: ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಕರೆ ಮಾಡಿ ಸಾಗರ ತಾಲೂಕಿನ ಆನಂದಪುರ ಸಮೀಪದ ಗ್ರಾಮವೊಂದರ ರೈತನಿಗೆ 1.67 ಲಕ್ಷ ರೂ. ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಎಂ.ರಮೇಶ್(37) ಎಂಬುವವರು ಮೋಸ ಹೋದ ರೈತ. ಚಾಲ್ತಿ ಖಾತೆ ಹೊಂದಿದ್ದು ಅದರಲ್ಲಿ 2 ಲಕ್ಷ ರೂ.ಗೂ ಅಧಿಕ ಹಣವಿದ್ದು, ಅದರಲ್ಲಿ 80 ಸಾವಿರ ರೂ. ಡೆಪಾಸಿಟ್ ಮಾಡಿದರೆ 10 ವರ್ಷದ ನಂತರ 1.40 ಲಕ್ಷ ರೂ. ಬರುತ್ತದೆ ಎಂದು ಮ್ಯಾನೇಜರ್ ಎಂದು ಹೇಳಿಕೊಂಡು ಕರೆ ಮಾಡಿರುವ ವ್ಯಕ್ತಿ ಮಾಹಿತಿ ನೀಡಿದ್ದಾನೆ. ಆದರೆ, ರಮೇಶ್ ಅವರು ಡೆಪಾಸಿಟ್ ಮಾಡುವುದಿಲ್ಲ ಎಂದು ಹೇಳಿದ್ದಕ್ಕೆ ಮೊಬೈಲ್ಗೆ ಬರುವ ಒಟಿಪಿ ತಿಳಿಸಿದ್ದಲ್ಲಿ ಡೆಪಾಸಿಟ್ ರದ್ದುಗೊಳಿಸುವುದಾಗಿ ತಿಳಿಸಿದ್ದಾನೆ. ಅದನ್ನು ನಂಬಿ ಒಟಿಪಿ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೇ ರೀತಿ ಒಟ್ಟು ಏಳು ಒಟಿಪಿಗಳನ್ನು ಕಳುಹಿಸಲಾಗಿದೆ. ಎಲ್ಲ ಮಾಹಿತಿಗಳನ್ನು ಪಡೆದು ಖಾತೆಯಿಂದ 1.65 ಲಕ್ಷ ರೂ. ವರ್ಗಾಯಿಸಲಾಗಿದೆ. ಖಾತೆಯಿಂದ ಹಣ ಮಾಯವಾಗಿರುವುದು ಗಮನಕ್ಕೆ ಬಂದ ತಕ್ಷಣ ಮ್ಯಾನೇಜರ್ ಎಂದು ಕರೆ ಮಾಡಿದ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ವಾಪಸ್ ಕರೆ ಮಾಡಿದ್ದಾರೆ. ಆದರೆ, ಆತ ಫೋನ್ ಸ್ವೀಕರಿಸಿಲ್ಲ. ಬಳಿಕ ಮೋಸ ಹೋಗಿರುವುದಾಗಿ ಗೊತ್ತಾಗಿದೆ. ಈ ಸಂಬಂಧ ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
from India & World News in Kannada | VK Polls https://ift.tt/3siSja2