ಕೇವಲ ಒಂದೇ ಒಂದು ಸಹಿಯಿಂದ ವಿಧಿವಶವಾಯಿತು 370 ಕಲಂ!

ಹೊಸದಿಲ್ಲಿ: ಕಳೆದ 72 ವರ್ಷಗಳಿಂದ ಚರ್ಚೆಯಲ್ಲಿರುವ, ಅಷ್ಟು ಸುಲಭದಲ್ಲಿ ರದ್ದು ಪಡಿಸಲಾಗದು ಎಂದೆಲ್ಲ ಹೇಳಲಾಗುತ್ತಿದ್ದ 370ನೇ ವಿಧಿ ಕೇವಲ ರಾಷ್ಟ್ರಪತಿಗಳ ಒಂದು ಸಹಿಯಿಂದ ಇತಿಹಾಸದ ಪುಟ ಸೇರಿತು. 370ನೇ ವಿಧಿಯ ಮೂರನೇ ಅಂಶದ-370(3)ಪ್ರಕಾರ, ರಾಷ್ಟ್ರಪತಿಗಳು ಈ ವಿಧಿ ರದ್ದಾಗಿದೆ ಎಂದು ಘೋಷಿಸುವ ಅಧಿಕಾರವನ್ನು ಹೊಂದಿದ್ದಾರೆ. ಇದಕ್ಕೆ ಜಮ್ಮು ಮತ್ತು ಕಾಶ್ಮೀರದ ಅಸೆಂಬ್ಲಿಯ ಅನುಮತಿಯೊಂದು ಬೇಕಷ್ಟೆ. ಈಗ ಅಲ್ಲಿರುವುದು ರಾಜ್ಯಪಾಲರ ಆಡಳಿತ. ಅದನ್ನೇ ಬಳಸಿಕೊಂಡು ಮೋದಿ-ಶಾ ಕಮಾಲ್‌ ಮಾಡಿದ್ದಾರೆ. ಇದನ್ನು ಕೇವಲ ನಿರ್ಣಯವಾಗಿ ಸಂಸತ್ತಿನ ಮುಂದೆ ಮಂಡಿಸಲಿಕ್ಕಿದೆಯೇ ಹೊರತು ವಿಧೇಯಕವಾಗಿ ಅಲ್ಲ. ಸಂಸತ್ತು ಇದಕ್ಕೆ ಒಪ್ಪಬೇಕೆಂದೂ ಇಲ್ಲ! ಸೀಕ್ರೆಟ್‌ ಆಗಿ ನಡೆಯಿತು ಕಾಶ್ಮೀರ ಕ್ರಾಂತಿ ಕಾಶ್ಮೀರ ಕ್ರಾಂತಿಯ ಬಗ್ಗೆ ಕಳೆದ ಕೆಲವು ದಿನಗಳಿಂದ ಸೂಚನೆ ಇತ್ತಾದರೂ ಏನು ಎಂಬ ಬಗ್ಗೆ ಟಾಪ್‌ ಸೀಕ್ರೆಟ್‌ ಕಾಯ್ದುಕೊಂಡಿದ್ದು ಸರಕಾರದ ಹೆಗ್ಗಳಿಕೆ. ಭಾರಿ ಪ್ರಮಾಣದ ಸೇನೆ ನಿಯೋಜನೆ, ಉಗ್ರರ ಭೀತಿ ಹೆಸರಲ್ಲಿ ಅಮರನಾಥ ಯಾತ್ರೆ ರದ್ದು.. ಹೀಗೆ ಭದ್ರತೆ ಹೆಚ್ಚಿಸಿ ಅಂತಿಮವಾಗಿ ಮಾಸ್ಟರ್‌ ಸ್ಟ್ರೋಕ್‌ ನೀಡಲಾಗಿದೆ. ದೇಶದೆಲ್ಲೆಡೆ ಸಂಭ್ರಮ ಕಾಶ್ಮೀರ ಕ್ರಾಂತಿ ಸಂಭವಿಸುತ್ತಿದ್ದಂತೆಯೇ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ದಿಲ್ಲಿಯಲ್ಲಿ ಕಾಶ್ಮೀರಿ ಪಂಡಿತರು ಸಂಭ್ರಮೋಲ್ಲಾಸ ಆಚರಿಸಿದರು. ನಿನ್ನೆ (ಸೋಮವಾರ) ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದ ಜಮ್ಮು-ಕಾಶ್ಮೀರ ಪುನರ್‌ ರಚನೆ ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಈ ಮೂಲಕ ಜಮ್ಮು-ಕಾಶ್ಮೀರ ವಿಧಾನಸಭೆ ಒಳಗೊಂಡಿರುವ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಕ್ ವಿಧಾನಸಭೆ ಒಳಗೊಂಡಿರದ ಕೇಂದ್ರಾಡಳಿತ ಪ್ರದೇಶವಾಗಿದೆ.


from India & World News in Kannada | VK Polls https://ift.tt/31n2g8F

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...