'ಇದು ಟೀಮ್‌ ಇಂಡಿಯಾ ಅಲ್ಲ, ಪ್ರತಿಭಾವಂತ ಕ್ರಿಕೆಟಿಗರ ಫ್ಯಾಕ್ಟರಿ' ಎಂದ ಬಾಂಗರ್‌!

ಹೊಸದಿಲ್ಲಿ: ಪ್ರಸ್ತುತ ಭಾರತೀಯ ಕ್ರಿಕೆಟ್‌ನ ಕಾರ್ಯಾಚರಣೆ ಹಾಗೂ ಕ್ರಿಕೆಟಿಂಗ್‌ ರಚನೆಯನ್ನು ಮಾಜಿ ಬ್ಯಾಟಿಂಗ್‌ ಕೋಚ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಲ್ಲದೆ, ಅನೇಕ ಪ್ರತಿಭಾವಂತ ಆಟಗಾರರನ್ನು ಹುಟ್ಟು ಹಾಕುತ್ತಿರುವ ಭಾರತೀಯ ಕ್ರಿಕೆಟ್‌ ಅನ್ನು 'ಕಾರ್ಖಾನೆ' ಎಂದು ಬಣ್ಣಿಸಿದ್ದಾರೆ. ಫುಣೆಯಲ್ಲಿ ವಿರುದ್ಧ ನಡೆದಿದ್ದ ಮೊದಲನೇ ಓಡಿಐ ಪಂದ್ಯದಲ್ಲಿ ಪ್ರಸಿಧ್‌ ಕೃಷ್ಣ ಹಾಗೂ ಕೃಣಾಲ್‌ ಪಾಂಡ್ಯ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಇಬ್ಬರೂ ತಮ್ಮ ಚೊಚ್ಚಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿ ಗಮನ ಸೆಳೆದಿದ್ದರು. ಓಡಿಐ ಇತಿಹಾಸದಲ್ಲಿಯೇ ಕೃಣಾಲ್‌ ಪಾಂಡ್ಯ ಚೊಚ್ಚಲ ಪಂದ್ಯದಲ್ಲಿಯೇ ವೇಗದ ಅರ್ಧಶತಕ ಸಿಡಿಸಿದರು. ಮತ್ತೊಂದೆಡೆ ಪ್ರಸಿಧ್ ಕೃಷ್ಣ, ಚೊಚ್ಚಲ ಪಂದ್ಯದಲ್ಲಿಯೇ 54 ರನ್‌ ನೀಡಿ 4 ವಿಕೆಟ್‌ ಪಡೆಯುವ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ದಾಖಲೆ ಮಾಡಿದರು. ಪ್ರಸ್ತುತ ಭಾರತ ತಂಡವನ್ನು ಈ ಹಿಂದೆ ಇದ್ದ ಆಸ್ಟ್ರೇಲಿಯಾ ತಂಡಕ್ಕೆ ಸಂಜಯ್‌ ಬಾಂಗರ್‌ ಹೋಲಿಕೆ ಮಾಡಿದ್ದಾರೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದೇ ಸಮಯದಲ್ಲಿ ಎರಡು ಭಾರತ ತಂಡಗಳನ್ನು ಕಣಕ್ಕೆ ಇಳಿಸಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಒಂದು ಕಾಲದಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಸ್ಟ್ರೇಲಿಯಾ ಹಾಗೂ ಆಸ್ಟ್ರೇಲಿಯಾ'ಎ' ಎರಡು ತಂಡಗಳನ್ನು ಕಣಕ್ಕೆ ಇಳಿಸುತ್ತಿತ್ತು. ಆಸ್ಟ್ರೇಲಿಯಾದಲ್ಲಿ ನಡದಿದ್ದ ಈ ಟೂರ್ನಿ ನನಗೆ ಇನ್ನೂ ನೆನಪಿದೆ. ಆಸ್ಟ್ರೇಲಿಯಾ ಎರಡು ತಂಡಗಳು ಒಂದೇ ಸಮಯದಲ್ಲಿ ಕಣಕ್ಕೆ ಇಳಿದಿದ್ದವು. ಅದೇ ರೀತಿ ಇದೀಗ ಭಾರತ ತಂಡವೂ ಡೆಪ್ತ್‌ ಹೊಂದಿದೆ. ಇದು ಒಂದು ರೀತಿಯ ಫ್ಯಾಕ್ಟರಿ; ರಚನೆ ತುಂಬಾ ಚೆನ್ನಾಗಿದೆ," ಎಂದು ಸ್ಟಾರ್‌ ಸ್ಪೋರ್ಟ್ಸ್‌ಗೆ ಬಾಂಗರ್ ತಿಳಿಸಿದರು. ಐಪಿಎಲ್‌-ದೇಶಿ ಕ್ರಿಕೆಟ್‌ ಅನ್ನು ಶ್ಲಾಘಿಸಿದ ಬಾಂಗರ್: ಐಪಿಎಲ್‌ ಅದ್ಭುತ ಫೌಂಡೇಷನ್‌ ನೀಡಿದೆ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ ಕೂಡ ಅತ್ಯುತ್ತಮವಾಗಿದೆ. ನಮ್ಮಲ್ಲಿ ಗುಣಮಟ್ಟ ಹಾಗೂ ಪ್ರಮಾಣ ಚೆನ್ನಾಗಿದೆ, ಈ ಹಿನ್ನೆಲೆಯಲ್ಲಿ ನಮಗೆ ತುಂಬಾ ಆಯ್ಕೆಗಳಿವೆ. ಹಾಗಾಗಿ ಟೀಮ್‌ ಇಂಡಿಯಾ ಬೆಂಚ್‌ ಸಾಮರ್ಥ್ಯ ಬಲಿಷ್ಠವಾಗಿದೆ," ಎಂದು ಹೇಳಿದರು. ಕಳೆದ ಹಲವು ತಿಂಗಳುಗಳಿಂದ ಮೂರೂ ಸ್ವರೂಪದ ಕ್ರಿಕೆಟ್‌ನಲ್ಲಿ ಹಲವು ಪ್ರತಿಭೆಗಳು ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಟಿ ನಟರಾಜನ್‌, ವಾಷಿಂಗ್ಟನ್‌ ಸುಂದರ್, ಮೊಹಮ್ಮದ್ ಸಿರಾಜ್, ಇಶಾನ್‌ ಕಿಶಾನ್‌ ಹಾಗೂ ಸೂರ್ಯಕುಮಾರ್ ಯಾದವ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31gHj18

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...