ತಾವು ಸೊಬಗನಂತೆ ನಟಿಸಬೇಡಿ, ಮಹಿಳೆಯ ದುಪ್ಪಟ್ಟಾ ಎಳೆದು ಗದರಿಸಿದ್ದು ನೆನಪಿದ್ಯಾ: ಸಿದ್ದರಾಮಯ್ಯಗೆ ಬಿಜೆಪಿ ಟಾಂಗ್

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸುಧಾಕರ್‌ ಶಾಸಕರ ‘ಶೀಲ’ ಶಂಕಿಸುವ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದು ಆಡಳಿತ ಹಾಗೂ ವಿಪಕ್ಷಗಳ ನಡುವೆ ವಾಗ್ದಾದಕ್ಕೂ ವೇದಿಕೆ ಆಗಿದೆ. ಸುಧಾಕರ್‌ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿಕಾರಿದರೆ ಇದೀಗ ಬಿಜೆಪಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ತಾವು ಭಾರೀ ಸೊಬಗನಂತೆ ನಟಿಸಬೇಡಿ ಎಂದು ಟಾಂಗ್ ಕೊಟ್ಟಿದೆ. ಈ ಕುರಿತಾಗಿ ಟ್ವೀಟ್‌ ಮಾಡಿರುವ ಕರ್ನಾಟಕ ಬಿಜೆಪಿ ‘ತಾವು ಭಾರೀ ಸೊಬಗನಂತೆ ನಟಿಸಬೇಡಿ. ಮಹಿಳೆಯರ ಮೇಲೆ ನೀವು ತೋರಿಸಿದ ಗೌರವವನ್ನು ರಾಜ್ಯದ ಜನತೆ ಸಾಕಷ್ಟು ಬಾರಿ ನೋಡಿದ್ದಾರೆ. ಪುತ್ರನ ಮೇಲೆ ದೂರು ಹೇಳಿದ್ದಕ್ಕೆ ಮಹಿಳೆಯ ದುಪ್ಪಟ್ಟಾ ಎಳೆದು ಆಕೆಯನ್ನು ಗದರಿಸಿದ್ದು ಮರೆತು ಹೋಯಿತೇ? ಸಮಸ್ಯೆ ತೋಡಿಕೊಂಡ ಮಹಿಳೆಯ ಮೇಲೆ ಬಾದಾಮಿಯಲ್ಲಿ ಗರಂ ಆಗಿದ್ದು ಮರೆತು ಹೋಯಿತೇ? ಎಂದು ಪ್ರಶ್ನಿಸಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್‌,ಕೆ.ಆರ್ ರಮೇಶ್ ಕುಮಾರ್‌, ಮುನಿಯಪ್ಪ ಸೇರಿದಂತೆ ರಾಜ್ಯದ 225 ಮಂದಿ ಶಾಸಕರ ಶೀಲ ಶಂಕಿಸುವ ಹೇಳಿಕೆಯನ್ನು ನೀಡಿದ್ದರು. ಇವರೆಲ್ಲಾ ಸತ್ಯಹರಿಶ್ಚಂದ್ರರಾ ಎಂದು ಪ್ರಶ್ನೆ ಮಾಡಿದ್ದ ಸುಧಾಕರ್ ಎಲ್ಲಾ ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದರು. ಸುಧಾಕರ್‌ ಈ ಹೇಳಿಕೆ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಸುಧಾಕರ್‌ ಹೇಳಿಕೆಯನ್ನು ಖಂಡಿಸಿ ಹಾಗೂ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈಗಾಗಲೇ ಸ್ವೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಿಎಂ ಬಿಎಸ್‌ ಯಡಿಯೂರಪ್ಪ ಅವರಿಗೆ ಪತ್ರವನ್ನು ಬರೆದಿದ್ದಾರೆ. ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಕುರಿತಾಗಿ ಎಸ್‌ಐಟಿ ತನಿಖೆ ನಡೆದರೆ ತನಿಖೆಗೆ ಒಳಪಡಲು ನಾವೆಲ್ಲರು ಸಿದ್ಧ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ ಬಿಜೆಪಿ ಶಾಸಕರೂ ತನಿಖೆಗೆ ಒಳಪಡಲು ತಯಾರಾಗುವಂತೆ ಸವಾಲನ್ನು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ತಾವು ಭಾರೀ ಸೊಬಗನಂತೆ ನಟಿಸಬೇಡಿ ಟಾಂಗ್ ಕೊಟ್ಟಿದೆ.


from India & World News in Kannada | VK Polls https://ift.tt/3sfT9o5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...