ಬೆಂಗಳೂರು: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿಆಯುಷ್ಮಾನ್ ಭಾರತ್-ಆರೋಗ್ಯ ಆರೋಗ್ಯ ಕಾರ್ಡ್ಗಳ ವಿತರಣೆ ಪ್ರಕ್ರಿಯೆಯನ್ನು ಮಾ.31 ರವರೆಗೆ ಸ್ಥಗಿತಗೊಳಿಸಿ ಸುತ್ತೋಲೆ ಹೊರಡಿಸಲಾಗಿದೆ. ಆರೋಗ್ಯ ಕಾರ್ಡ್ ನೀಡುವಾಗ ಫಲಾನುಭವಿಗಳ ಕೈ ಬೆರಳ ಗುರುತನ್ನು ಬಯೋಮೆಟ್ರಿಕ್ ಯಂತ್ರದಲ್ಲಿಒತ್ತಿ ದಾಖಲಿಸಲಾಗುತ್ತದೆ. ಇದರ ಮೂಲಕವೂ ಹರಡುವ ಸಾಧ್ಯತೆ ಇದೆ. ಜತೆಗೆ ಕಾರ್ಡ್ ವಿತರಣೆ ಕೇಂದ್ರಗಳಲ್ಲಿಜನರು ಗುಂಪುಗೂಡುತ್ತಾರೆ. ಇದನ್ನು ತಪ್ಪಿಸಲು ಕಾರ್ಡ್ ವಿತರಣೆ ಸ್ಥಗಿತಗೊಳಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ಕುಮಾರ್ ಪಾಂಡೆ ಸುತ್ತೋಲೆ ಹೊರಡಿಸಿದ್ದಾರೆ. ಹೊಸ ಸಹಾಯವಾಣಿ ಆರೋಗ್ಯ ಇಲಾಖೆಯ '104' ಸಹಾಯವಾಣಿ ಜತೆಗೆ ನಾಸ್ಕಾಮ…, ಎಚ್.ಜಿ.ಎಸ್. ಹಾಗೂ ಟಿಸಿಎಸ್ ಸಹಯೋಗದಲ್ಲಿ080-46848600 ಮತ್ತು 080-6669200 ಸಂಖ್ಯೆಯ ಹೊಸ ಸಹಾಯವಾಣಿಗಳನ್ನೂ ಆರಂಭಿಸಲಾಗಿದೆ. ಸಾರ್ವಜನಿಕರು ಕೊರೊನಾ ಕುರಿತ ಮಾಹಿತಿಗೆ ಈ ಸಂಖ್ಯೆಗಳಿಗೆ ಕರೆ ಮಾಡಬಹುದು. ಭಾರತ ಸೇರಿ ಒಟ್ಟು 150ರಾಷ್ಟ್ರಗಳಿಗೂ ಹೆಚ್ಚು ಕಡೆ ವೈರಸ್ ಹರಡಿದೆ. ಕರ್ನಾಟಕಕ್ಕೂ ಕಾಲಿಟ್ಟಿದೆ. ದೇಶದಲ್ಲಿ 4 ಸಾವಿನ ಪ್ರಕರಣ ದಾಖಲಾಗಿದೆ. ಭಾರತದಲ್ಲಿ 190 ಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ.
from India & World News in Kannada | VK Polls https://ift.tt/2QtBnNq