'ಈತ ಬಹಳ ಅಪರೂಪದ ಆಟಗಾರ' : ಭಾರತದ ಯುವತಾರೆಯನ್ನು ಶ್ಲಾಘಿಸಿದ ಬೆಲ್!

ಪುಣೆ: ವಿರುದ್ಧ ಎರಡನೇ ಓಡಿಐ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್‌ ಮಾಡಿದ್ದ ಭಾರತ ತಂಡದ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್‌ ಅವರನ್ನು ಆಂಗ್ಲರ ಮಾಜಿ ಆಟಗಾರ ಐಯಾನ್‌ ಬೆಲ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದಿದ್ದ ಎರಡನೇ ಓಡಿಐ ಪಂದ್ಯದಲ್ಲಿ ರಿಷಭ್‌ ಪಂತ್‌ ಅವರಿಂದ ಮತ್ತೊಂದು ಗಮನಾರ್ಹ ಪ್ರದರ್ಶನ ಮೂಡಿಬಂತು. 66 ರನ್‌ ಗಳಿಸಿ ನಾಯಕ ವಿರಾಟ್‌ ಕೊಹ್ಲಿ ಔಟ್‌ ಆದ ಬಳಿಕ ಕ್ರೀಸ್‌ಗೆ ಬಂದ ಪಂತ್‌, ಕೇವಲ 40 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ ಮೂರು ಬೌಂಡರಿಗಳೊಂದಿಗೆ 77 ರನ್‌ ಚೆಚ್ಚಿದ್ದರು. ಕೆ.ಎಲ್‌ ರಾಹುಲ್‌ ಶತಕ ಹಾಗೂ ರಿಷಭ್ ಪಂತ್‌ ಅವರ ಸ್ಪೋಟಕ ಅರ್ಧಶತಕದ ಬಲದಿಂದ ಟೀಮ್‌ ಇಂಡಿಯಾ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್‌ ಕಳೆದುಕೊಂಡು 336 ರನ್‌ ಗಳಿಸಲು ಸಾಧ್ಯವಾಗಿತ್ತು. ಆ ಮೂಲಕ ಇಂಗ್ಲೆಂಡ್‌ಗೆ ಕಠಿಣ ಗುರಿ ನೀಡಲಾಗಿತ್ತು. ಇಂಗ್ಲೆಂಡ್ ವಿರುದ್ಧದ 2ನೇ ಒಡಿಐ ಪಂದ್ಯದ ಇಎಸ್‌ಪಿಎನ್ ಕ್ರಿಕ್‌ ಇನ್ಫೋ ಜೊತೆ ಮಾತನಾಡಿದ ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ , ಯುವ ತಾರೆ ರಿಷಭ್‌ ಪಂತ್‌ ಬ್ಯಾಟಿಂಗ್‌ ಪ್ರದರ್ಶನವನ್ನು ಗುಣಗಾನ ಮಾಡಿದರು. "ಹೌದು, ಅದ್ಭುತವಾಗಿತ್ತು. ಅವರು(ಪಂತ್) ತನ್ನಲ್ಲಿನ ಪ್ರತಿಭೆಯನ್ನು ಹೊರಹಾಕಿದ್ದಾರೆ. ಇದು ನಿಜಕ್ಕೂ ಪ್ರಬುದ್ಧ ಇನಿಂಗ್ಸ್. ಆದರೆ ಏಳು ಸಿಕ್ಸರ್! ಈ ಬಗ್ಗೆ ಯೋಚಿಸುವುದು ಅದ್ಭುತವಾಗಿದೆ," ಎಂದು ಬೆಲ್‌ ಹೇಳಿದರು. "ಕೆ.ಎಲ್‌ ರಾಹುಲ್‌ ಅವರೊಂದಿಗೆ ರಿಷಭ್ ಪಂತ್‌ ಅವರ ಜತೆಯಾಟ ಪರಿಪೂರ್ಣವಾಗಿತ್ತು ಎಂಬು ಭಾವಿಸುತ್ತೇನೆ. ಅವರು ಮಾಡಿದ್ದನ್ನೇ ಮಾಡುತ್ತಿದ್ದರು, ಆ ಮೂಲಕ ಇನಿಂಗ್ಸ್‌ ಒಂದು ರೂಪವನ್ನು ನೀಡಿದರು. ತಾನು ಏನು ಮಾಡಬೇಕೆಂಬುದನ್ನು ರಿಷಭ್‌ ಪಂತ್ ಆ ಕ್ಷಣದಲ್ಲಿ ಗುರುತಿಸಿದರು," ಎಂದು ಎಡಗೈ ಆಟಗಾರನ್ನು ಗುಣಗಾನ ಮಾಡಿದರು. "ಇನಿಂಗ್ಸ್‌ನ ಕೊನೆಯ 10 ಓವರ್‌ಗಳಲ್ಲಿ ಪಂತ್‌ ಆಡುತ್ತಿದ್ದಾಗ ಏಳು ಸಿಕ್ಸರ್ ಬಾರಿಸಿದರು. ಜತೆಗೆ ಹಾರ್ದಿಕ್‌ ಪಾಂಡ್ಯ ಕೂಡ ಸಮಯಕ್ಕೆ ತಕ್ಕಂತೆ ಬ್ಯಾಟ್‌ ಬೀಸಿದರು," ಎಂದು ಹೇಳಿದರು. "ಟೆಸ್ಟ್, ಓಡಿಐ ಹಾಗೂ ಟಿ20 ಸೇರಿದಂತೆ ಎಲ್ಲಾ ಮಾದರಿಗಳಲ್ಲೂ ಒಂದೇ ರೀತಿ ಬ್ಯಾಟಿಂಗ್‌ ಪ್ರದರ್ಶನ ತೋರುವ ಆಟಗಾರರು ಬಹಳ ವಿರಳ. ಈ ಪಟ್ಟಿಯಲ್ಲಿ ರಿಷಭ್‌ ಪಂತ್‌ ಸೇರ್ಪಡೆಯಾಗುತ್ತಾರೆ. ಈ ವಿಷಯದಲ್ಲಿ ಯುವ ಆಟಗಾರ ಅದ್ಭುತವಾಗಿದ್ದಾರೆ. ದಿನಗಳು ಉರುಳಿದಂತೆ ಅವರು ತಮ್ಮ ಬ್ಯಾಟಿಂಗ್‌ನಲ್ಲಿ ಪರಿಪಕ್ವತೆಯನ್ನು ಸಾಧಿಸುತ್ತಿದ್ದಾರೆ. ಆದರೆ, ಇದು ಅದ್ಭುತ ಇನಿಂಗ್ಸ್," ಎಂದು ಭಾರತದ ಆಟಗಾರನನ್ನು ಐಯಾನ್‌ ಬೆಲ್‌ ಶ್ಲಾಘಿಸಿದರು. ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ 1-1 ಸಮಬಲ ಸಾಧಿಸಿರುವ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಭಾನುವಾರ ಇದೇ ಅಂಗಣದಲ್ಲಿ ನಡೆಯುವ ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3cptKTu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...