ಹುಣಸೂರು ತಾಲೂಕಿನ 108 ಹಳ್ಳಿಗಳಿಗೆ ಕಾವೇರಿ ನೀರು, 41.84 ಕೋಟಿ ರೂ. ವೆಚ್ಚದಡಿ ನೀರು ಪೂರೈಕೆ!

ಹುಣಸೂರು: ಜಲ ಜೀವನ್‌ ಮಿಷನ್‌ ಯೋಜನೆಯಡಿ ತಾಲೂಕಿನ 108 ಹಳ್ಳಿಗಳಿಗೆ 41.84 ಕೋಟಿ ರೂ. ವೆಚ್ಚದಡಿ ಎರಡು ಹಂತದಲ್ಲಿ ಮನೆಗಳಿಗೆ ಮೀಟರ್‌ ಅಳವಡಿಸಿ ಕಾವೇರಿ ಪೂರೈಸುವ ಯೋಜನೆ ಮಂಜೂರಾಗಿದೆ ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ತಿಳಿಸಿದರು. ಮೊದಲ ಹಂತದಲ್ಲಿ 28 ಹಳ್ಳಿಗಳಿಗೆ 12 ಕೋಟಿ ರೂ. ವೆಚ್ಚದಡಿ ಮೀಟರ್‌ ಅಳವಡಿಸಿ ನೀರು ಪೂರೈಸುವ ಯೋಜನೆಗೆ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಸಂಸದ ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಳಗೂಡಿ ವಾರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಎರಡನೇ ಹಂತದಲ್ಲಿ 80 ಹಳ್ಳಿಗಳಿಗೆ 29.76 ಕೋಟಿ ರೂ. ವೆಚ್ಚದ ಯೋಜನೆ ಮಂಜೂರಾಗಿದ್ದು. ಟೆಂಡರ್‌ ಕರೆಯಬೇಕಿದೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. 271 ಹಳ್ಳಿಗಳಲ್ಲೂ ಮೀಟರ್‌ ಅಳವಡಿಕೆಗ್ರಾಮೀಣಾಭಿವೃದ್ಧಿ ಇಲಾಖೆಯ ಜಲ ಜೀವನ್‌ ಮಿಷನ್‌ ಯೋಜನೆಯಡಿ ತಾಲೂಕಿನ 271 ಹಳ್ಳಿಗಳ ಪ್ರತಿ ಮನೆಗೂ ಮೀಟರ್‌ ಅಳವಡಿಸಿ ಪೂರೈಸುವ ಬೃಹತ್‌ ಯೋಜನೆ ರೂಪಿಸಲಾಗಿದೆ. ಈಗಾಗಲೇ ಇರುವ ಕೆ.ಆರ್‌.ನಗರ ಬಳಿಯ ಕಾವೇರಿ ನದಿಯಿಂದ ಹಾಗೂ ಕೆ.ಆರ್‌.ಎಸ್‌.ಹಿನ್ನೀರಿನಿಂದ ಹಲವೆಡೆ ನೀರು ಪೂರೈಸಲಾಗುತ್ತಿದ್ದು, ಉಳಿದ ಹಳ್ಳಿಗಳಿಗೆ ಉಂಡವಾಡಿ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಸುವ ಯೋಜನೆ ಮಂಜೂರಾಗಿದ್ದು. ತಾಲೂಕಿನ ಪ್ರತಿ ಹಳ್ಳಿಗಳ ಎಲ್ಲಮನೆಗಳಿಗೆ ಕಾವೇರಿ ನೀರು ಪೂರೈಕೆಯಾಗಲಿದೆ. ಮುಂದಿನ ಎರಡೂವರೆ ವರ್ಷದೊಳಗೆ ಎಲ್ಲ ಮನೆಗಳಿಗೂ ನೀರು ದೊರೆಯಲಿದೆ. ಒಬ್ಬ ವ್ಯಕ್ತಿಗೆ 55 ಲೀ ನೀರು ಈ ಯೋಜನೆಯಡಿ ಕುಟುಂಬದ ಪ್ರತಿ ಸದಸ್ಯರಿಗೆ ನಿತ್ಯ 55 ಲೀ.ನಂತೆ ನೀರು ಪೂರೈಸಲಾಗುವುದು. ಇದಕ್ಕಾಗಿ ಈಗಾಗಲೇ ಪ್ರತಿ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ನೀರು ಪೂರೈಸಲು ಸುಮಾರು 60 ವರ್ಷ ಬಾಳಿಕೆ ಬರುವಂತ ಎಚ್‌.ಡಿ.ಪೈಪ್‌ ಅನ್ನು ಅಳವಡಿಸಲಾಗುವುದು. ಯೋಜನೆ ಪೂರೈಸಿದ ನಂತರ ಗ್ರಾ.ಪಂ.ಗಳಿಗೆ ಹಸ್ತಾಂತರಿಸಲಾಗುವುದೆಂದರು. ಈ ಯೋಜನೆಗೆ ಕೇಂದ್ರ ಸರಕಾರ ಶೇ.32.5, ರಾಜ್ಯ ಸರಕಾರ ಶೇ.32.5, ಗ್ರಾ.ಪಂ.ಶೇ.15 ಅನುದಾನ ನೀಡಲಿದ್ದು, ಫಲಾನುಭವಿ ಶೇ.10ರಷ್ಟು ವೆಚ್ಚ ಭರಿಸಬೇಕಿದ್ದು, ಫಲಾನುಭವಿ ಭರಿಸುವ ಪಾಲಿನ ಹಣವನ್ನು ಹಂತಹಂತವಾಗಿ ಆತ ಭರಿಸಬೇಕಾದ ನೀರಿನ ಶುಲ್ಕಕ್ಕೆ ಜಮೆ ಮಾಡಿಕೊಳ್ಳಲಾಗುವುದೆಂದು ಗ್ರಾಮೀಣ ಕುಡಿಯುವ ನೀರು ಯೋಜನೆ ಪ್ರಭಾರ ಎ.ಇ.ಇ.ನಾಗರಾಜ್‌ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಎ.ಇ.ಇ.ನಾಗರಾಜ್‌, ಮುಖಂಡರಾದ ರಾಜುಶಿವರಾಜೇಗೌಡ, ಕುಮಾರ್‌, ರಘು, ಲೋಕೇಶ್‌ ಇದ್ದರು. ಸಿದ್ದರಾಮಯ್ಯ ನೇರ ನಡೆ-ನುಡಿಯವರು ಸಿದ್ದರಾಮಯ್ಯ ಕುಮಾರಸ್ವಾಮಿ ಹಾಗೂ ಬಿ.ಎಸ್‌.ವೈ ನಡುವೆ ಅಜ್ಡೆಸ್ಟ್‌ಮೆಂಟ್‌ ರಾಜಕಾರಣ ಮಾಡ್ತಿದ್ದಾರೆಂಬ ವಿಶ್ವನಾಥರ ಆರೋಪದ ಬಗ್ಗೆ ಪ್ರಶ್ನೆಗೆ ಸಿದ್ದರಾಮಯ್ಯರಿಗೆ ಅಂತಹ ದರ್ದು ಬಂದಿಲ್ಲ, ಅವರೇನಿದ್ದರೂ ನೇರ ನುಡಿಯವರೆಂದು ಸಮರ್ಥಿಸಿಕೊಂಡರು. ಯಡಿಯೂರಪ್ಪನವರ ಸರಕಾರದಲ್ಲಿ ಬ್ಲಾಕ್‌ಮೇಲ್‌ ಮಾಡುವವರು, ಮುನಿಸಿಕೊಂಡವರಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ. ಆದರೆ ಹುಣಸೂರು ಜಿಲ್ಲೆ ಸೇರಿದಂತೆ ತಾಲೂಕಿನ ಅಭಿವೃದ್ಧಿಗಾಗಿ ನಾನು ಹಾಗೂ ವಿಶ್ವನಾಥರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿಲ್ಲವೆಂದು ಶಾಸಕ ಮಂಜುನಾಥ್‌ ಬೇಸರ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/3eVGi6K

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...