ಟೀಮ್ ಇಂಡಿಯಾದಲ್ಲಿ ನಾಯಕತ್ವ ವಿಭಜನೆಯಾಗಬೇಕೇ?

ಹೊಸದಿಲ್ಲಿ: ಕಳೆದ ಕೆಲವು ವರ್ಷಗಳಿಂದ ಈ ಒಂದು ವಿಷಯ ಬಿಸಿ ಬಿಸಿ ಚರ್ಚೆಯಲ್ಲಿದೆ. ನಾಯಕ , ಎಲ್ಲ ಮೂರು ಪ್ರಕಾರದಲ್ಲೂ ತಂಡದ ನಾಯಕತ್ವ ಹೊಣೆ ವಹಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಕಪ್ತಾನಗಿರಿಯಲ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಪ್ರಕಾರದಲ್ಲಿ ಭಾರತ ತಂಡವು ಉತ್ತಮ ನಿರ್ವಹಣೆಯನ್ನೇ ನೀಡುತ್ತಿದೆ. ಹಾಗಿದ್ದರೂ ನಾಯಕನ ಮೇಲಿನ ಕೆಲಸದೊತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಾಯಕತ್ವವನ್ನು ಹಂಚಿಕೊಳ್ಳಬೇಕೆಂಬ ಬೇಡಿಕೆ ಕೇಳಿಬಂದಿದೆ. ಹಿಟ್‌ಮ್ಯಾನ್ ಖ್ಯಾತಿಯ ಅವರಿಗೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಾಯಕತ್ವ ನೀಡಬೇಕೆಂಬ ಬೇಡಿಕೆ ಕೇಳಿಬಂದಿದೆ. ಆದರೆ ಆಯ್ಕೆ ಸಮಿತಿ ಮಾತ್ರ ಈ ಯಾವ ಲೆಕ್ಕಾಚಾರಗಳಿಗೂ ಆಸ್ಪದ ನೀಡಲಿಲ್ಲ. ಪರಿಣಾಮ ಎಲ್ಲ ಮೂರು ಪ್ರಕಾರದಲ್ಲೂ ವಿರಾಟ್ ಕೊಹ್ಲಿ ಅವರೇ ನಾಯಕತ್ವವನ್ನು ವಹಿಸುತ್ತಿದ್ದಾರೆ. ಅನಿವಾರ್ಯವೆನಿಸಿದಾಗ ವಿಶ್ರಾಂತಿ ಪಡೆದ ಸಂದರ್ಭದಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ, ಕೂಡಾ ನಾಯಕತ್ವ ವಿಭಜನೆ ಮಾಡುವ ಅಗತ್ಯವಿಲ್ಲ. ಎಲ್ಲ ಪ್ರಕಾರದಲ್ಲೂ ವಿರಾಟ್ ಕೊಹ್ಲಿ ಅವರೇ ಮುಂದುವರಿಯಬೇಕು ಎಂದು ಸಲಹೆ ಮಾಡಿದ್ದಾರೆ. "ಎಲ್ಲಿಯ ವರೆಗೂ ವಿರಾಟ್ ಕೊಹ್ಲಿ ಅವರಲ್ಲಿ ಸಾಮರ್ಥ್ಯವಿದೆಯೋ ಹಾಗೂ ಭಾರತ ಉತ್ತಮ ನಿರ್ವಹಣೆ ನೀಡುತ್ತಿದೆಯೋ ಅಲ್ಲಿಯ ವರೆಗೆ ನಾಯಕತ್ವ ವಿಭಜನೆಯ ಅಗತ್ಯವಿಲ್ಲ. ನಾಯಕತ್ವ ವಿಭಜನೆ ಮಾಡುವುದು ಭಾರತೀಯ ಕ್ರಿಕೆಟ್‌ನ ಸಾಂಪ್ರದಾಯವಲ್ಲ. ಅತ್ಯುತ್ತಮ ನಿರ್ವಹಣೆ ನೀಡುವ ವರೆಗೂ ವಿರಾಟ್ ಕೊಹ್ಲಿ ಮುಂದುವರಿಯಬೇಕು" ಎಂದು ನುಡಿದರು. ಅದೇ ಹೊತ್ತಿಗೆ ರೋಹಿತ್ ಶರ್ಮಾ ಕೂಡಾ ಅತ್ಯುತ್ತಮ ನಾಯಕ ಎಂಬುದನ್ನು ತಿಳಿಸಿದರು. "ರೋಹಿತ್ ನಾಲ್ಕು ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ. ಅಲ್ಲದೆ ಟಿ20 ಪ್ರಕಾರದಲ್ಲಿ ಅತ್ಯುತ್ತಮ ನಾಯಕತ್ವವನ್ನು ಮೆರೆದಿದ್ದಾರೆ. ಆದರೂ ವಿರಾಟ್ ಕೊಹ್ಲಿ ಮುಂದಾಳತ್ವದಲ್ಲಿ ಟಿ20 ಪ್ರಕಾರದಲ್ಲೂ ಭಾರತ ಅತ್ಯುತ್ತಮ ನಿರ್ವಹಣೆಯನ್ನೇ ನೀಡಿದೆ" ಎಂದು ಸಮರ್ಥಿಸಿಕೊಂಡರು. ಇನ್ನು ಅಂಕಿಅಂಶಗಳನ್ನು ಗಮನಿಸಿದಾಗ ವಿರಾಟ್‌ಗಿಂತಲೂ ರೋಹಿತ್ ಶರ್ಮಾ ಟಿ20 ಪ್ರಕಾರದಲ್ಲಿ ಅತ್ಯುತ್ತಮ ನಾಯಕತ್ವ ದಾಖಲೆಯನ್ನು ಹೊಂದಿದ್ದಾರೆ. ರೋಹಿತ್ ಮುಂದಾಳತ್ವದಲ್ಲಿ ಭಾರತ 19 ಪಂದ್ಯಗಳ ಪೈಕಿ 15ರಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಶೇಕಡಾ 78.94ರ ಗೆಲುವನ್ನು ಕಾಪಾಡಿಕೊಂಡಿದೆ. ಇನ್ನೊಂದೆಡೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟಿ20ನಲ್ಲಿ ಭಾರತ 37 ಪಂದ್ಯಗಳ ಪೈಕಿ 22ರಲ್ಲಿ ಗೆಲುವು ದಾಖಲಿಸಿದ್ದು, 65.71ರ ಗೆಲುವಿನ ಶೇಕಡವನ್ನು ಕಾಪಾಡಿಕೊಂಡಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿರುವ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ 72 ಪಂದ್ಯಗಳ ಪೈಕಿ 41ರಲ್ಲಿ ಗೆಲುವು ದಾಖಲಿಸಿದೆ. ಧೋನಿ 59.28ರ ಗೆಲುವಿನ ಶೇಕಡವನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ 10 ಏಕದಿನ ಪಂದ್ಯಗಳಲ್ಲೂ ನಾಯಕತ್ವ ವಹಿಸಿದ್ದು, ಎಂಟರಲ್ಲಿ ಭಾರತ ಗೆಲುವು ದಾಖಲಿಸಿದೆ. ಇನ್ನು ವಿರಾಟ್ ಕೊಹ್ಲಿ 89 ಪಂದ್ಯಗಳಲ್ಲಿ 62ರಲ್ಲಿ ವಿಜಯ ಗಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Qyjywx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...