ಬಿಜೆಪಿಯನ್ನು 'ತುಕ್ಡೆ ತುಕ್ಡೆ' ಮಾಡುತ್ತೇನೆ: ಕಾಂಗ್ರೆಸ್ ಮುಖಂಡ ಕನ್ನಯ್ಯ ಕುಮಾರ್

ಹೊಸದಿಲ್ಲಿ: ತಮ್ಮ ವಿರುದ್ಧ ದೇಶದ್ರೋಹದ ಆರೋಪದ ಮಾಡಿದ್ದ ಬಿಜೆಪಿಯನ್ನು '' ಮಾಡುವುದಾಗಿ ಕೆಲವು ದಿನಗಳ ಹಿಂದಷ್ಟೇ ಸೇರ್ಪಡೆಯಾದ ಹೇಳಿದ್ದಾರೆ. ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಬಹುದು ಎಂದು ಅವರು ದೃಢ ನಂಬಿಕೆ ವ್ಯಕ್ತಪಡಿಸಿದ್ದಾರೆ. "ಬಿಜೆಪಿ ನನ್ನನ್ನು 'ತುಕ್ಡೆ ತುಕ್ಡೆ ಗ್ಯಾಂಗ್' ಎಂದು ಕರೆಯುತ್ತದೆ. ನಾನು ಪಾಲಿಗೆ ತುಕ್ಡೆ ತುಕ್ಡೆ. ನಾನು ಬಿಜೆಪಿಯನ್ನು ತುಕ್ಡೆ ತುಕ್ಡೆ ಮಾಡುತ್ತೇನೆ. ಈ ಪಕ್ಷವು ಗೋಡ್ಸೆಯನ್ನು ರಾಷ್ಟ್ರಪಿತ ಎಂದು ಪರಿಗಣಿಸಿದೆಯೇ ಹೊರತು ಗಾಂಧಿಯನ್ನಲ್ಲ. ಅವರು ಅಮೆರಿಕ ಅಧ್ಯಕ್ಷರ ಮುಂದೆ ಮಾತ್ರವೇ ಗಾಂಧಿಯನ್ನು ಹೊಗಳುತ್ತಾರೆ" ಎಂದು ಕನ್ನಯ್ಯ ಕುಮಾರ್ ಅವರು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು 'ನಾಥೂರಾಮ್-ವಿನಾಶದ ಜೋಡಿ' ಎಂದು ವ್ಯಂಗ್ಯವಾಡಿರುವ ಕನ್ನಯ್ಯ, ಬಿಜೆಪಿ ಸಿದ್ಧಾಂತವು ದೇಶದ ಪಿತಾಮಹನ ಆಶಯಗಳಿಗೆ ಬಹಿರಂಗವಾಗಿಯೇ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ. 'ಅನೇಕ ಯುವಜನರಂತೆ, ಈಗ ತಡವಾಗುತ್ತಿದೆ ಎಂದು ನನಗೂ ಅನಿಸುತ್ತಿದೆ. ದೇಶದ ಸ್ವಾತಂತ್ರ್ಯವನ್ನು ಪಡೆಯಲು, ಸ್ವಾತಂತ್ರ್ಯವನ್ನು ರಕ್ಷಿಸಲು ಹೋರಾಡಿದ ಪರಂಪರೆಯುಳ್ಳ ಪಕ್ಷವು ಅತಿ ಹೆಚ್ಚು ಶಕ್ತಿಶಾಲಿಯಾಗಿರಬೇಕು. ಇಂದು ರಾಜಕೀಯ ಬೆಳವಣಿಗೆಯ ಮೇಲೆ ಗಮನಹರಿಸುವ ಜನರು ಮಾತ್ರವೇ ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ' ಎಂದಿದ್ದಾರೆ. ವಿವಿಧ ರಾಜ್ಯಗಳಲ್ಲಿ ಪಕ್ಷದಲ್ಲಿನ ಬಿಕ್ಕಟ್ಟಿನ ವಿಚಾರವಾಗಿ ಟೀಕೆಗಳಿಗೆ ಒಳಗಾಗುತ್ತಿರುವ ಪಕ್ಷದ ನಾಯಕತ್ವದ ಸಮರ್ಥನೆಗೆ ಕನ್ನಯ್ಯ ಧಾವಿಸಿದ್ದಾರೆ. 'ಕಾಂಗ್ರೆಸ್ ನಾಯಕತ್ವವನ್ನು ಟೀಕಿಸುವುದು ಬಿಜೆಪಿಗೆ ಸಹಾಯ ಮಾಡುತ್ತದೆ. ದೇಶದ ಅತಿ ದೊಡ್ಡ ವಿರೋಧಪಕ್ಷ ಕಾಂಗ್ರೆಸ್ ಆಗಿರುವಾಗ, ಕಾಂಗ್ರೆಸ್ ಹೆಚ್ಚು ಯಶಸ್ವಿಯಾಗುತ್ತದೆಯೋ, ಬಿಜೆಪಿ ಅಷ್ಟು ದೊಡ್ಡ ಸೋಲು ಕಾಣುತ್ತದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ' ಎಂದು ಹೇಳಿದ್ದಾರೆ. 'ಇತರೆ ಎಲ್ಲ ವಿರೋಧಪಕ್ಷಗಳೂ ಪ್ರಾದೇಶಿಕ ಪಕ್ಷಗಳಾಗಿವೆ. ರಾಷ್ಟ್ರೀಯ ಅಸ್ತಿತ್ವವುಳ್ಳ ಏಕೈಕ ದೇಶವೆಂದರೆ ಕಾಂಗ್ರೆಸ್ ಮಾತ್ರ. ಅದಕ್ಕೆ ಎಲ್ಲ ಸಾಮರ್ಥ್ಯವೂ ಇದೆ. ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬಹುದು. ಅವರನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದು ನೀವು ಭಾವಿಸಿದರೆ, ನಾನು ಹೋರಾಟ ಮಾಡುವುದನ್ನೇ ಬಿಟ್ಟುಬಿಡುತ್ತೇನೆ' ಎಂದಿದ್ದಾರೆ. ' ಒಬ್ಬ ಸಹಾನುಭೂತಿಯ ನಾಯಕ ಎನ್ನುವುದು ಅವರೊಂದಿಗೆ ಮಾತನಾಡುವಾಗ ನನಗೆ ಅನಿಸಿದೆ. ಅವರು ನನ್ನ ತಾಯಿಯ ಯೋಗ ಕ್ಷೇಮ ಮತ್ತು ತಂದೆಯ ಆರೋಗ್ಯದ ಬಗ್ಗೆ ಯಾವಾಗಲೂ ಕೇಳುತ್ತಾರೆ. ಆ ಬಗ್ಗೆ ಅವರನ್ನು ನಾನು ಶ್ಲಾಘಿಸುತ್ತೇನೆ. ಅವರ ಈ ಗುಣಗಳು ನನ್ನನ್ನು ಆಕರ್ಷಿಸಿವೆ. ಅವರು ಪ್ರಾಮಾಣಿಕ. ಅವರ ಹೋರಾಟದಲ್ಲಿ ಪ್ರಾಮಾಣಿಕತೆ ಇರುತ್ತದೆ. ಸತ್ಯ ಹೊರಬರಬೇಕು ಎಂದು ಬಯಸುವ ನಿರ್ಭೀತ ನಾಯಕ' ಎಂದು ಕೊಂಡಾಡಿದ್ದಾರೆ. ಸುಮಾರು ಎರಡು ದಶಕಗಳ ಕಾಲ ವಿದ್ಯಾರ್ಥಿ ದೆಸೆಯಿಂದಲೂ ಎಡಪಕ್ಷಗಳೊಂದಿಗೆ ಒಡನಾಟ ಹೊಂದಿದ್ದ ಕನ್ನಯ್ಯ ಕುಮಾರ್, ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಿಪಿಐ ಸೇರ್ಪಡೆಯಾಗಿದ್ದರು. ಬಿಹಾರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈಗ ಸಿಪಿಎಂ ತೊರೆದು ಮಂಗಳವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.


from India & World News in Kannada | VK Polls https://ift.tt/3D3pLq7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...