ಬೆಂಗಳೂರು: ಮಂಚದ ಕೆಳಗೆ ಅವಿತು ಕುಳಿತು ಪತ್ನಿಯ ಅನೈತಿಕ ಸಂಬಂಧದ ಪ್ರಿಯಕರನನ್ನು ಚೂರಿ ಇರಿದು ಕೊಂದ ಪತಿ

ಬೆಂಗಳೂರು: ಅನೈತಿಕ ಸಂಬಂಧದಿಂದ ಬೇಸತ್ತ ವ್ಯಕ್ತಿಯೊಬ್ಬ, ಮಂಚದ ಕೆಳಗೆ ಹಲವು ತಾಸುಗಳವರೆಗೆ ಅವಿತು ಕುಳಿತು ತನ್ನ ಪತ್ನಿಯ ಪ್ರಿಯಕರನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಚಿಕ್ಕಮಗಳೂರು ಮೂಲದ ಶಿವಕುಮಾರ್‌ (27) ಎಂಬಾತನನ್ನು ಕೊಲೆ ಮಾಡಿದ ಆರೋಪದ ಮೇರೆಗೆ ನೆಲಮಂಗಲದ ಭರತ್‌ ಕುಮಾರ್‌ ಎಂಬಾತನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನಗರದ ಅಂಧ್ರಹಳ್ಳಿಯಲ್ಲಿ ಗುರುವಾರ ಬೆಳಗ್ಗೆ 4ರಲ್ಲಿ ಘಟನೆ ನಡೆದಿದೆ. ನೆಲಮಂಗಲದ ಭರತ್‌ ಕುಮಾರ್‌ ಮತ್ತು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಹೊಸಹಳ್ಳಿ ತಾಂಡಾದ ನಿವಾಸಿ ವಿನುತಾ 8 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವಾಗ ಪರಿಚಯವಾಗಿ ಮದುವೆಯಾಗಿದ್ದರು. ಕೊಲೆಯಾದ ಶಿವಕುಮಾರ್‌ ಬಡಗಿ ಕೆಲಸ ಮಾಡುತ್ತಿದ್ದು, 3 ವರ್ಷಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿಗೆ ಬಂದ ಆರಂಭದಲ್ಲಿ ತನ್ನದೇ ಊರಿನ ಪರಿಚಿತ ವಿನುತಾ ಮನೆಯಲ್ಲೇ ವಾಸವಿದ್ದ. ಒಟ್ಟಿಗೆ ವಾಸವಿದ್ದ ವೇಳೆ ಇಬ್ಬರು ಹೆಚ್ಚಿನ ಸಲುಗೆ ಹೊಂದಿದ್ದರಿಂದ ಕುಪಿತಗೊಂಡ ಭರತ್‌, ಶಿವಕುಮಾರ್‌ ಜತೆ ಜಗಳ ಮಾಡಿದ್ದ. ಶಿವಕುಮಾರ್‌ ಮನೆಯಿಂದ ಹೋದ ಬಳಿಕ ಗಂಡ ಮತ್ತು ಮಕ್ಕಳನ್ನು ಬಿಟ್ಟು ಹೋದ ವಿನುತಾ ಅಂಧ್ರಹಳ್ಳಿಯಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡು ವಾಸವಿದ್ದಳು ಎಂದು ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು. ಮಕ್ಕಳನ್ನು ತುಮಕೂರಿನ ಸಂಬಂಧಿಕರ ಮನೆಯಲ್ಲಿ ಬಿಟ್ಟ ಭರತ್‌, ಒಂಟಿಯಾಗಿ ವಾಸವಿದ್ದ. ಮತ್ತೊಂದೆಡೆ ವಿನುತಾ ಮತ್ತು ಶಿವಕುಮಾರ್‌ ನಡುವೆ ಮುಂದುವರಿದಿತ್ತು. ವಿನುತಾ ಮನೆಗೆ ಶಿವಕುಮಾರ್‌ ಹೋಗುತ್ತಿರುವ ವಿಚಾರ ಭರತ್‌ಗೆ ಗೊತ್ತಾಗಿತ್ತು. ಮಂಚದ ಅಡಿ ಬಚ್ಚಿಟ್ಟುಕೊಂಡು ಕೊಲೆಗೆ ಸ್ಕೆಚ್‌! ತನ್ನನ್ನು ತೊರೆದು ಹೋಗಿರುವುದಕ್ಕೆ ಕುಪಿತಗೊಂಡಿದ್ದ ಭರತ್‌, ಸುಮಾರು 3 ತಿಂಗಳ ಹಿಂದೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿ ಸ್ಟ್ರಿಂಗ್‌ ಚಾಕು ತಂದಿಟ್ಟುಕೊಂಡಿದ್ದ. ಬುಧವಾರ (ಮಾ.24) ಸಂಜೆ ತನ್ನ ಸ್ನೇಹಿತನನ್ನು ಡ್ರಾಪ್‌ ಮಾಡಲು ಅಂಧ್ರಹಳ್ಳಿಗೆ ತೆರಳಿದ್ದ. ಅದೇ ವೇಳೆ ಮನೆಗೆ ಚಿಲಕ ಹಾಕಿಕೊಂಡು ಚಿಕನ್‌ ತರಲು ವಿನುತಾ ಹೊರಗೆ ಹೋಗಿದ್ದಳು. ಶಿವಕುಮಾರ್‌ ಬರುತ್ತಾನೆ ಎಂದು ಮನೆಯೊಳಗೆ ಪ್ರವೇಶಿಸಿದ ಭರತ್‌, ಮಂಚದ ಕೆಳಗೆ ಅಡಗಿ ಕುಳಿತಿದ್ದ. ರಾತ್ರಿ ಮನೆಗೆ ಬಂದ ಶಿವಕುಮಾರ್‌ ಮತ್ತು ವಿನುತಾ ಒಟ್ಟಿಗೆ ಊಟ ಮಾಡಿದ್ದಾರೆ. ರಾತ್ರಿ ವೇಳೆ ವಿನುತಾ ಶೌಚಗೃಹಕ್ಕೆ ಹೋದಾಗ ಮಂಚದಡಿಯಿಂದ ಹೊರ ಬಂದ ಭರತ್‌, ಶೌಚಗೃಹಕ್ಕೆ ಚಿಲಕ ಹಾಕಿದ್ದಾನೆ. ಕತ್ತು ಹಿಸುಕಿ ಭರತ್‌ನನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಸಾಧ್ಯವಾಗದಿದ್ದಾಗ ಚಾಕುವಿನಿಂದ ಮೂರು ಬಾರಿ ಇರಿದು ಕೊಲೆ ಮಾಡಿದ್ದಾನೆ ಎಂದು ಅಧಿಕಾರಿ ತಿಳಿಸಿದರು. ಆನಂತರ ಪತ್ನಿಯನ್ನು ಕರೆದುಕೊಂಡು ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ತೆರಳಿ ಶರಣಾಗಿ ವಿಷಯ ತಿಳಿಸಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಭರತ್‌ನನ್ನು ಬಂಧಿಸಿದ್ದಾರೆ.


from India & World News in Kannada | VK Polls https://ift.tt/2NSBtzU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...