನ ಆರೋಪಿಸಿದ್ದಾರೆ.


from India & World News in Kannada | VK Polls https://ift.tt/3uxbkaI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...