ಬೆಂಗಳೂರಲ್ಲಿ ಬಾಂಗ್ಲಾ ವಲಸಿಗರ ಹಾವಳಿ: ತ್ಯಾಜ್ಯ ಗುತ್ತಿಗೆದಾರರೇ ಪೋಷಕರು..?

ಬಾಲಕೃಷ್ಣ ಹೊರಮಾವು ಕೆ. ಆರ್‌. ಪುರ (): ಬಾಂಗ್ಲಾ ವಲಸಿಗರಿಗೆ ತ್ಯಾಜ್ಯ ಗುತ್ತಿಗೆದಾರರು ಬೆಂಬಲವಾಗಿ ನಿಂತಿದ್ದಾರೆ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ. ತ್ಯಾಜ್ಯ ಸಾಗಿಸುವ ವಾಹನ ನೆಲೆಸಿರುವ ಶೆಡ್‌ ಬಳಿ ತೆರಳುತ್ತಿರುವುದು ಹಾಗೂ ಅಲ್ಲಿಯೇ ನಿಂತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಾಮಮೂರ್ತಿ ನಗರ ವಾರ್ಡ್‌ನ ಕಲ್ಕೆರೆ ಕೆರೆ ಸಮೀಪ ಶೆಡ್‌ನಲ್ಲಿ ನೂರಾರು ಬಾಂಗ್ಲಾ ನಿವಾಸಿಗಳು ನೆಲೆಸಿದ್ದಾರೆ. ನಾನಾ ಕಡೆಗಳಲ್ಲಿ ತ್ಯಾಜ್ಯ ಸಂಗ್ರಹಿಸುವ ವಾಹನ ನಿತ್ಯವೂ ಬಾಂಗ್ಲಾ ನಿವಾಸಿಗಳು ನೆಲೆಸಿರುವ ಶೆಡ್‌ ಬಳಿ ಅಕ್ರಮವಾಗಿ ವಿಲೇವಾರಿ ಮಾಡುತ್ತದೆ. ನಿಯಮದ ಪ್ರಕಾರ ಗುತ್ತಿಗೆದಾರರು ಸಂಸ್ಕರಣೆ ಘಟಕ ಇಲ್ಲವೇ ಭೂ ಭರ್ತಿ ಘಟಕಗಳಲ್ಲಿ ಕಸವನ್ನು ವಿಲೇವಾರಿ ಮಾಡಬೇಕು. ಆದರೆ, ದೂರ ಸಾಗಬೇಕು ಎಂಬ ಕಾರಣಕ್ಕೆ ಗುತ್ತಿಗೆದಾರರು ತ್ಯಾಜ್ಯವನ್ನು ಬಾಂಗ್ಲಾ ವಲಸಿಗರಿಗೆ ಹಸ್ತಾಂತರಿಸುತ್ತಿದ್ದಾರೆ. ಕಡಿಮೆ ಕೂಲಿ ಕೊಟ್ಟು ದುಡಿಸಬಹುದು ಎಂಬ ಕಾರಣಕ್ಕೆ ಗುತ್ತಿಗೆದಾರರು ಬಾಂಗ್ಲಾ ವಲಸಿಗರನ್ನೇ ನೆಚ್ಚಿಕೊಂಡಿದ್ದಾರೆ. ಕಸ ಸಂಸ್ಕರಣೆಗಾಗಿ ಪ್ರತಿ ವರ್ಷ ಮತ್ತಷ್ಟು ಜನರನ್ನು ಕರೆಸಿಕೊಳ್ಳುತ್ತಿದ್ದಾರೆ. ವಲಸಿಗರಿಗೆ ಶೆಡ್‌ ಕಟ್ಟಿಕೊಳ್ಳಲು ಕೂಡ ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಕೆಲವೆಡೆ ಭೂ ಮಾಲೀಕರೊಂದಿಗೆ ಮಾತನಾಡಿ ಆಶ್ರಯ ಕಲ್ಪಿಸಿಕೊಡುತ್ತಿದ್ದಾರೆ ಎಂಬ ಆರೋಪವೂ ಇದೆ. ಕೆರೆ, ರಾಜಕಾಲುವೆಗೆ ತ್ಯಾಜ್ಯ: ಗುತ್ತಿಗೆದಾರರಿಂದ ಪಡೆದ ಕಸದಲ್ಲಿ ಬೆಲೆ ಬರುವ ವಸ್ತುಗಳನ್ನು ಮಾತ್ರ ಆಯ್ದುಕೊಳ್ಳುವ ವಲಸಿಗರು ಉಳಿದ ವಸ್ತುಗಳನ್ನು ಕೆರೆ, ರಾಜಕಾಲುವೆಗೆ ಎಸೆಯುತ್ತಿದ್ದಾರೆ. 50 ಕೋಟಿ ರೂ. ಅನುದಾನದಲ್ಲಿ ಪುನಶ್ಚೇತನಗೊಳ್ಳುತ್ತಿರುವ ರಾಂಪುರ ಕೆರೆ ವಲಸಿಗರು ಎಸೆದ ತ್ಯಾಜ್ಯದಿಂದ ಮತ್ತೆ ಕಲುಷಿಗೊಂಡಿದೆ. ಹಲವೆಡೆ ರಾಜಕಾಲುವೆ ಕಟ್ಟಿಕೊಳ್ಳುವ ಸಮಸ್ಯೆ ಉಂಟಾಗುತ್ತಿದೆ. ಪ್ಲಾಸ್ಟಿಕ್‌, ರಬ್ಬರ್‌ನಂತಹ ವಸ್ತುಗಳನ್ನು ಸುಡುವುದರಿಂದಲೂ ಪರಿಸರ ಮಾಲಿನ್ಯವಾಗುತ್ತಿದೆ. ಗಡಿ ದಾಟಿ ನೆಲೆಸಲು 5000 ರೂ..!: ಬಾಂಗ್ಲಾ ದೇಶೀಯರು ಭಾರತದಲ್ಲಿ ಬಂದು ನೆಲೆಸುವುದು ಕಷ್ಟವೇನಲ್ಲ. ಕೇವಲ 5,000 ರೂ. ಕೊಟ್ಟರೆ ಎಲ್ಲ ವ್ಯವಸ್ಥೆಯನ್ನು ಏಜೆಂಟರು ಮಾಡಿಕೊಡುತ್ತಾರೆ ಎನ್ನುತ್ತವೆ ಮೂಲಗಳು. ಬಾಂಗ್ಲಾ ಗಡಿ ದಾಟಿ ಬಂದವರು ಬೆಂಗಳೂರಿನಂತಹ ಊರಿಗೆ ನೇರವಾಗಿ ಬರುವುದಿಲ್ಲ. ಏಜೆಂಟರ ಸೂಚನೆಯಂತೆ, ಗಡಿ ದಾಟಿ ಬಂದವರು ಪಶ್ಚಿಮ ಬಂಗಾಳ, ಅಸ್ಸಾಂ ಮತ್ತಿತರೆಡೆ ಕೆಲ ತಿಂಗಳು ನೆಲೆಸುತ್ತಾರೆ. ಅಲ್ಲಿ ಆಧಾರ್‌ ಕಾರ್ಡ್‌ನಂತಹ ದಾಖಲೆಗಳನ್ನು ಏಜೆಂಟರೇ ಮಾಡಿಸಿ ಕೊಡುತ್ತಾರೆ. ಭಾರತದ ನಿವಾಸಿ ಎಂಬ ದಾಖಲೆ ಸಿಕ್ಕ ಬಳಿಕ ಬೇರೆ ನಗರಗಳಿಗೆ ಬಂದು ನೆಲೆಸುತ್ತಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ಕೆ. ಆರ್‌. ಪುರ ಕಲ್ಕೆರೆ ಕೆರೆ ಬಳಿ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ. ಬಾಂಗ್ಲಾ ವಾಸಿಗಳು ನೆಲೆಸಿರುವ ಶೆಡ್‌ ಬಳಿಗೇ ತ್ಯಾಜ್ಯ ಸಂಗ್ರಹದ ವಾಹನಗಳು ಬರುತ್ತವೆ..! 'ಬಾಂಗ್ಲಾ ದೇಶದ ವಲಸಿಗರು ಕಸ ವಿಂಗಡಣೆ ಸೋಗಿನಲ್ಲಿ ಬಂದು ಸೇರಿಕೊಂಡಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ತಾಣವಾಗಿ ಮಾರ್ಪಾಡು ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಆತಂಕವನ್ನೂ ಸೃಷ್ಟಿಸಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಹಿಂದೂ ಜಾಗರಣ ವೇದಿಕೆಯ ಪ್ರಶಾಂತ್‌ ಆಗ್ರಹಿಸಿದ್ದಾರೆ.


from India & World News in Kannada | VK Polls https://ift.tt/3FrE4XF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...