ಹೊಸದಿಲ್ಲಿ: ಭಾರತ ಪ್ರವಾಸ ಕೈಗೊಂಡಿರುವ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಎರಡು ಬಾರಿ ಆಘಾತ ನೀಡಿದೆ. ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಭಾರತ, ಬಳಿಕ 3-1 ಅಂತರದಲ್ಲಿ ಸರಣಿ ಮುಡಿಗೇರಿಸಿಕೊಂಡಿತ್ತು. ನಂತರ ಟಿ20 ಸರಣಿಯಲ್ಲಿಯೂ 1-2 ಹಿನ್ನಡೆ ಅನುಭವಿಸಿದ್ದ , ಅಂತಿಮವಾಗಿ 3-2 ಅಂತರದಲ್ಲಿ ಗೆಲುವಿನ ನಗೆ ಬೀರಿತ್ತು. ಟೆಸ್ಟ್ ಹಾಗೂ ಟಿ20 ಸರಣಿಗಳಲ್ಲಿ ಸೋಲುಂಡಿರುವ ಇಂಗ್ಲೆಂಡ್ ತಂಡ ಇದೀಗ ಮೂರು ಪಂದ್ಯಗಳ ಓಡಿಐ ಸರಣಿ ಆಡಲು ಸಜ್ಜಾಗುತ್ತಿದೆ. ಉಭಯ ತಂಡಗಳ ನಡುವಿನ ಮೊದಲನೇ ಹಣಾಹಣಿ ಮಂಗಳವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಭಾರತ ತಂಡ 3-0 ಅಂತರದಲ್ಲಿ ಮುಡಿಗೇರಿಸಿಕೊಳ್ಳಲಿದೆ ಎಂದು ಆಂಗ್ಲರ ಮಾಜಿ ನಾಯಕ ಮೈಕಲ್ ವಾನ್ ಟ್ವಿಟರ್ನಲ್ಲಿ ಭವಿಷ್ಯ ನುಡಿದಿದ್ದಾರೆ. "ಜೋ ರೂಟ್ ಹಾಗೂ ಜೋಫ್ರ ಆರ್ಚರ್ ಇಲ್ಲ. ಹಾಗಾಗಿ, ಭಾರತ ತಂಡ 3-0 ಅಂತರದಲ್ಲಿ ಓಡಿಐ ಸರಣಿ ಮುಡಿಗೇರಿಸಿಕೊಳ್ಳಲಿದೆ," ಎಂದು ವಾನ್ ಟ್ವೀಟ್ ಮಾಡಿದ್ದಾರೆ. ಇದರ ಬೆನ್ನಲ್ಲೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮೈಕಲ್ ವಾನ್ ಅವರನ್ನು ಟ್ವಿಟರ್ನಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದರು. ಆಸ್ಟ್ರೇಲಿಯಾ ಪ್ರವಾಸದಲ್ಲಿಯೂ ಭಾರತ ತಂಡ ಎಲ್ಲಾ ಸ್ವರೂಪದ ಸರಣಿಯಲ್ಲೂ ಸೋಲು ಅನುಭವಿಸಲಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಟ್ವೀಟ್ ಮಾಡಿದ್ದರು. ಆದರೆ, ಭಾರತ ಟಿ20 ಹಾಗೂ ಟೆಸ್ಟ್ ಸರಣಿಯಲ್ಲಿ ಜಯ ಸಾಧಿಸಿತ್ತು. ಆ ಮೂಲಕ ವಾನ್ ಭವಿಷ್ಯ ಸುಳ್ಳಾಗಿತ್ತು. ಅಷ್ಟೇ ಅಲ್ಲದೆ ಇಂಗ್ಲೆಂಡ್ ಹಾಗೂ ಭಾರತ ನಡುವಿನ ಟೆಸ್ಟ್ ಸರಣಿ ವೇಳೆ ಪಿಚ್ ಸರಿಯಿಲ್ಲ ಎಂದು ವಾನ್ ಕ್ಯಾತೆ ತೆಗೆದಿದ್ದರು. ಆದರೆ, ಅಂತಿಮವಾಗಿ ಪಿಚ್ ಸರಿಯಾಗಿಯೇ ಇದೆ ಎಂಬುದನ್ನು ಭಾರತದ ಬ್ಯಾಟ್ಸ್ಮನ್ಗಳು ಸಾಬೀತುಪಡಿಸಿದ್ದರು. ಇದೀಗ ಮೈಕಲ್ ವಾನ್, ಓಡಿಐ ಸರಣಿಯಲ್ಲಿ ಟೀಮ್ ಇಂಡಿಯಾ ಗೆಲುವು ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಪ್ರತಿಕ್ರಿಯೆ ನೀಡಿದ್ದು, ಟೀಮ್ ಇಂಡಿಯಾ ಕೂಡ ಅಗ್ರ ಕ್ರಮಾಂಕದ ಬೌಲರ್ಗಳಾದ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ಅವರನ್ನು ಒಳಗೊಂಡಿಲ್ಲ ಎಂದು ವಾನ್ ಕಾಲೆಳೆದಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆರಂಭಿಕ ಜೋಡಿಯ ಪ್ರದರ್ಶನವನ್ನು ಮೆಚ್ಚಿಕೊಂಡ ಇಂಗ್ಲೆಂಡ್ ತಂಡದ ಮಾಜಿ ನಾಯಕ , ಈ ಇಬ್ಬರೂ ಸಚಿನ್ ತೆಂಡೂಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಜೋಡಿಯನ್ನು ನೆನಪು ಮಾಡಿದ್ದಾರೆಂದು ಹೇಳಿದ್ದರು. "ಬಲಗೈ ಬ್ಯಾಟಿಂಗ್ನಲ್ಲಿ ನೀವು ಎಲ್ಲಾ ಕ್ರಮಾಂಕದಲ್ಲಿ ಯಶಸ್ವಿಯಾಗಬೇಕಾದರೆ ನಿಮಗೆ ಸ್ವಲ್ಪ ಅದೃಷ್ಠ ಬೇಕಾಗುತ್ತದೆ. ಭಾರತ ತಂಡ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರೊಂದಿಗೆ ಯಶಸ್ವಿಯಾಗಿದೆ. ಆದರೆ, ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ರೋಹಿತ್-ಕೊಹ್ಲಿ ಓಪನಿಂಗ್ ಮಾಡಿಸುವ ಬಗ್ಗೆ ಯಾವುದೇ ಉದ್ದೇಶವಿರಲಿಲ್ಲ. ಆದರೆ, ಇಂದು(ಶನಿವಾರ) ಈ ಇಬ್ಬರೂ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಆರಂಭಿಕ ಜೋಡಿಯನ್ನು ನೆನಪು ಮಾಡಿಸಿದ್ದಾರೆ," ಎಂದು ತಿಳಿಸಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3lIz9rN