ಬಂಟ್ವಾಳ: ಪತ್ನಿಗೆ ವಿಚ್ಛೇದನ ನೀಡು, ಸಂಸಾರ ಸರಿಯಾಗುತ್ತೆ ಎಂದ ಜ್ಯೋತಿಷಿಗೆ ರಾಡ್‌ನಿಂದ ಹೊಡೆದು ಹಲ್ಲೆ!

ಬಂಟ್ವಾಳ: ಬಿ.ಸಿ.ರೋಡಿನ ವಾಣಿಜ್ಯ ಸಂಕೀರ್ಣದಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ಲಕ್ಷ್ಮೀಕಾಂತ ಭಟ್‌ ಯಾನೆ ಹನುಮಂತಪ್ಪ ಎಂಬ ವ್ಯಕ್ತಿಗೆ ನಡೆಸಿದ ಆರೋಪದಲ್ಲಿ ಪಂಜಿಕಲ್ಲು ನಿವಾಸಿ ಮೋಹನ ಪ್ರಭು (38) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಇನ್ಸ್‌ಪೆಕ್ಟರ್‌ ಚೆಲುವರಾಜು ನೇತೃತ್ವದಲ್ಲಿಅಪರಾಧ ವಿಭಾಗ ಎಸ್‌.ಐ. ಕಲೈಮಾರ್‌ ಅವರ ತಂಡ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಮೋಹನ ಪ್ರಭು ಅವರು ವೈಯಕ್ತಿಕ ದ್ವೇಷದಿಂದ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಲ್ಲೆ ನಡೆಸಲು ಕಾರಣವೇನು?ಕಳೆದ ಸುಮಾರು ಒಂದು ವರ್ಷಕ್ಕೂ ಮೊದಲು ನಡೆದ ಘಟನೆ ಇದಾಗಿದೆ. ಮೋಹನ್‌ ಪ್ರಭು ಎಂಬುವವರು ಜ್ಯೋತಿಷ್ಯವನ್ನು ಭಾರೀ ನಂಬುತ್ತಿದ್ದರು. ಈ ಹಿನ್ನೆಲೆ ತನ್ನ ಸಂಸಾರದ ಕುರಿತಂತೆ ಕೇಳಲು ಮೋಹನ ಪ್ರಭು, ಲಕ್ಷ್ಮೀಕಾಂತ ಭಟ್ ಬಳಿ ತೆರಳಿದ್ದಾರೆ. ಈ ವೇಳೆ ಬಾಗಲಕೋಟೆ ಮೂಲಕ ಹನುಮಂತಪ್ಪ ಯಾನೆ ಲಕ್ಷ್ಮೀಕಾಂತ್‌ ಭಟ್‌, ಕೆಲವೊಂದು ಸಲಹೆ ನೀಡಿದ್ದಾರೆ. ನಿಮಗೆ ಮತ್ತು ನಿಮ್ಮ ಪತ್ನಿಗೆ ಸರಿ ಬರುವುದಿಲ್ಲ. ಹೀಗಾಗಿ ವಿಚ್ಛೇದನ ನೀಡುವಂತೆ ಸಲಹೆ ನೀಡಿದ್ದಾರೆ. ಇತ್ತ ಮೋಹನ ಪ್ರಭು ಕೂಡ ಡಿವೋರ್ಸ್‌ ನೀಡಿದ್ದಾನೆ. ಆದರೆ ನಂತರ ಈತನ ಮಾತು ಸುಳ್ಳು ಎಂದು ತಿಳಿದ ಮೋಹನ ಜ್ಯೋತಿಷಿ ಮೇಲೆ ದ್ವೇಷ ಹೊಂದಿದ್ದ. ತನ್ನ ಸಂಸಾರದಲ್ಲಿ ಬಿರುಕು ತಂದು, ತನ್ನ ಹೆಂಡತಿ ತನ್ನನ್ನು ಬಿಟ್ಟುಹೋಗಲು ಜ್ಯೋತಿಷಿಯೇ ಕಾರಣವಾಗಿದ್ದ ಎಂಬ ಕೋಪದಲ್ಲಿ ಪ್ರಭು, ಮಾ.19ರಂದು ಜ್ಯೋತಿಷ್ಯ ಕೇಳುವ ನೆಪದಲ್ಲಿ ಆಗಮಿಸಿ ರಾಡ್‌ನಲ್ಲಿ ಹನುಮಂತಪ್ಪನ ತಲೆಗೆ ಹೊಡೆದು ಪರಾರಿಯಾಗಿದ್ದ.


from India & World News in Kannada | VK Polls https://ift.tt/3fgRfzI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...