ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿ ಸರಕಾರ ಐತಿಹಾಸಿಕ ಮತ್ತು ದೂರಗಾಮಿ ಪರಿಣಾಮವುಳ್ಳ ದಿಟ್ಟ ನಿರ್ಧಾರವನ್ನು ಪ್ರಕಟಿಸಿದೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ವಿವಾದಾತ್ಮಕ 370ನೇ ವಿಧಿಯನ್ನು ಸೋಮವಾರ ಕಿತ್ತು ಹಾಕಿರುವ ಸರಕಾರ, ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ. ಈ ಮೂಲಕ ಕಳೆದ ನಾಲ್ಕು ದಶಕದಿಂದ ಹಿಂಸಾಗ್ರಸ್ತವಾಗಿ ಹಿಂದುಳಿದಿರುವ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಭರವಸೆಯನ್ನು ಮೂಡಿಸಿದೆ. 72 ವರ್ಷಗಳಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಈ 370ನೇ ವಿಧಿಯ ವಿರುದ್ಧ ಬಿಜೆಪಿ ನಿರಂತರವಾಗಿ ನಡೆಸುತ್ತಿದ್ದ ಹೋರಾಟಕ್ಕೆ ನರೇಂದ್ರ ಮೋದಿ ಸರಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದು 67 ದಿನಗಳಲ್ಲೇ ಜಯ ಸಿಕ್ಕಂತಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ರಾಜ್ಯಸಭೆಯಲ್ಲಿ ವಿಧಿ ರದ್ದತಿ ನಿರ್ಣಯ ಮತ್ತು ರಾಜ್ಯ ಪುನರ್ವಿಂಗಡಣೆ ವಿಧೇಯಕ ಮಂಡಿಸುತ್ತಿದ್ದಂತೆಯೇ ದೇಶಾದ್ಯಂತ ಸಂಚಲನ ಉಂಟಾಯಿತು. ಮೋದಿ-ಶಾ ಜೋಡಿಯ ಧೈರ್ಯಕ್ಕೆ ಬಿಜೆಪಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರೆ, ಕಾಂಗ್ರೆಸ್, ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ಕೆಲವು ಪ್ರತಿ ಪಕ್ಷಗಳು ಸರಕಾರದ ನಿರ್ಧಾರವನ್ನು ವಿರೋಧಿಸಿವೆ. ಸೀಕ್ರೆಟ್ ಆಗಿ ನಡೆಯಿತು ಕಾಶ್ಮೀರ ಕ್ರಾಂತಿ ಕಾಶ್ಮೀರ ಕ್ರಾಂತಿಯ ಬಗ್ಗೆ ಕಳೆದ ಕೆಲವು ದಿನಗಳಿಂದ ಸೂಚನೆ ಇತ್ತಾದರೂ ಏನು ಎಂಬ ಬಗ್ಗೆ ಟಾಪ್ ಸೀಕ್ರೆಟ್ ಕಾಯ್ದುಕೊಂಡಿದ್ದು ಸರಕಾರದ ಹೆಗ್ಗಳಿಕೆ. ಭಾರಿ ಪ್ರಮಾಣದ ಸೇನೆ ನಿಯೋಜನೆ, ಉಗ್ರರ ಭೀತಿ ಹೆಸರಲ್ಲಿ ಅಮರನಾಥ ಯಾತ್ರೆ ರದ್ದು.. ಹೀಗೆ ಭದ್ರತೆ ಹೆಚ್ಚಿಸಿ ಅಂತಿಮವಾಗಿ ಮಾಸ್ಟರ್ ಸ್ಟ್ರೋಕ್ ನೀಡಲಾಗಿದೆ ಕಾಶ್ಮೀರದ ಸ್ಥಿತಿ ಹೇಗಿದೆ? ■ ಉಮರ್, ಮುಫ್ತಿ ಪೊಲೀಸ್ ವಶ ■ ಕಣಿವೆಯಲ್ಲಿ ಸದ್ದೇ ಇಲ್ಲ, ನೀರವ ■ ಇನ್ನೂ 8ಸಾವಿರ ಯೋಧರ ರವಾನೆ ಜಮ್ಮು ಮತ್ತು ಕಾಶ್ಮೀರದಲ್ಲಾಗಿರುವ ಐತಿಹಾಸಿಕ ಅನ್ಯಾಯಗಳನ್ನು ಮತ್ತು ಅಲ್ಲಿನ ಸಹೋದರ-ಸಹೋದರಿಯರ ಬಗ್ಗೆ ನಮಗಿರುವ ದೃಷ್ಟಿಕೋನವನ್ನು ಸ್ಪಷ್ಟವಾಗಿ ನಿರೂಪಿಸಿವೆ - ನರೇಂದ್ರ ಮೋದಿ ಪಿಎಂ ಕಾಶ್ಮೀರದಲ್ಲಿ ಇಲ್ಲದೆ ಇರುತ್ತಿದ್ದರೆ ಕಣಿವೆಯಲ್ಲಿ 41,000 ಜನರು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ, ಇಡೀ ದೇಶದಲ್ಲಿ ಆಗಿರುವ ಅಭಿವೃದ್ಧಿಯಿಂದ ಇಲ್ಲಿನ ಜನರು ವಂಚಿತರಾಗುತ್ತಿರಲಿಲ್ಲ- ಅಮಿತ್ ಶಾ ಗೃಹ ಸಚಿವ ಮುಂದೆ ಅಯೋಧ್ಯೆ, ಸಮಾನ ಸಂಹಿತೆ? 370ನೇ ವಿಧಿ, ಅಯೋಧ್ಯೆ ಮತ್ತು ಸಮಾನ ನಾಗರಿಕ ಸಂಹಿತೆ ಬಿಜೆಪಿಯ 3 ಪ್ರಮುಖ ಟಾರ್ಗೆಟ್ ಆಗಿದ್ದು, ಮುಂದೆ ಅಯೋಧ್ಯೆ ವಿಷಯದಲ್ಲೂ ಇಂತಹುದೇ ದೃಢ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ದೇಶದೆಲ್ಲೆಡೆ ಸಂಭ್ರಮ ಕಾಶ್ಮೀರ ಕ್ರಾಂತಿ ಸಂಭವಿಸುತ್ತಿದ್ದಂತೆಯೇ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ದಿಲ್ಲಿಯಲ್ಲಿ ಕಾಶ್ಮೀರಿ ಪಂಡಿತರು ಸಂಭ್ರಮೋಲ್ಲಾಸ ಆಚರಿಸಿದರು. ಪರಿಣಾಮವೇನು ■ ಜಮ್ಮು-ಕಾಶ್ಮೀರ, ಲಡಾಖ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ■ ಜಮ್ಮು-ಶ್ರೀನಗರಕ್ಕೆ ಮಾತ್ರ ಅಸೆಂಬ್ಲಿ ಸ್ಥಾನಮಾನ ■ ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಧ್ವಜವಿಲ್ಲ ■ ಎಲ್ಲರಿಗೂ ಆಸ್ತಿ ಖರೀದಿ-ಮಾರಾಟ, ನೆಲೆಸುವ ಹಕ್ಕು ■ ಮಹಿಳೆ, ಮಕ್ಕಳಿಗೂ ಸಿಗಲಿದೆ ರಾಜ್ಯದಲ್ಲಿ ವಾಸಿಸುವ ಹಕ್ಕು ■ ಇತರ ಭಾಗದ ಜನರೂ ಇಲ್ಲಿ ಉದ್ಯೋಗ ಮಾಡಬಹುದು ■ ಕೇಂದ್ರ ಸರಕಾರಕ್ಕೆ ರಾಜ್ಯದ ಮೇಲೆ ಸಂಪೂರ್ಣ ಅಧಿಕಾರ ■ 6 ವರ್ಷದ ಬದಲು ಇನ್ನು 5 ವರ್ಷಕ್ಕೊಮ್ಮೆ ಚುನಾವಣೆ ಒಂದೇ ಒಂದು ಸಹಿಯಿಂದ ರದ್ದಾಯ್ತು 370ನೇ ವಿಧಿ ಕಳೆದ 72 ವರ್ಷಗಳಿಂದ ಚರ್ಚೆಯಲ್ಲಿರುವ, ಅಷ್ಟು ಸುಲಭದಲ್ಲಿ ರದ್ದುಪಡಿಸಲಾಗದು ಎಂದೆಲ್ಲ ಹೇಳಲಾಗುತ್ತಿದ್ದ 370ನೇ ವಿಧಿ ಕೇವಲ ರಾಷ್ಟ್ರಪತಿಗಳ ಒಂದು ಸಹಿಯಿಂದ ಇತಿಹಾಸದ ಪುಟ ಸೇರಿತು. 370ನೇ ವಿಧಿಯ ಮೂರನೇ ಅಂಶದ-370(3)ಪ್ರಕಾರ, ರಾಷ್ಟ್ರಪತಿಧಿಗಳು ಈ ವಿಧಿ ರದ್ದಾಗಿದೆ ಎಂದು ಘೋಷಿಸುವ ಅಧಿಕಾರವನ್ನು ಹೊಂದಿದ್ದಾರೆ. ಇದಕ್ಕೆ ಜಮ್ಮು ಮತ್ತು ಕಾಶ್ಮೀರದ ಅಸೆಂಬ್ಲಿಯ ಅನುಮತಿಯೊಂದು ಬೇಕಷ್ಟೆ. ಈಗ ಅಲ್ಲಿರುವುದು ರಾಜ್ಯಪಾಲರ ಆಡಳಿತ. ಅದನ್ನೇ ಬಳಸಿಕೊಂಡು ಮೋದಿ-ಶಾ ಕಮಾಲ್ ಮಾಡಿದ್ದಾರೆ. ಇದನ್ನು ಕೇವಲ ನಿರ್ಣಯವಾಗಿ ಸಂಸತ್ತಿನ ಮುಂದೆ ಮಂಡಿಸಲಿಕ್ಕಿದೆಯೇ ಹೊರತು ವಿಧೇಯಕವಾಗಿ ಅಲ್ಲ. ಸಂಸತ್ತು ಇದಕ್ಕೆ ಒಪ್ಪಬೇಕೆಂದೂ ಇಲ್ಲ! ಸಂಬಂಧ ಹದಗೆಡಲಿದೆ ಎಂದ ಪಾಕ್ ಪ್ರಧಾನಿ ಇಸ್ಲಾಮಾಬಾದ್: 370ನೇ ವಿಧಿ ರದ್ದತಿಯು ಅಕ್ರಮ ಮತ್ತು ಇದು ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಇನ್ನಷ್ಟು ಹದಗೆಡಿಸಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಈ ನಡುವೆ, ಜಮ್ಮು-ಕಾಶ್ಮೀರದ ಬದಲಾವಣೆಗಳ ಬಗ್ಗೆ ಚರ್ಚಿಸಲು ಪಾಕಿಸ್ತಾನ ಸಂಸತ್ತಿನ ಜಂಟಿ ಅಧಿವೇಶನವನ್ನು ಮಂಗಳವಾರ ಕರೆಯಲಾಗಿದೆ. 370ನೇ ವಿಧಿ ರದ್ದತಿಯಿಂದ ಸಂತಸವಾಗಿದೆ, ಇದು ರಾಷ್ಟ್ರೀಯ ಸಮಗ್ರತೆ ಬಲಗೊಳಿಸುವ ಕಡೆಗಿನ ದಿಟ್ಟ ಹೆಜ್ಜೆ - ಎಲ್.ಕೆ. ಆಡ್ವಾಣಿ, ಬಿಜೆಪಿ ಹಿರಿಯ ನಾಯಕ
from India & World News in Kannada | VK Polls https://ift.tt/33aj30x