ಮೋದಿ ಸರಕಾರದ ಮುಂದಿನ ಅಜೆಂಡಾ ಏನು ಗೊತ್ತೇ?

ಹೊಸದಿಲ್ಲಿ: ಆರ್ಟಿಕಲ್‌ 370 ರದ್ದುಗೊಳಿಸಿದ ಬಳಿಕ ಮೋದಿ ಸರಕಾರದ ಮುಂದಿನ ಅಜೆಂಡ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮತ್ತೆ ಪಡೆದುಕೊಳ್ಳುವುದಾಕಬೇಕಿದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನಗಳನ್ನು ರದ್ದುಗೊಳಿಸುವ ನಿರ್ಣಯದ ಚರ್ಚೆಯ ಮೇಲೆ ಮಾತನಾಡಿದ ಅವರು, ಕಾಶ್ಮೀರದ ವಿಚಾರದಲ್ಲಿ ಇನ್ನು ಮಧ್ಯಸ್ಥಿಕೆ ವಹಿಸುವ ಅಗತ್ಯವೇ ಇಲ್ಲ. ಅಂದು ದೇಶದಿಂದ ಕಾನೂನು ಬಾಹಿರವಾಗಿ ಪಡೆದುಕೊಂಡಿದ್ದ ಪಾಕ್‌ ಆಕ್ರಮಿತ ಪ್ರದೇಶವನ್ನು ಭಾರತಕ್ಕೆ ಹಿಂದುಗಿಸಲು ಅಮೆರಿಕ ಅಧ್ಯಕ್ಷ ಡೊಲಾಲ್ಡ್‌ ಟ್ರಂಪ್‌ ಇಮ್ರಾನ್‌ ಖಾನ್‌ಗೆ ಸೂಚನೆ ನೀಡಲಿ ಎಂದು ಹೇಳಿದ್ದಾರೆ.

ಪಾಕ್‌ ಆಕ್ರಮಿತ ಪ್ರದೇಶವನ್ನು ಮತ್ತೆ ಪಡೆದುಕೊಳ್ಳುವುದೇ ಕೇಂದ್ರದ ಮುಂದಿರುವ ಮತ್ತೊಂದು ಬಹುದೊಡ್ಡ ಅಜೆಂಡಾವಾಗಿದೆ. ಗೃಹ ಸಚಿವ ಅಮಿತ್‌ ಶಾ ಹಾಗೂ ಮೋದಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಆಕ್ರಮಿಷತ ಪ್ರದೇಶವನ್ನು ಹಿಂಪಡೆಯಲು ಭಾರತ ಸನ್ನದ್ಧವಾಗಿದೆ ಎಂದು ಸುಬ್ರಮಣಿಯನ್‌ ಸ್ವಾಮಿ ಹೇಳಿದರು. ನರಸಿಂಹ ಸ್ವಾಮಿ ಸರಕಾರವಿದ್ದ ವೇಳೆ ಸಂಸತ್‌ನಲ್ಲಿ ಪಾಕ್‌ ಆಕ್ರಮಿತ ಪ್ರದೇಶವನ್ನು ವಾಪಸ್‌ ಪಡೆಯುವ ನಿರ್ಣಯ ಕೈಗೊಳ್ಳಲಾಗಿತ್ತು ಎಂದ ಅವರು, ಕಾಶ್ಮೀರದಿಂದ ಆರ್ಟಿಕಲ್‌ 370 ತೆಗೆದುಹಾಕಲು ರಾಜ್ಯಸಭೆ, ಲೋಕಸಭೆಯಲ್ಲಿ ಅಂಗೀಕಾರವಾಗಬೇಕಾಗಿಲ್ಲ. ರಾಷ್ಟ್ರಪತಿಯ ಸಹಿ ಮಾತ್ರವೇ ಸಾಕು ಎಂದು ಹೇಳಿದ್ದರು. ಅದರಂತೆಯೇ ಸರಕಾರ ಇದೀಗ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಈ ನಿರ್ಧಾರ ಪೂರ್ವಾಗ್ರಹ ಪೀಡಿತವಾಗಿದ್ದು, ಈ ನಿರ್ಧಾರದಿಂದ 5 ಲಕ್ಷ ಮಂದಿ ಕಾಶ್ಮೀರದ ಪಂಡಿತರು ಹಾಗೂ ಸಿಖ್ಖರು ಕಾಶ್ಮೀರವನ್ನೇ ತೊರೆಯುವಂತಾಯಿತು ಎಂದು ಅವರು ಹೇಳಿದ್ದಾರೆ. ಆರ್ಟಿಕಲ್‌ 370 ಒಂದು ವರ್ಗಕ್ಕೆ ಸೀಮಿತವಾಗಿತ್ತು. ಭಾರತದ ಸಂವಿಧಾನದ ಪ್ರಕಾರ ಇದು ತಪ್ಪು. ಹೀಗಿರಲು ಸಾಧ್ಯವೇ ಇಲ್ಲ. ಆರ್ಟಿಕಲ್‌ 370 ಜಾರಿಯಾಗಿರುವುದೂ ವಿವಿಧ ರೀತಿಯಲ್ಲಿ ಕಾನೂನು ಬಾಹಿರವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್‌ ಹಾಗೂ ಕೆಲ ಪ್ರತಿಪಕ್ಷಗಳು ಸರಕಾರದ ನಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಕೇವಲ ರಾಜಕೀಯ ದುರುದ್ಧೇಶವೇ ಹೊರತು ಮತ್ತೇನಲ್ಲ. ಅಷ್ಟಾಗಿಯೂ ಇದೊಂದು ತಾತ್ಕಾಲಿಕ ನಿಯಮವಾಗಿದೆ ಅಷ್ಟೇ. ಇದನ್ನು ವಾಪಸ್‌ ಪಡೆಯುವುದು ಕಾನೂನು ಬಾಹಿರವೇನಲ್ಲ ಎಂದು ಅವರು ಹೇಳಿದ್ದಾರೆ.


from India & World News in Kannada | VK Polls https://ift.tt/2MDxqnY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...