ಬೆಂಗಳೂರು: ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಮುಷ್ಕರ ನಡೆಸುತ್ತಿದ್ದು, ಇದು 'ಭಾರತ್ ಬಂದ್' ಎಂದು ಬಿಂಬಿತಗೊಂಡಿದ್ದರ ಪರಿಣಾಮ ಜನಸಾಮಾನ್ಯರು ಬೆಳಗ್ಗೆ ಹೆಚ್ಚಾಗಿ ಓಡಾಟ ಮಾಡಿಲ್ಲ. ಪರಿಣಾಮ ಬಸ್ಗಳು, ಬೆಳಗ್ಗಿನ ವ್ಯಾಪಾರಿಗಳು ನಷ್ಟ ಅನುಭವಿಸಿದ್ದಾರೆ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳ ಸಂಚಾರ ಎಂದಿನಂತೆ ಇದೆ. ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಇನ್ನು ಮೆಟ್ರೊ ಸಂಚಾರ ಎಂದಿನಂತಿದೆ. ಮುಂಜಾನೆಯೇ ಮೆಟ್ರೋದಲ್ಲಿ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಮೆಟ್ರೋ ರೈಲು ಸೇವೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ. ಆಟೋ ಸಂಚಾರ ಕೂಡಾ ಎಂದಿನಂತೆ ಇದೆ. ಕೆ.ಆರ್.ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಬೆಳಗ್ಗೆ ಕಡಿಮೆಯಿತ್ತು. ನಂತರ ವ್ಯಾಪಾರ ಯಥಾಸ್ಥಿತಿಗೆ ಮರಳಿದೆ. ಆದರೆ ಹೂವಿನ ಮಾರುಕಟ್ಟೆಗೆ ನಷ್ಟ ಸಂಭವಿಸಿದೆ. ಬೆಳಗ್ಗೆ ಗ್ರಾಹಕರು ಹೆಚ್ಚಾಗಿ ಕಾಣಿಸಿಕೊಳ್ಳದ ಹಿನ್ನೆಲೆ ಬಾಡಿ ಹೋಗುವ ಸಂಭವ ಹೆಚ್ಚಿದೆ. ಅಹಿತಕರ ಘಟನೆ ನಡೆಯದಂತೆ ಕೆಆರ್ ಮಾರುಕಟ್ಟೆಯಲ್ಲಿ ಪೊಲೀಸ್ ಹಾಗೂ ಕೆಎಸ್ಆರ್ಪಿಯನ್ನು ನಿಯೋಜಿಸಲಾಗಿದೆ. ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಾಹನಗಳ ಸಂಚಾರ ಎಂದಿನಂತೆ ಕಂಡುಬಂದಿದೆ. ಯಾವುದೇ ಅಹಿತರಕ ಘಟನೆಯಾದ ಬಗ್ಗೆ ವರದಿಯಾಗಿಲ್ಲ. ನಗರದ ಟೌನ್ ಹಾಲ್ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಟೌನ್ ಹಾಲ್ನಲ್ಲಿ ಬುಧವಾರ ಯಾವುದೇ ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಭದ್ರತೆಗೆ ಎರಡು ಕೆಎಸ್ಆರ್ಪಿ ತುಕಡಿ, ಒಂದು ಸಿಎಆರ್ ಮತ್ತು ಒಂದು ವಾಟರ್ ಜೆಟ್ ನಿಯೋಜಿಸಲಾಗಿದೆ. ಟೌನ್ ಹಾಲ್ ಭದ್ರತೆ ಗೆ ಒಟ್ಟು 200 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
from India & World News in Kannada | VK Polls https://ift.tt/2FtAOwX