ಮೈಸೂರು: ಬೋಗಾದಿ ರಿಂಗ್ ರಸ್ತೆಯ ಆರ್ಎಂಪಿ ವೃತ್ತದಲ್ಲಿ ಸೋಮವಾರ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಯಲ್ಲಿ ಕರ್ತವ್ಯ ನಿರತ ಮೂವರು ಪೊಲೀಸರ ಮೇಲೆ ನಡೆಸಿದ 13 ಮಂದಿಯನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ತಾಲೂ ಕಿನ ಗಾಣಿಗರ ಹುಂಡಿಯ ವೆಂಕಟೇಶ್, ರಘು, ಮಳವಳ್ಳಿ ತಾಲೂಕಿನ ಚಿಕ್ಕೇ ಬಾಗಿಲು ಗ್ರಾಮದ ಮಧು, ವಿಜಯನಗರ ನಾಲ್ಕನೇ ಹಂತದ ವಿನಯ್, ಮರಟಿ ಕ್ಯಾತನಹಳ್ಳಿಯ ದಂಡಪ್ಪ, ಬೋಗಾ ದಿಯ ಚಾಮುಂಡೇ ಶ್ವರಿ ಬೀದಿಯ ಸ್ವಾಮಿ, ಪಾಂಡವಪುರ ತಾಲೂಕಿನ ಚಿನಕುರುಳಿ ಗ್ರಾಮದ ಅರುಣ್, ದೊಡ್ಡ ಕೊಪ್ಪಲು ಗ್ರಾಮದ ನಿವಾಸಿ ವಸಂತ್ ಕುಮಾರ್, ಕೂರ್ಗಳ್ಳಿಯ ಸೋಮಶೇಖರ್, ದಾಸನಕೊಪ್ಪಲು ಗ್ರಾಮದ ಅಕ್ಷಯ್, ಬೋಗಾದಿ ಬ್ಯಾಂಕ್ ಕಾಲನಿಯ ಶ್ರೀಕಾಂತ್, ಕಾಮನಕೊಪ್ಪಲು ನಿವಾಸಿ ಮರಿಸ್ವಾಮಿ, ಅರಕಲಗೂಡಿನ ಮೋಹನ್ ಎಂಬವರೇ ಬಂಧಿತರಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರ್ಎಂಪಿ ವೃತ್ತ ದಲ್ಲಿಸೋಮವಾರ ಸಂಜೆ ನಡೆದ ಅಪಘಾತದಲ್ಲಿ ಬೋಗಾದಿಯ ನಿವಾಸಿ ಸಿವಿಲ್ ಗುತ್ತಿಗೆ ದಾರ ದೇವರಾಜು ಎಂಬುವರು ಮೃತ ಪಟ್ಟರು. ಈ ಘಟನೆಗೆ ಸಂಚಾರ ಪೊಲೀಸರೇ ಕಾರಣ ಎಂದು ರೊಚ್ಚಿಗೆದ್ದ ಸ್ಥಳೀಯರು ಕಲ್ಲುತೂರಾಟ ನಡೆಸಿ ರಸ್ತೆ ಬಂದ್ ಮಾಡಿ, ಪೊಲೀಸ್ ವಾಹನ ವನ್ನು ಜಖಂಗೊಳಿಸಿ ದ್ದರು. ಜತೆಗೆ ವಿವಿಪುರಂ ಸಂಚಾರ ಠಾಣೆಯ ಎಎಸ್ಐಗಳಾದ ಸ್ವಾಮಿನಾಯಕ, ಮಾದೇಗೌಡ ಮತ್ತು 112 ತುರ್ತು ಸ್ಪಂದನಾ ವಾಹನದ ಚಾಲಕ ಮಂಜುನಾಥ್ ಎಂಬವರ ಮೇಲೆ ಹಲ್ಲೆ ಮಾಡಿದ್ದರು. ಕೆಲ ಸಾರ್ವಜನಿಕರು ನಡೆದ ಘಟನೆಯನ್ನು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲ ತಾಣಗಳ ಮೂಲಕ ಎಲ್ಲೆಡೆ ವೈರಲ್ ಆಗಿತ್ತು. ಈ ವಿಡಿಯೋ ಆಧರಿಸಿ ತನಿಖೆ ಕೈಗೊಂಡ ವಿಜಯ ನಗರ ಠಾಣೆ ಪೊಲೀಸರು, 13 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಿಪ್ಪರ್ ಚಾಲಕನ ವಿರುದ್ಧ ದೂರು ದಾಖಲು! ರಸ್ತೆ ಅಪಘಾತದಲ್ಲಿ ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ನಲ್ಲಿ ತೆರಳುತ್ತಿದ್ದ ದೇವರಾಜು ಮೃತಪಟ್ಟಿದ್ದು, ಅದಕ್ಕೆ ಟಿಪ್ಪರ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ವಿವಿ ಪುರಂ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಟಿಪ್ಪರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
from India & World News in Kannada | VK Polls https://ift.tt/3cYUR6Z