3 ಮದುವೆಯಾದ 62ರ ವ್ಯಕ್ತಿ ಸೆರೆ; ಲವ್‌ಜಿಹಾದ್‌ ಎಂದು ಬಿಂಬಿಸಿದ್ದ ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್!

ಮಂಗಳೂರು: ಇಳಿ ವಯಸ್ಸಿನಲ್ಲಿ 22 ವರ್ಷದ ಮಹಿಳೆಯನ್ನು ವಂಚಿಸಿ ಮೂರನೇ ಮದುವೆಯಾದುದ್ದಲ್ಲದೆ, ಆಕೆಯನ್ನು ಅತ್ಯಾಚಾರವೆಸಗಿದ ಆರೋಪದಲ್ಲಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೋಳಾರ ನಿವಾಸಿ ಗಂಗಾಧರ (62) ಬಂಧಿತ ವ್ಯಕ್ತಿಯಾಗಿದ್ದು, ಯುವತಿಯೊಬ್ಬಳನ್ನು ಛೂಬಿಟ್ಟು 62 ವರ್ಷದ ವಯಸ್ಸಿನ ವ್ಯಕ್ತಿಯನ್ನು ಮತಾಂತರಗೊಳಿಸಲಾಗಿದೆ ಎಂಬ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಆರೋಪಿ ಗಂಗಾಧರ ವಿರುದ್ಧ ಅತ್ಯಾಚಾರ, ಗರ್ಭಪಾತ ನಡೆಸಿದ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿ ಹಲವು ಮಹಿಳೆಯರಿಗೆ ವಂಚಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಆ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ. ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಗುರುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿ, ಮಹಿಳೆಯೊಬ್ಬಳು ತನ್ನ ಮೇಲೆ ಅತ್ಯಾಚಾರವೆಸಗಿರುವ ಬಗ್ಗೆ ಪಾಂಡೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಗಂಗಾಧರನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಆರೋಪಿ ಗಂಗಾಧರ ಕೆಲವು ತಿಂಗಳ ಹಿಂದೆ ತನ್ನ ಪರಿಚಯದ ಕೇರಳ ಮೂಲದ ಸೈಯದ್‌, ಶಬೀರ್‌ ಮತ್ತು ಮುಹಮ್ಮದ್‌ ಎಂಬವರ ಜತೆಗೂಡಿ ಯುವತಿಯನ್ನು ಸಂಪರ್ಕಿಸಿ, ತನ್ನ ಹೆಸರು ಮಹಮ್ಮದ್‌ ಅನೀಸ್‌ ಎಂದು ಪರಿಚಯಿಸಿದ್ದ. 22ರ ಹರೆಯದ ಯುವತಿ ಮೂಲತಃ ಪುತ್ತೂರಿನವಳಾಗಿದ್ದು ಹಿಂದೆ ಮದುವೆಯಾಗಿ ಗಂಡ ಅಪಘಾತದಲ್ಲಿ ಮೃತಪಟ್ಟಿದ್ದು, ಒಂದು ಮಗು ಕೂಡಾ ಇದೆ. ಸುಳ್ಳು ಹೇಳಿ ಮದುವೆ! ಗಂಗಾಧರ್‌ನ ಜತೆಗಿದ್ದ ಮಿತ್ರರು ಯುವತಿಯ ಬಳಿ ‘ಅನೀಸ್‌ಗೆ ತರಕಾರಿ ವ್ಯಾಪಾರವಿದ್ದು ಸ್ಥಿತಿವಂತರು. ಕುಟುಂಬದ ಜವಾಬ್ದಾರಿಯ ಒತ್ತಡದಿಂದ ಮದುವೆಯಾಗಿರಲಿಲ್ಲ, ಈಗ ವಿವಾಹವಾಗುತ್ತಿದ್ದಾರೆ. ನಿನ್ನ ಬದುಕು ಕೂಡಾ ಒಳ್ಳೆಯದಾಗಲಿದೆ’ ಎಂದು ನಂಬಿಸಿದ್ದರು. ಇದನ್ನು ನಂಬಿದ ಯುವತಿ 2020ರ ಡಿ. 21ರಂದು ಆರೋಪಿ ವ್ಯಕ್ತಿಯನ್ನು ವಿವಾಹವಾಗಿದ್ದರು. ಆರೋಪಿ ಜಾತಕ ಬಯಲು!ಮದುವೆಯಾದ ಕೆಲದಿನಗಳಲ್ಲೇ ಈ ವ್ಯಕ್ತಿ ತನ್ನ ಧರ್ಮದವನಲ್ಲ, ಅಲ್ಲದೆ ಬೇರೆ ಅಕ್ರಮ ಸಂಬಂಧಗಳೂ ಇವೆ ಎನ್ನುವುದು ಗೊತ್ತಾಗಿ ಮಹಿಳೆಗೆ ಶಾಕ್‌ ಆಗಿದೆ. ಗಂಗಾಧರ ಅಲಿಯಾಸ್‌ ಅನೀಸ್‌ ಬಲಾತ್ಕಾರವಾಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಎರಡು ತಿಂಗಳ ಗರ್ಭಿಣಿಯಾದ ಬಳಿಕ ಆಸ್ಪತ್ರೆಗೆ ಕರೆದೊಯ್ದು ಮಾತ್ರೆ ತಿನ್ನಿಸಿ ಗರ್ಭಪಾತ ಮಾಡಿಸಿದ್ದಾನೆಂದು ತಿಳಿದು ಬಂದಿದೆ. ಇದಾದ ನಂತರ ಮಾ.23ರಂದು ಆರೋಪಿ ಗಂಗಾಧರನ ಮೊದಲ ಪತ್ನಿ ‘ತನ್ನ ಗಂಡನನ್ನು ಯಾರೋ ಅಪಹರಿಸಿ ಬಲವಂತವಾಗಿ ಮತಾಂತರಗೊಳಿಸಿ ವಿವಾಹ ನಡೆಸಿದ್ದಾರೆ’ ಎಂಬ ದೂರು ನೀಡಿದ್ದರು. ಪೊಲೀಸರು ಗಂಗಾಧರನನ್ನು ಪತ್ತೆ ಮಾಡಿ ಕರೆಸಿ ವಿಚಾರಣೆ ನಡೆಸಿದಾಗ ಈ ಎಲ್ಲಾ ವಿಚಾರಗಳು ಬಹಿರಂಗಗೊಂಡಿದೆ. ತರಕಾರಿ ವ್ಯಾಪಾರಿಯಾಗಿದ್ದ ಆರೋಪಿಗಂಗಾಧರ್‌ಗೆ ಯಶೋಧಾ ಮೊದಲ ಪತ್ನಿಯಾಗಿದ್ದು, ಇವರ ಇಬ್ಬರು ಮಕ್ಕಳು ವಿದೇಶದಲ್ಲಿದ್ದಾರೆ. 25 ವರ್ಷ ಹಿಂದೆಯೇ ಇನ್ನೊಬ್ಬರು ಮಹಿಳೆಯೊಂದಿಗೆ ವಿವಾಹವಾಗಿದ್ದ. ಈ ದಾಂಪತ್ಯದಲ್ಲೂ ಮೂವರು ಮಕ್ಕಳಿದ್ದಾರೆ. ಬಳಿಕ ಡಿಸೆಂಬರ್‌ನಲ್ಲಿ ಪುತ್ತೂರಿನ ಮಹಿಳೆಯೊಬ್ಬರನ್ನು ವಿವಾಹವಾಗಿದ್ದಾನೆ. ಇದೇ ರೀತಿ ಹಲವು ಯುವತಿಯರನ್ನು ವಂಚಿಸಿ ಮದುವೆಯಾದ ಬಗ್ಗೆ ಮಾಹಿತಿ ಬಂದಿದ್ದು, ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಆರೋಪಿ ನಗರದಲ್ಲಿ ತರಕಾರಿ ವ್ಯಾಪಾರ ಮಾತ್ರವಲ್ಲದೆ ಇನ್ನಿತರ ವ್ಯವಹಾರ ಮಾಡುತ್ತಿದ್ದ. ಈ ಕಾರಣದಿಂದ ನಾನಾ ಕಡೆ ಪ್ರವಾಸ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ಸಹಕಾರಿಸಿದವರು ಕೇರಳದವರು!ಆರೋಪಿಗೆ ಸಹಕಾರ ನೀಡಿದ ಆರೋಪಿಗಳಾದ ಸೈಯದ್‌, ಶಬೀರ್‌ ಮತ್ತು ಮುಹಮ್ಮದ್‌ ಕೇರಳದವರಾಗಿದ್ದು, ಅವರಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿ ಮತ್ತು ಮಹಿಳೆಯ ಜತೆ ಈ ಆರೋಪಿಗಳ ನಂಟು ಯಾವ ರೀತಿ ಎಂಬುವುದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಲವ್‌ ಜಿಹಾದ್‌ ಎಂದಿದ್ದ ಹಿಂದೂ ಮುಖಂಡ !ಇನ್ನು ಕಾಮುಕ ಗಂಗಾಧರ ಮುಸ್ಲಿಂ ಯುವತಿಯನ್ನು ಸುಳ್ಳು ಹೇಳಿ ಮದುವೆಯಾದ ಪ್ರಕರಣ ಸುದ್ದಿಯಾಗುತ್ತಿದ್ದಂತೆ ಇದನ್ನು ಲವ್‌ ಜಿಹಾದ್‌ ಎಂಬಂತೆ ಬಿಂಬಿಸಿದ್ದ ವಿಶ್ವ ಹಿಂದೂ ಪರಿಷತ್‌ ಈ ಬಗ್ಗೆ ‘ಮಂಗಳೂರಿನಲ್ಲಿ ಲವ್ ಜಿಹಾದಿನ ಮತ್ತೊಂದು ಮುಖ ಬಯಲು. ಮುಸ್ಲಿಂ ಹೆಣ್ಣುಮಕ್ಕಳನ್ನು ಛೂ ಬಿಟ್ಟು ಲವ್ ಜಿಹಾದ್ ತಂತ್ರ. 22 ವರ್ಷದ ಮುಸ್ಲಿಂ ಯುವತಿಯನ್ನು ಮದುವೆಯಾದ 62 ವರ್ಷದ ಉದ್ಯಮಿ (ಗಂಗಾಧರ) ಇಸ್ಲಾಮಿಗೆ ಮತಾಂತರ - ಗಂಗಾಧರನ ಪತ್ನಿಯಿಂದ ದೂರು. ಪಾಂಡೇಶ್ವರ ಠಾಣೆಯಲ್ಲಿ ಕೇಸು ದಾಖಲು.. ವಿಶೇಷ ತನಿಖೆಗೆ ವಿಶ್ವ ಹಿಂದು ಪರಿಷತ್ ಆಗ್ರಹ’ ಎಂದು ವಿಎಚ್‌ಪಿ ಮುಖಂಡ ಶರಣ್‌ ಪಂಪ್‌ವೆಲ್‌ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದರು. ಇದೀಗ ಮಂಗಳೂರು ಪೊಲೀಸರು ಗಂಗಾಧರನನ್ನು ಬಂಧಿಸಿ ನಿಜಾಂಶ ಬಹಿರಂಗಪಡಿಸಿದ್ದಾರೆ.


from India & World News in Kannada | VK Polls https://ift.tt/3sopBVb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...