ಯುವಕನನ್ನು ಕಿಡ್ನ್ಯಾಪ್‌ ಮಾಡಿ ₹2 ಕೋಟಿಗೆ ಬೇಡಿಕೆ! ಕೂಲಿ ಕಾರ್ಮಿಕರಂತೆ ಟ್ರ್ಯಾಕ್ಟರ್‌ನಲ್ಲಿ ತೆರಳಿ ಆರೋಪಿಗಳ ಬಂಧಿಸಿದ ಖಾಕಿ!

ಬೆಂಗಳೂರು: ಕೂಲಿ ಕಾರ್ಮಿಕರ ಸೋಗಿನಲ್ಲಿ ಟ್ರ್ಯಾಕ್ಟರ್‌ನಲ್ಲಿ ತೆರಳಿ ನಾಲ್ವರು ಅಪಹರಣಕಾರರನ್ನು ಬಂಧಿಸಿದ ಪೂರ್ವ ವಿಭಾಗ ಪೊಲೀಸರು, 2 ಕೋಟಿ ರೂ. ಒತ್ತೆ ಹಣಕ್ಕಾಗಿ ಅಪಹರಣವಾಗಿದ್ದ ಉದ್ಯಮಿ ಪುತ್ರನನ್ನು ರಕ್ಷಿಸಿದ್ದಾರೆ. ಕೊತ್ತನೂರು ಮತ್ತು ಹೆಣ್ಣೂರಿನಲ್ಲಿ ಫರಹಾನ್‌ ಕಾಲೇಜ್‌ ಆ್ಯಂಡ್‌ ಸ್ಕೂಲ್‌ ಆಫ್‌ ನರ್ಸಿಂಗ್‌ ನಡೆಸುತ್ತಿರುವ ಆರಿಫ್‌ ಎಂಬುವರ ಪುತ್ರ ರಬೀಜ್‌ ಅರಾಫತ್‌ನನ್ನು(22) ರಕ್ಷಿಸಲಾಗಿದೆ. ಆರೋಪಿಗಳಾದ ಅಬ್ದುಲ್‌ ಫಹಾದ್‌, ಜಬೀವುಲ್ಲಾ, ಕೊರೆವಲ್‌ ಸಲ್ಮಾನ್‌ ಮತ್ತು ತೌಹೀದ್‌ ಪಾಷ ಬಂಧಿತರು. ಆರೋಪಿಗಳಾದ ಕಿರಣ್‌, ಗೌತಮ್‌ ಮತ್ತು ತೌಫಿಕ್‌ ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಿಬಿಎ ಮುಗಿಸಿರುವ ಅರಾಫತ್‌, ಯೂರೋಪ್‌ನಲ್ಲಿ ಉನ್ನತ ವ್ಯಾಸಂಗ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ. ಈತನ ತಂದೆ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು, ಈಗ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಹೀಗಾಗಿ ಅಪಾರ ಹಣ ಇರುತ್ತದೆ. ಅವರ ಒಬ್ಬ ಮಗನನ್ನು ಅಪಹರಿಸಿದರೆ ಒಳ್ಳೆಯ ಹಣ ಸಿಗಬಹುದು ಎಂದು ಮಾಸ್ಟರ್‌ಮೈಂಡ್‌ ಅಬ್ದುಲ್‌ ಫಹಾದ್‌ ಪ್ಲಾನ್‌ ಮಾಡಿದ್ದ. ತಲೆಮರೆಸಿಕೊಂಡಿರುವ ಆರೋಪಿ ಕಿರಣ್‌ ಇತ್ತೀಚೆಗೆ ತನ್ನ ಸಹೋದರಿ ಮದುವೆಗೆ ಸಾಲ ಮಾಡಿಕೊಂಡಿದ್ದ. ಬೇಗ ಸಾಲ ತೀರಿಸಲು ಸ್ಕೆಚ್‌ ಹಾಕುತ್ತಿದ್ದ. ಈ ವೇಳೆ ಪರಿಚಯವಾದ ಫಹಾದ್‌ ಗುಂಪಿಗೆ ಸೇರಿದ್ದ. ಏಳು ಮಂದಿ ಸೇರಿ ಅರಾಫತ್‌ನನ್ನು ಅಪಹರಿಸಲು ಕಳೆದ ಒಂದು ತಿಂಗಳಿಂದ ಪ್ಲಾನ್‌ ಮಾಡುತ್ತಿದ್ದರು. ಅದಕ್ಕಾಗಿ ಒಎಲ್‌ಎಕ್ಸ್‌ನಲ್ಲಿ 35 ಸಾವಿರ ರೂ. ಕೊಟ್ಟು ಹಳೆ ಮಾರುತಿ ಕಾರನ್ನು ಖರೀದಿ ಮಾಡಿದ್ದರು ಎಂದು ಆಯುಕ್ತ ಕಮಲ್‌ ಪಂತ್‌ ತಿಳಿಸಿದರು. ಮಾ.25ರಂದು ಕೆ.ಜಿ.ಹಳ್ಳಿ ವ್ಯಾಪ್ತಿಯ ಶಿವರಾಮಯ್ಯ ಲೇಔಟ್‌ನಲ್ಲಿರುವ ಮನೆ ಬಳಿ ಹೋಗುತ್ತಿದ್ದ ಅರಾಫತ್‌ನನ್ನು ವಿಳಾಸ ಕೇಳುವ ನೆಪದಲ್ಲಿ ಅಡ್ಡಗಟ್ಟಿದ್ದಾರೆ. ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡಿದ್ದಾರೆ. ಈ ವೇಳೆ ಸ್ಥಳೀಯರೊಬ್ಬರು ಆಕ್ಷೇಪ ವ್ಯಕ್ತಪಡಿಸಿದಾಗ ಯುವತಿಯನ್ನು ಚುಡಾಯಿಸಿದ್ದಾನೆ ಎಂದು ಹೇಳಿ ಹೊತ್ತೊಯ್ದಿದ್ದಾರೆ. ಕಾರಿನಲ್ಲಿ ಕೆಐಎ ಏರ್‌ಪೋರ್ಟ್‌ ರಸ್ತೆ, ಕೊತ್ತನೂರು ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. 2 ಕೋಟಿ ರೂ.ಗೆ ಡಿಮ್ಯಾಂಡ್‌! ಅಪಹರಣವಾದ ಎರಡು ತಾಸುಗಳ ಬಳಿಕ ಅರಾಫತ್‌ ಫೋನ್‌ನಿಂದ ಅವರ ತಂದೆಗೆ ವಾಟ್ಸ್‌ಆ್ಯಪ್‌ ಕರೆ ಮಾಡಿದ ಆರೋಪಿಗಳು, 2 ಕೋಟಿ ರೂ. ಹಣ ನೀಡಬೇಕು. ಇಲ್ಲದಿದ್ದರೆ ಕೈ ಕಾಲು ಮುರಿದುಹಾಕುತ್ತೇವೆ. ಪೊಲೀಸರಿಗೆ ತಿಳಿಸಬಾರದು. ನಿಮ್ಮ ಚಲನವಲನ ಗಮನಿಸುತ್ತಿದ್ದೇವೆ ಎಂದು ಬೆದರಿಕೆ ಹಾಕಿದ್ದಾರೆ. ಮಗನ ಅಪಹರಣವಾಗಿರುವ ಬಗ್ಗೆ ತಂದೆ ಆರಿಫ್‌ ಕೆ.ಜಿ.ಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಆರೋಪಿಗಳ ಇರುವಿಕೆಯನ್ನು ಪತ್ತೆ ಮಾಡಿದ್ದಾರೆ. ಕೂಲಿಕಾರರ ಹೆಸರಿನಲ್ಲಿ ಮುಗಿಬಿದ್ದರುಅರಾಫತ್‌ನನ್ನು ವಶದಲ್ಲಿಟ್ಟುಕೊಂಡ ಜಾಗದಲ್ಲಿ ಕಾಮಗಾರಿ ನಡೆಯುತ್ತಿದ್ದವು. ಅಲ್ಲಿ ಟ್ರ್ಯಾಕ್ಟರ್‌ ಓಡಾಡುತ್ತಿದ್ದವು. ಹೀಗಾಗಿ, ಪೊಲೀಸರ ತಂಡ ಕೂಲಿಕಾರರಂತೆ ಟ್ರ್ಯಾಕ್ಟರ್‌ವೊಂದರಲ್ಲಿ ಕುಳಿತುಕೊಂಡು ಸ್ಥಳಕ್ಕೆ ತೆರಳಿ ಅಪಹರಣಕಾರರ ಮೇಲೆ ಮುಗಿ ಬಿದ್ದು ಬಂಧಿಸಿ, ಅರಾಫತ್‌ನನ್ನು ರಕ್ಷಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ ತಂಡಕ್ಕೆ ಆಯುಕ್ತರು 40 ಸಾವಿರ ರೂ. ನಗದು ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಿದ್ದಾರೆ.


from India & World News in Kannada | VK Polls https://ift.tt/3cpDcGk

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...